ಗುಜರಾತ್ನಲ್ಲಿ ರಾಹುಲ್ ಮೇಲೆ ಹಲ್ಲೆಗೆ ಪುದುಚೇರಿ ಸಚಿವನ ಖಂಡನೆ
Team Udayavani, Aug 5, 2017, 11:36 AM IST
ಪುದುಚೇರಿ : ಗುಜರಾತ್ ಪ್ರವಾಹ ಪೀಡಿತರಿಗೆ ಸಾಂತ್ವನ ಹೇಳುವುದಕ್ಕಾಗಿ ಅಲ್ಲಿಗೆ ತೆರಳಿದ್ದ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರ ಕಾರಿನ ಮೇಲೆ ಕಲ್ಲೆಸೆಯಲಾದ ಘಟನೆಯನ್ನು ಪುದುಚೇರಿ ಸಚಿವ ಎ ನಮಃಶಿವಾಯಂ ಅವರು ತೀವ್ರವಾಗಿ ಖಂಡಿಸಿದ್ದಾರೆ. ಇದು ಅತ್ಯಂತ ನಾಚಿಕೆಗೇಡಿನ ಮತ್ತು ಅಕ್ಷಮ್ಯ ಕೃತ್ಯವಾಗಿದೆ ಎಂದವರು ಟೀಕಿಸಿದ್ದಾರೆ.
“ಕೋಮು ಭಾವನೆಗಳಿಂದ ಮತ್ತು ತಮ್ಮ ಪಕ್ಷದ ಸಮೀಪ ದೃಷ್ಟಿಯ ನೀತಿಗಳಿಂದ ಪ್ರಭಾವಿತರಾಗಿರುವ ಬಿಜೆಪಿಯ ಬೆಂಬಲಿಗರು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರ ಕಾರಿನ ಮೇಲೆ ಕಲ್ಲೆಸೆದು ದಾಳಿ ನಡೆಸಿರುವುದು ಅತ್ಯಂತ ಹೇಯ ಹಾಗೂ ದುರದೃಷ್ಟಕರ ಕೃತ್ಯವಾಗಿದೆ’ ಎಂದು ಸಚಿವ ನಮಃಶಿವಾಯಂ ಅವರು ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ ಖಂಡಿಸಿದ್ದಾರೆ.
“ಬಿಜೆಪಿ ಕಾರ್ಯಕರ್ತರ ಈ ಉದ್ಧಟನದ ಕೃತ್ಯವನ್ನು ಯಾರೂ ಒಪ್ಪುವುದಿಲ್ಲ. ಇದು ಆಕ್ಷೇಪಾರ್ಹ ಮತ್ತು ಜುಗುಪ್ಸೆಯ ಕೃತ್ಯವಾಗಿದೆ’ ಎಂದವರು ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
IPL; ಇಂದು ಚಿನ್ನಸ್ವಾಮಿಯಲ್ಲಿ ಆರ್ಸಿಬಿ ಬಲೆಗೆ ಬೀಳುತ್ತಾ ಕೋಲ್ಕತಾ?
Raichur Lok Sabha Constituency: ಎಸ್ಟಿ ಮೀಸಲು ಕ್ಷೇತ್ರದಲ್ಲಿ 14 ಸಲ ಗೆದ್ದ ಕಾಂಗ್ರೆಸ್
Subramanya: ಮಗು ಮಲಗಿದೆ ಜೋರಾಗಿ ಮಾತನಾಡಬೇಡಿ ಎಂದಿದಕ್ಕೆ ಕತ್ತಿಯಿಂದ ಹಲ್ಲೆ
Politics: ಸುಮಲತಾ – ನಾವು ಶಾಶ್ವತ ಶತ್ರುಗಳಲ್ಲ: ಕುಮಾರಸ್ವಾಮಿ
Sullia: ಕೂಜಿಮಲೆ ಪ್ರದೇಶದಲ್ಲಿ ಕಾಣಿಸಿಕೊಂಡಾಕೆ ನಕ್ಸಲ್ ಅಲ್ಲ