ಡಿಕೆಶಿ ಜಾಮೀನು ಅರ್ಜಿ ವಿಚಾರಣೆ ಅ.17ಕ್ಕೆ ಮುಂದೂಡಿಕೆ
Team Udayavani, Oct 15, 2019, 5:10 PM IST
ನವದೆಹಲಿ : ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲು ಪಾಲಾಗಿರುವ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರ ಜಾಮೀನು ಅರ್ಜಿಯ ವಿಚಾರಣೆಯನ್ನು ದೆಹಲಿ ಹೈಕೋರ್ಟ್ ಅಕ್ಟೋಬರ್ 17ಕ್ಕೆ ಮುಂದೂಡಿದೆ.
ದೆಹಲಿ ಹೈ ಕೋರ್ಟ್ ನಲ್ಲಿ ಡಿಕೆಶಿ ಜಾಮೀನು ಅರ್ಜಿಯ ವಿಚಾರಣೆಯನ್ನು ಮಂಗಳವಾರ ನಿಗದಿಪಡಿಸಿತ್ತು, ಡಿಕೆಶಿ ಪರ ವಕೀಲ ಅಭಿಷೇಕ್ ಮನುಸಿಂಘ್ವಿ ಅವರು ವಾದ ಮಂಡಿಸಬೇಕಿತ್ತು. ಆದರೆ, ಅವರು ಕೋರ್ಟ್ ಗೆ ಆಗಮಿಸುವುದು ತಡವಾದ ಕಾರಣ ನ್ಯಾಯಾಲಯ ಅರ್ಜಿ ವಿಚಾರಣೆಯನ್ನು ಕೆಲಕಾಲ ಮುಂದೂಡಿತ್ತು. ನಂತರದಲ್ಲಿ ಸಿದ್ದಾರ್ಥ ಲೂತ್ರ ವಾದ ಮಂಡನೆ ಮಾಡಿದರು.
ಅನಾವಶ್ಯಕವಾಗಿ ಪಿಎಂಎಲ್ಎ ಕೇಸ್ ಹಾಕಲಾಗಿದೆ ಈ ಪ್ರಕರಣದಲ್ಲಿ ಬಂಧಿಸಿ ವಿಚಾರಣೆ ಮಾಡುವ ಅಗತ್ಯ ಇರಲಿಲ್ಲ ಎಂದು ವಾದ ಮಂಡಿಸಿದರು.
ಬಳಿಕ ಡಿಕೆಶಿ ಪರ ವಕೀಲ ಅಭಿಷೇಕ್ ಮನುಸಿಂಘ್ವಿ ಕೋರ್ಟ್ ಗೆ ಆಗಮಿಸಿ ತಮ್ಮ ವಾದ ಮುಂದುವರೆಸಿದರು.
ತಮ್ಮ ವಾದ ಮಂಡನೆ ವೇಳೆ ಸಿಂಘ್ವಿ, ಆದಾಯ ತೆರಿಗೆ ಆಯಕ್ಟ್ ನಲ್ಲಿ ಕೇಸ್ ದಾಖಲಿಸಲಾಗಿದೆ. 120B ಶೆಡ್ಯೂಲ್ ನಲ್ಲಿ ಕೇಸು ದಾಖಲಿಸಲು ಸಾಧ್ಯವಿಲ್ಲ. ಡಿಕೆಶಿ 45 ದಿನಗಳ ಕಾಲ ಕಸ್ಟಡಿಯಲ್ಲಿದ್ದಾರೆ. ಇದು ಬಂಧಿಸುವ ಕೇಸ್ ಅಲ್ಲ ಎಂದು ತಿಳಿಸಿದರು.
ಡಿಕೆಶಿ ಅವರು ನೀಡಿರುವ ಹೇಳಿಕೆಯನ್ನು ಹೇಗೆ ಬದಲಿಸಲು ಸಾಧ್ಯ ಇಡಿ ಅಧಿಕಾರಿಗಳು ಡಿಕೆಶಿ ಸಾಕ್ಷ್ಯನಾಶ ಮಾಡುತ್ತಾರೆಂಬ ಆರೋಪ ಮಾಡಿದ್ದಾರೆ. ಇದು ಸರಿಯಲ್ಲ, ರಾಜಕೀಯದಲ್ಲಿದ್ದ ಮಾತ್ರಕ್ಕೆ ಅವರು ಸಾಕ್ಷ್ಯನಾಶ ಮಾಡುತ್ತಾರೆಂದು ಹೇಳುವುದಕ್ಕೆ ಆಗುವುದಿಲ್ಲ ಎಂದು ವಾದಿಸಿದರು .
ಡಿಕೆಶಿ ಸಮಾಜದಲ್ಲಿ ಗುರುತಿಸಿಕೊಂಡಿರುವ ವ್ಯಕ್ತಿ ಅವರು ಯಾವತ್ತೂ ಓಡಿ ಹೋಗುವವರಲ್ಲ, ಅಲ್ಲದೆ ಅವರು ಒಕ್ಕಲಿಗ ಸಮುದಾದವರು ಸಹಜವಾಗಿ ಅವರಲ್ಲಿ ಸಾಕಷ್ಟು ಜಾಮೀನು ಹೊಂದಿರುತ್ತಾರೆ, ಜೊತೆಗೆ ಅವರ ತಂದೆಯಿಂದಲೂ ಹೆಚ್ಚಿನ ಆಸ್ತಿ ಡಿಕೆಶಿ ಹೆಸರಿಗೆ ಬಂದಿತ್ತು ಹಾಗಾಗಿ ಅವುಗಳನ್ನು ಅಕ್ರಮ ಅಸ್ತಿ ಎಂದು ಹೇಳಲು ಸಾಧ್ಯವಿಲ್ಲ.
ಚುನಾವಣೆ ಆಯೋಗಕ್ಕೂ ಯಾವುದೇ ರೀತಿಯಲ್ಲಿ ತಪ್ಪು ಮಾಹಿತಿ ನೀಡಿಲ್ಲ ಒಂದು ವೇಳೆ ತಪ್ಪು ಮಾಹಿತಿ ನೀಡಿದ್ದಾಗಿದ್ದಲ್ಲಿ ಚುನಾವಣಾ ಆಯೋಗ ಸುಮನಿರುತ್ತಿತ್ತಾ ಎಂದು ವಾದ ಮಂಡಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha ಅಖಾಡಕ್ಕೆ ಲಾಲು ಪ್ರಸಾದ್ ಪುತ್ರಿ ಡಾ| ರೋಹಿಣಿ ಹೆಜ್ಜೆ
Cyber attack: ಭದ್ರತೆ ಹೆಚ್ಚಿಸಲು ಬ್ಯಾಂಕ್ಗಳಿಗೆ ಆರ್ಬಿಐ ಸೂಚನೆ
ED; ದಿಲ್ಲಿ ಲಿಕ್ಕರ್ ಕೇಸ್ ಡೀಲ್ಗೆ ಕೆಸಿಆರ್ ಪುತ್ರಿ ಕವಿತಾ ಸಂಚು
Himachal Pradesh; 6 ಕೈ ಶಾಸಕರ ಅನರ್ಹತೆ ಆದೇಶಕ್ಕೆ ತಡೆ ಇಲ್ಲ: ಸುಪ್ರೀಂ
Gujarat University;ದಾಳಿಯ ಬಳಿಕ ವಿದೇಶಿ ವಿದ್ಯಾರ್ಥಿಗಳ ಸ್ಥಳಾಂತರ: ಭದ್ರತೆ ಬಿಗಿ