ಅನಗತ್ಯ ಚರ್ಚೆ ನಮ್ಮನ್ನು ಕುಗ್ಗಿಸದಿರಲಿ
Team Udayavani, Aug 15, 2018, 10:49 AM IST
ಹೊಸದಿಲ್ಲಿ: ಬಹುನಿರೀಕ್ಷಿತ ಗುರಿಗಳನ್ನು ಸಾಧಿಸುವ ಉತ್ಸಾಹದಲ್ಲಿ ದೇಶ ಇರುವಾಗ ವಿವಾದಿತ ವಿಷಯ, ಅನಗತ್ಯ ಚರ್ಚೆಗಳು ನಮ್ನನ್ನು ವಿಮುಖ ವಾಗಿಸಬಾರದು ಎಂದು ರಾಷ್ಟ್ರಪತಿ ರಾಮನಾಥ ಕೋವಿಂದ್ ಹೇಳಿದ್ದಾರೆ. ಸ್ವಾತಂತ್ರ್ಯೋತ್ಸವದ ಮುನ್ನಾದಿನ ದೇಶಕ್ಕೆ ಸಂದೇಶ ನೀಡಿದ ಅವರು, ಮಹಾತ್ಮಾ ಗಾಂಧಿಯವರ ಅಹಿಂಸೆಯ ಮಂತ್ರವು ಹಿಂಸೆಗಿಂತ ಅತ್ಯಂತ ಉತ್ತಮವಾದದ್ದು ಎಂದು ಇತ್ತೀಚೆಗಿನ ಥಳಿಸಿ ಹತ್ಯೆ ಮತ್ತು ಸಾಮೂಹಿಕ ಹಿಂಸೆಯ ಪ್ರಕರಣಗಳನ್ನು ಪರೋಕ್ಷವಾಗಿ ಉಲ್ಲೇಖೀಸಿ ಹೇಳಿದ್ದಾರೆ.
ನಮ್ಮ ಇತಿಹಾಸದಲ್ಲಿ ಸಾಧಿಸದ ಹಲವು ಸಾಧನೆಗಳನ್ನು ಪೂರೈಸುವ, ಅತ್ಯಂತ ವಿಭಿನ್ನ ಹಂತದಲ್ಲಿ ನಾವಿದ್ದೇವೆ. ಎಲ್ಲರಿಗೂ ವಿದ್ಯುತ್, ಬಯಲು ಶೌಚ ನಿವಾರಣೆ, ಎಲ್ಲರಿಗೂ ಸೂರು ಒದಗಿಸುವುದು ಸಾಧ್ಯವಿದೆ ಎಂದು ಅವರು ಹೇಳಿದ್ದಾರೆ.
ಮಹತ್ವದ ಯೋಜನೆಗಳ ಘೋಷಣೆ ಸಾಧ್ಯತೆ: ಸ್ವಾತಂತ್ರ್ಯೋತ್ಸವದಂದು ಬೆಳಗ್ಗೆ 7.15ಕ್ಕೆ ಕೆಂಪು ಕೋಟೆಯ ಮೇಲಿನಿಂದ ಪ್ರಧಾನಿ ಮೋದಿ ಮಾತನಾಡಲಿದ್ದು, ಅವರು ಮಾಡಬಹು ದಾದ ಘೋಷಣೆಗಳ ಬಗ್ಗೆ ಜನರಿಗೆ ಕುತೂಹಲ ಮೂಡಿದೆ. ಇದು ಎನ್ಡಿಎ ಸರ್ಕಾರದ ಕೊನೆಯ ಸ್ವಾತಂತ್ರ್ಯ ದಿನಾಚರಣೆಯಾಗಿರಲಿದೆ. ದೇಶದ 10 ಕೋಟಿ ಜನರಿಗೆ ಆರೋಗ್ಯ ವಿಮೆ ಒದಗಿಸುವ ಆಯುಷ್ಮಾನ್ ಭಾರತ ಯೋಜನೆಯನ್ನು ಮೋದಿ ಅಧಿಕೃತವಾಗಿ ಜಾರಿಗೊಳಿ ಸಲಿದ್ದಾರೆ ಎನ್ನಲಾಗಿದೆ. ಜನಧನ ಖಾತೆಯ ಅಡಿಯಲ್ಲಿ ಸದ್ಯ ಲಭ್ಯವಿರುವ ಓವರ್ಡ್ರಾಫ್ಟ್ ಸೌಲಭ್ಯ, ವಿಮೆ ಸೌಲಭ್ಯದ ಮಿತಿ ಹೆಚ್ಚಿಸಲಿದ್ದಾರೆ ಎಂದೂ ಹೇಳಲಾಗಿದೆ. ಚುನಾವಣೆ ವರ್ಷದಲ್ಲಿ ಮೋದಿ ಮಾತಿನಲ್ಲಿ ರಾಜಕೀಯದ ಅಂಶ ಹೆಚ್ಚಾಗಿರುವ ಸಾಧ್ಯತೆಯಿದೆ.
ಬಿಗಿ ಭದ್ರತೆ: ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆಯಲ್ಲಿ ದಿಲ್ಲಿಯಲ್ಲಿ ವ್ಯಾಪಕ ಭದ್ರತೆ ಕೈಗೊಳ್ಳಲಾಗಿದೆ. ಕೆಂಪು ಕೋಟೆಗೆ ಪೊಲೀಸ್ ಸರ್ಪಗಾವಲಿದ್ದು, ಕೆಲವು ದಿನಗಳ ಹಿಂದಿನಿಂದಲೇ ಇಲ್ಲಿ ಸಾರ್ವಜನಿಕರ ಪ್ರವೇಶ ನಿಷೇಧಿ ಸಲಾಗಿದೆ. ಕೆಂಪುಕೋಟೆ ಸುತ್ತಲಿನ ಪ್ರದೇಶದಲ್ಲೇ 10 ಸಾವಿರ ಪೊಲೀಸರು ಕಾವಲಿದ್ದರೆ, ದಿಲ್ಲಿಯಾದ್ಯಂತ 70 ಸಾವಿರ ಪೊಲೀಸರನ್ನು ನಿಯೋಜಿಸಲಾಗಿದೆ. ಕೋಟೆ ಸುತ್ತಮುತ್ತ ಡ್ರೋನ್ ಹಾರಾಟ ನಿಷೇಧಿಸಲಾಗಿದೆ. ಕಳೆದ ವರ್ಷ ಮೋದಿ ವೇದಿಕೆ ಏರುತ್ತಿದ್ದಂತೆಯೇ ಗಾಳಿಪಟವೊಂದು ಹಾರಿ ಬಂದು ವೇದಿಕೆ ಎದುರು ಬಿದ್ದಿತ್ತು. ಹೀಗಾಗಿ ಈ ಬಾರಿ ಹೆಚ್ಚಿನ ಮುನ್ನೆಚ್ಚರಿಕೆ ವಹಿಸ ಲಾಗಿದೆ. 500 ಕೆಮರಾಗಳನ್ನು ಕೋಟೆಯ ರಸ್ತೆಯಲ್ಲಿ ಅಳವಡಿಸಲಾಗಿದೆ.
ಗೂಗಲ್ ಹೋಮ್ಪೇಜ್ನಲ್ಲೇ ನೇರ ಪ್ರಸಾರ
ಸ್ವಾತಂತ್ರ್ಯೋತ್ಸವ ದಿನಾಚರಣೆಯ ನೇರ ಪ್ರಸಾರವನ್ನು ಟಿವಿ ಹಾಗೂ ಆನ್ಲೈನ್ನಲ್ಲಿ ಮಾಡಲು ವಿಶೇಷ ವ್ಯವಸ್ಥೆ ಮಾಡಲಾಗಿದೆ. ಇಂಟರ್ನೆಟ್ನಲ್ಲಿ ಗೂಗಲ್ ಪುಟ ತೆರೆದರೆ ಸಾಕು, ಸ್ವಾತಂತ್ರ್ಯ ದಿನದ ಕಾರ್ಯಕ್ರಮ ನೇರ ಪ್ರಸಾರ ಆರಂಭವಾಗುತ್ತದೆ. ಈ ವ್ಯವಸ್ಥೆಯನ್ನು ಈ ಹಿಂದೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾಷಣಕ್ಕೂ ಮಾಡಲಾಗಿತ್ತು. ಇದರ ಜತೆಗೆ ಯೂಟ್ಯೂಬ್ ಹಾಗೂ ದೂರದರ್ಶನದಲ್ಲೂ ಕಾರ್ಯಕ್ರಮ ನೇರ ಪ್ರಸಾರವಾಗಲಿದೆ. ದೂರದರ್ಶನದಲ್ಲಿ ಇದೇ ಮೊದಲ ಬಾರಿಗೆ ಕಾರ್ಯಕ್ರಮದ ನಿರೂಪಣೆಯನ್ನು ಕೆಂಪು ಕೋಟೆಯಲ್ಲೇ ಮಾಡಲಾಗುತ್ತಿದೆ.
ಆದಿತ್ಯ ಕುಮಾರ್ ಮತ್ತು ಔರಂಗಜೇಬ್ಗ ಶೌರ್ಯ ಚಕ್ರ
ಜಮ್ಮು-ಕಾಶ್ಮೀರದಲ್ಲಿ ಸೇವೆ ಸಲ್ಲಿಸಿದ ಮೇಜರ್ ಆದಿತ್ಯ ಕುಮಾರ್ ಹಾಗೂ ರೈಫಲ್ವುನ್ ಔರಂಗಜೇಬ್ಗ ಶೌರ್ಯಚಕ್ರ ಪುರಸ್ಕಾರ ನೀಡಲಾಗುತ್ತದೆ. ಸ್ವಾತಂತ್ರ್ಯೋತ್ಸವದಂದು ರಾಷ್ಟ್ರಪತಿ ರಾಮನಾಥ ಕೋವಿಂದ್ ಪುರಸ್ಕಾರ ಪ್ರದಾನ ಮಾಡಲಿದ್ದಾರೆ. ಕಳೆದ ಜನವರಿಯಲ್ಲಿ ಜಮ್ಮು-ಕಾಶ್ಮೀರದ ಶೋಪಿಯಾನ್ನಲ್ಲಿ ಎನ್ಕೌಂಟರ್ ವೇಳೆ ಕಲ್ಲು ತೂರಾಟ ನಡೆಸಿದ ಮೂವರು ಸಾವನ್ನಪ್ಪಿದ್ದರು. ಮೇಜರ್ ಆದಿತ್ಯ ವಿರುದ್ಧ ಜಮ್ಮು-ಕಾಶ್ಮೀರ ಪೊಲೀಸರು ಎಫ್ಐಆರ್ ದಾಖಲಿಸಿದ್ದರು. ಅನಂತರ ಆದಿತ್ಯ ತಂದೆ ಕರ್ನಲ್ ಕರಮ್ವೀರ್ ಸಿಂಗ್, ಪುತ್ರನ ಮೇಲಿನ ದೂರು ವಜಾಗೊಳಿಸುವಂತೆ ಆಗ್ರಹಿಸಿ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು. ರೈಫಲ್ವುನ್ ಔರಂಗಜೇಬ್ಗ ಮರಣೋತ್ತರ ಶೌರ್ಯ ಚಕ್ರ ಘೋಷಿಸ ಲಾಗಿದ್ದು, ಇವರನ್ನು ಜೂನ್ 14ರಂದು ಪುಲ್ವಾಮಾದಲ್ಲಿ ಮನೆಗೆ ತೆರಳುತ್ತಿದ್ದಾಗ ಉಗ್ರರು ಅಪಹರಿಸಿ ಹತ್ಯೆಗೈದಿದ್ದರು.
131 ಸೇನಾ ಪದಕ ಘೋಷಣೆ: ದೇಶ ಕಾಯುವ ಸೇನೆ ಹಾಗೂ ಅರೆಸೇನಾ ಪಡೆಗಳ 131 ಯೋಧರಿಗೆ ವಿವಿಧ ಪುರಸ್ಕಾರಗಳನ್ನು ಘೋಷಿಸಲಾಗಿದೆ. ಓರ್ವ ಯೋಧರಿಗೆ ಕೀರ್ತಿ ಚಕ್ರ, 20 ಯೋಧರಿಗೆ ಶೌರ್ಯ, 96 ಯೋಧರಿಗೆ ಸೇನಾ ಪದ, 11 ನೌಕಾ ಪದಕ ಹಾಗೂ ಮೂರು ವಾಯು ಸೇನೆ ಪದಕಗಳನ್ನು ಪ್ರಕಟಿಸಲಾಗಿದೆ. ಸಿಪಾಯಿ ಬ್ರಹ್ಮಪಾಲ್ ಸಿಂಗ್ಗೆ ಮರಣೋತ್ತರ ಕೀರ್ತಿ ಚಕ್ರ ಘೋಷಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ
Delhi: ಬ್ಯಾಂಕ್ ಮ್ಯಾನೇಜರ್ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!
ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು
Usman Ghani: ಮೋದಿ ಹೇಳಿಕೆ ಟೀಕೆ ಮಾಡಿದ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ಉಚ್ಛಾಟನೆ
ಪ್ರತಿಷ್ಠಿತ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್