ವಿದೇಶಿ ಯುವತಿಗೆ ನೆರವಾದ ರಾಷ್ಟ್ರಪತಿ ಕೋವಿಂದ್
Team Udayavani, Jan 6, 2020, 8:42 PM IST
ನವದೆಹಲಿ: ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಗೆ ನೀಡಲಾಗಿದ್ದ ಬಿಗಿಭದ್ರತೆಯಿಂದಾಗಿ ಪರೋಕ್ಷವಾಗಿ ತೊಂದರೆಗೀಡಾಗಿದ್ದ ವಿದೇಶಿ ಯುವತಿಯೊಬ್ಬರಿಗೆ ಖುದ್ದು ಕೋವಿಂದ್ ಅವರೇ ನೆರವಿನ ಹಸ್ತ ಚಾಚಿರುವ ಅಪರೂಪದ ಘಟನೆ ವರದಿಯಾಗಿದೆ.
3 ತಿಂಗಳ ಹಿಂದೆ ವಿದೇಶಿ ಜೋಡಿಯೊಂದು ಕೊಚ್ಚಿಯ ತಾಜ್ ಹೋಟೆಲಿನಲ್ಲಿ ಜ.6ರಂದು ತಮ್ಮ ವಿವಾಹ ನೆರವೇರಿಸಿಕೊಳ್ಳಲು ನಿರ್ಧರಿಸಿ ಆ ಹೋಟೆಲ್ನ ಹಾಲ್ ಬುಕ್ ಮಾಡಿತ್ತು. ರಾಷ್ಟ್ರಪತಿ ಅದೇ ದಿನ ಲಕ್ಷದ್ವೀಪಕ್ಕೆ ಪ್ರವಾಸ ಹೊರಟಿದ್ದ ಹಿನ್ನೆಲೆಯಲ್ಲಿ ಮಾರ್ಗ ಮಧ್ಯೆ, ಅದೇ ಹೋಟೆಲಿನಲ್ಲಿ ತಂಗಲು ಏರ್ಪಾಟು ಮಾಡಲಾಗಿತ್ತು. ಅವರಿಗೆ ಬಿಗಿಭದ್ರತೆ ನೀಡಬೇಕಿರುವ ಕಾರಣ ವಿವಾಹ ಕಾರ್ಯಕ್ರಮವನ್ನು ಬೇರೆಡೆಗೆ ಸ್ಥಳಾಂತರಿಸಲು ಹೋಟೆಲಿನ ಆಡಳಿತಾಧಿಕಾರಿಗಳು ಯುವತಿಯನ್ನು ಕೋರಿದ್ದರು. ಇದರಿಂದ ಬೇಸತ್ತ ಆ ಯುವತಿ, ಕೋವಿಂದ್ ಅವರಿಗೆ ಟ್ವೀಟ್ ಮಾಡಿ, ಈ ಬಗ್ಗೆ ಸಹಾಯ ನೀಡುವಂತೆ ಕೋರಿದ್ದರು. ಅದಕ್ಕೆ ಸ್ಪಂದಿಸಿದ ರಾಷ್ಟ್ರಪತಿ ಭವನ, ರಾಷ್ಟ್ರಪತಿಯವರ ಭದ್ರತೆಯಿಂದ ವಿವಾಹಕ್ಕೆ ತೊಂದರೆ ಆಗಬಾರದು ಎಂದು ಹೋಟೆಲ್ ಅಧಿಕಾರಿಗಳಿಗೆ ಸೂಚಿಸಿರುವುದಾಗಿ ಟ್ವೀಟ್ ಮಾಡಿ, ನವಜೋಡಿಗೆ ಶುಭಾಶಯವನ್ನೂ ಹೇಳಿದೆ. ವಿವಾಹ ಸಾಂಗವಾಗಿ ನೆರವೇರಿದೆ.
ರಾಷ್ಟ್ರಪತಿಯವರ ಈ ಸೌಜನ್ಯಕ್ಕೆ ಟ್ವೀಟಿಗರು ಹರ್ಷ ವ್ಯಕ್ತಪಡಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ex-IPS officer ಸಂಜೀವ್ ಭಟ್ಗೆ 1996 ರ ಡ್ರಗ್ಸ್ ಕೇಸ್ ನಲ್ಲಿ 20 ವರ್ಷ ಜೈಲು ಶಿಕ್ಷೆ
Kejriwal; ಏಪ್ರಿಲ್ 1 ರವರೆಗೆ ಇಡಿ ಕಸ್ಟಡಿಗೆ: ಸಾರ್ವಜನಿಕರು ತಕ್ಕ ಉತ್ತರ ನೀಡುತ್ತಾರೆ
Kejriwal ಕುರಿತು ಅಮೆರಿಕದ ಹೇಳಿಕೆ ಸ್ವೀಕಾರಾರ್ಹವಲ್ಲ ಎಂದ ಭಾರತದ ವಿದೇಶಾಂಗ ಇಲಾಖೆ
Mangaluru;ಮನೆಯಲ್ಲೇ ಅಕ್ರಮ ಕಸಾಯಿಖಾನೆ:ಗೋಮಾಂಸ ಸಹಿತ ಮೂವರ ಬಂಧನ
Kolkata ವಿಮಾನ ನಿಲ್ದಾಣದಲ್ಲಿ ಸ್ವಯಂ ಗುಂಡಿಟ್ಟುಕೊಂಡು ಯೋಧ ಆತ್ಮಹತ್ಯೆ
MUST WATCH
ಹೊಸ ಸೇರ್ಪಡೆ
Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್ಗಳು: ಪ್ರವಾಸಿಗರಿಗೆ ಭಯ
IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್ಗಳ ಜಯ
Belthangady: ಸ್ಕೂಟರ್ ಢಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ವ್ಯಕ್ತಿ ಸಾವು
Politics: ಚಿತ್ರದುರ್ಗ ರಾಜಕೀಯ ನಿರಾಶ್ರಿತರ ಕೇಂದ್ರವೇ?: ರಘುಚಂದನ್
PSI re-examination: ಪಿಎಸ್ಐ ಮರು ಪರೀಕ್ಷೆ, ಅಂತಿಮ ಅಂಕಪಟ್ಟಿ ಬಿಡುಗಡೆ