ಅರ್ಥವಾಗುವಂತೆ ತೀರ್ಪು
Team Udayavani, Jul 30, 2018, 8:10 AM IST
ಹೊಸದಿಲ್ಲಿ: ನ್ಯಾಯಾಲಯಗಳು ಕೇಸು ದಾಖಲಿಸಿದ ವ್ಯಕ್ತಿಗಳು ಯಾವ ಕಾರಣದಿಂದಾಗಿ ಸೋತೆವು ಅಥವಾ ಗೆದ್ದೆವು ಎಂದು ಅರ್ಥವಾಗುವ ರೀತಿಯಲ್ಲಿ ಆದೇಶ ನೀಡಬೇಕು ಎಂದು ಸುಪ್ರೀಂಕೋರ್ಟ್ ಅಭಿಪ್ರಾಯಪಟ್ಟಿದೆ. ಇಂದೋರ್ ನಲ್ಲಿರುವ ಮಧ್ಯಪ್ರದೇಶ ಹೈಕೋರ್ಟ್ ಪ್ರಾವಿಡೆಂಟ್ ಫಂಡ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪುನರ್ ವಿಚಾರಣೆ ನಡೆಸಬೇಕು ಎಂಬುದನ್ನು ಆದೇಶ ನೀಡಿದ ಸಂದರ್ಭದಲ್ಲಿ ನ್ಯಾ| ಎ.ಎಂ.ಸಂಪ್ರ ಮತ್ತು ನ್ಯಾ.ನವೀನ್ ಸಿನ್ಹಾ ನೇತೃತ್ವದ ಸುಪ್ರೀಂಕೋರ್ಟ್ ಪೀಠ ಈ ಆದೇಶ ನೀಡಿದೆ.