ಕುಂಭಮೇಳಕ್ಕೆ ಮದ್ಯ, ಮಾಂಸ ಸೇವಿಸದ 20,000 ಶಾಕಾಹಾರಿ ಪೊಲೀಸರು
Team Udayavani, Jan 7, 2019, 6:12 AM IST
ಲಕ್ನೋ : ಇದೇ ಜನವರಿ 15ರಿಂದ ಉತ್ತರ ಪ್ರದೇಶದ ಪ್ರಯಾಗ್ರಾಜ್ ನಲ್ಲಿ ಆರಂಭಗೊಳ್ಳುವ ಕುಂಭ ಮೇಳಕ್ಕೆ ಪೂರ್ಣ ಪ್ರಮಾಣದ ಸಿದ್ಧತೆಗಳು ಇದೀಗ ಅಂತಿಮ ಹಂತದಲ್ಲಿದ್ದು ಉತ್ತರ ಪ್ರದೇಶ ಪೊಲೀಸರು ಕುಂಭ ಮೇಳದ ಯಶಸ್ಸಿಗಾಗಿ ಬಿಗಿ ಭದ್ರತೆ, ಕಾನೂನು ಮತ್ತು ಸುವ್ಯವಸ್ಥೆಗಾಗಿ ಪೂರ್ಣ ಪ್ರಮಾಣದ ವ್ಯವಸ್ಥೆಯನ್ನು ಆಯೋಜಿಸುತ್ತಿದ್ದಾರೆ.
ಮದ್ಯ ಮತ್ತು ಮಾಂಸಾಹಾರಿ ಸೇವಿಸದ ಸುಮಾರು 20,000 ಪೊಲೀಸ್ ಸಿಬಂದಿಗಳನ್ನು ಕುಂಭಮೇಳ ಕರ್ತವ್ಯಕ್ಕೆ ನಿಯೋಜಿಸಲಾಗಿರುವುದಾಗಿ ವರದಿಗಳು ತಿಳಿಸಿವೆ.
ಕುಂಭ ಮೇಳಕ್ಕೆ ದೇಶ ವಿದೇಶಗಳಿಂದ ಲಕ್ಷಾಂತರ ಭಕ್ತರು, ಯಾತ್ರಾರ್ಥಿಗಳು ಮತ್ತು ಪ್ರವಾಸಿಗರು ಬರುವ ಪ್ರಯಾಗ್ರಾಜ್ ಈಚಿನ ವರೆಗೂ ಅಲಹಾಬಾದ್ ಎಂದೇ ಕರೆಯುಲ್ಪಡುತ್ತಿತ್ತು.
ಕುಂಭ ಮೇಳದ ಕಾನೂನು ಮತ್ತು ಸುವ್ಯವಸ್ಥೆ ಪರಿಪಾಲನೆಗೆ ಮದ್ಯ, ಮಾಂಸಾಹಾರ ಸೇವಿಸದ ಪೂರ್ಣ ಶಾಕಾಹಾರಿ ಪೊಲೀಸ್ ಸಿಬಂದಿಗಳನ್ನು ಸುಮಾರು 20,000 ಸಂಖ್ಯೆಯಲ್ಲಿ ನಿಯೋಜಿಸಲಾಗಿದೆ ಎಂದು ಉತ್ತರ ಪ್ರದೇಶ ಡಿ ಐಜಿ ಕೆ ಪಿ ಸಿಂಗ್ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಹೇಳಿದರು.
ಕುಂಭ ಮೇಳದ ಸಂದರ್ಭದಲ್ಲಿ ಪ್ರಯಾಗ್ರಾಜ್ ಗೆ ಬರುವ ಜನರು ತಮ್ಮೊಂದಿಗೆ ಅಧಿಕೃತ ಗುರುತು ಪತ್ರ ಹೊಂದಿರಬೇಕು. ಮಾತ್ರವಲ್ಲದೆ ತುರ್ತು ಸಂದರ್ಭಕ್ಕೆ ಅನುಕೂಲವಾಗುವಂತೆ ತಮ್ಮ ಕುಟುಂಬದ ಸದಸ್ಯರೋರ್ವರ ಮೊಬೈಲ್ ನಂಬರನ್ನು ಕೂಡ ಹೊಂದಿರಬೇಕು ಎಂದು ಸಿಂಗ್ ಹೇಳಿದರು.
ಕುಂಭ ಮೇಳಕ್ಕಾಗಿ ಸುಮಾರು 12 ಕೋಟಿ ಜನರು ಪ್ರಯಾಗ್ರಾಜ್ ಗೆ ಬರುವ ನಿರೀಕ್ಷೆ ಇದೆ. ಕುಂಭ ಮೇಳಕ್ಕೆ ಯುನೆಸ್ಕೋ, ವಿಶ್ವ ಪಾರಂಪಾರಿಕ ಸ್ಥಾನಮಾನ ನೀಡಿದೆ. ಮಾರ್ಚ್ 4ರಂದು ಕುಂಭ ಮೇಳ ಮುಗಿಯುತ್ತದೆ. 192 ದೇಶಗಳ ಪ್ರತಿನಿಧಿಗಳು ಕುಂಭ ಮೇಳಕ್ಕೆ ಬರುತ್ತಾರೆ ಎಂದು ಸಿಂಗ್ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Rahul Gandhi: ಜಾತಿಗಣತಿಯನ್ನು ಯಾವ ಶಕ್ತಿಯೂ ತಡೆಯಲಾರದು: ರಾಹುಲ್ ಗಾಂಧಿ
Rajveer Diler: ಹೃದಯಾಘಾತದಿಂದ ಬಿಜೆಪಿ ಸಂಸದ ರಾಜ್ವೀರ್ ದಿಲೇರ್ ನಿಧನ
Scam: 25,000 ಕೋಟಿ ಬ್ಯಾಂಕ್ ಹಗರಣ ಪ್ರಕರಣ: ಅಜಿತ್ ಪವಾರ್ ಪತ್ನಿ ಸುನೇತ್ರಾಗೆ ಕ್ಲೀನ್ ಚಿಟ್
LS Polls: ವೇದಿಕೆಯಲ್ಲಿ ಭಾಷಣ ಮಾಡುತ್ತಲೇ ಅಸ್ವಸ್ಥಗೊಂಡ ಕೇಂದ್ರ ಸಚಿವ ನಿತಿನ್ ಗಡ್ಕರಿ
Lok Sabha Election: ಗೋವಾದ ಎರಡೂ ಕ್ಷೇತ್ರದಲ್ಲಿ 16 ಅಭ್ಯರ್ಥಿಗಳು ಕಣಕ್ಕೆ, ಇಲ್ಲಿದೆ ವಿವರ
MUST WATCH
ಹೊಸ ಸೇರ್ಪಡೆ
Jayaprakash Hegde “ಉತ್ತಮ ಕೆಲಸ ಮಾಡಿಸಿಕೊಳ್ಳಬೇಕಾದ ಅವಶ್ಯಕತೆ ಮತದಾರರಿಗಿದೆ’
Kundapura “ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಗೆಲ್ಲಿಸಿ’: ಜಯಪ್ರಕಾಶ್ ಹೆಗ್ಡೆ
Malpe ಮೀನುಗಾರಿಕೆ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ: ಜೆ.ಪಿ. ಹೆಗ್ಡೆ
Subramanya ಏನೆಕಲ್ಲು: ಕಾರಿಗೆ ಗೂಡ್ಸ್ ಆಟೋ ಢಿಕ್ಕಿ
Rahul Gandhi: ಜಾತಿಗಣತಿಯನ್ನು ಯಾವ ಶಕ್ತಿಯೂ ತಡೆಯಲಾರದು: ರಾಹುಲ್ ಗಾಂಧಿ