ಕೋವಿಂದ್, ಮೀರಾ ಬಿಟ್ಟು ಬೇರೆಲ್ಲ ನಾಮಪತ್ರ ತಿರಸ್ಕೃತ
Team Udayavani, Jun 30, 2017, 3:20 AM IST
ಹೊಸದಿಲ್ಲಿ: ರಾಷ್ಟ್ರಪತಿ ಚುನಾವಣೆಗೆ ಉಮೇದುವಾರಿಕೆ ಸಲ್ಲಿಸಿದ್ದ ಎನ್ಡಿಎ ಅಭ್ಯರ್ಥಿ ರಾಮನಾಥ ಕೋವಿಂದ್ ಮತ್ತು ಪ್ರತಿಪಕ್ಷಗಳ ಅಭ್ಯರ್ಥಿ ಮೀರಾ ಕುಮಾರ್ ಅವರ ನಾಮಪತ್ರ ಹೊರತಾಗಿ ಬೇರೆಲ್ಲವೂ ತಿರಸ್ಕೃತಗೊಂಡಿವೆ. ಪ್ರಮುಖ ಸ್ಪರ್ಧಾಳುಗಳಾದ ಮೀರಾ, ಕೋವಿಂದ್ ಸೇರಿದಂತೆ ಸುಮಾರು 95 ಮಂದಿ ರಾಷ್ಟ್ರಪತಿ ಚುನಾವಣೆಗೆ ಸ್ಪರ್ಧಿಸಬಯಸಿದ್ದರು. ಜೊತೆಗೆ ಇತರರೆೆಲ್ಲರಿಗೂ, ಬೇಕಾದಷ್ಟು ಪ್ರಮಾಣದ ಸೂಚಕರೂ ಇರಲಿಲ್ಲ. ಪರಿಶೀಲನೆ ವೇಳೆ ಇವೆಲ್ಲ ತಿರಸ್ಕೃತವಾಗಿವೆ ಎಂದು ಲೋಕಸಭೆ ಕಾರ್ಯಾಲಯದ ಮೂಲಗಳು ಹೇಳಿವೆ. ರಾಷ್ಟ್ರಪತಿ ಚುನಾವಣೆ ನಿಯಮಗಳ ಪ್ರಕಾರ ಅಭ್ಯರ್ಥಿಯೊಬ್ಬನಿಗೆ ಎಲೆಕ್ಟೋರಲ್ ಕಾಲೇಜಿನಲ್ಲಿ ಇರುವಂಥ ಕನಿಷ್ಠ 50 ಮಂದಿ ಸದಸ್ಯರು ಸೂಚಕರಾಗಿ ಸಹಿ ಹಾಕಬೇಕಾಗುತ್ತದೆ.
ಕೋವಿಂದ್ಗೆ ಐಎನ್ಎಲ್ಡಿ ಬೆಂಬಲ: ಇತ್ತ ಎನ್ಡಿಎ ರಾಷ್ಟ್ರಪತಿ ಅಭ್ಯರ್ಥಿ ಕೋವಿಂದ್ ಅವರಿಗೆ ಹರ್ಯಾಣ ಪ್ರಮಖ ವಿಪಕ್ಷ ಐಎನ್ಎಲ್ಡಿ ಬೆಂಬಲ ಸೂಚಿಸಿದೆ. ಹರ್ಯಾಣ ಸಿಎಂ, ಬಿಜೆಪಿಯ ಮನೋಹರಲಾಲ್ ಖಟ್ಟರ್ ಅವರೊಂದಿಗಿನ ಸಭೆ ಬಳಿಕ ಐಎನ್ಎಲ್ಡಿ ಈ ನಿರ್ಧಾರ ತಳೆದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Stones Pelted: ಮತದಾನದ ವೇಳೆ ಕಲ್ಲು ತೂರಾಟ… ಬಿಜೆಪಿ ನಾಯಕನಿಗೆ ಗಾಯ
Gujarat Lok Sabha Constituency: ಗುಜರಾತ್ ಎಂಬ ಕೇಸರಿ ಕೋಟೆಗೆ ಲಗ್ಗೆ ಸಾಧ್ಯವೇ?
Vote: ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸಿ…: ಮತದಾರರಲ್ಲಿ ಮನವಿ ಮಾಡಿದ ಪ್ರಧಾನಿ ಮೋದಿ
Polls: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ, ಮತದಾರರ ಕೈಯಲ್ಲಿ ಅಭ್ಯರ್ಥಿಗಳ ಭವಿಷ್ಯ
Loksabha Election; ದೇಶದಲ್ಲಿ ಹಂತ-1: ಮತ ಇಂದು
MUST WATCH
ಹೊಸ ಸೇರ್ಪಡೆ
Belagavi; ಕಾಂಗ್ರೆಸ್ ಸರ್ಕಾರದ ಓಲೈಕೆಯಿಂದ ಜಿಹಾದಿ ಕೃತ್ಯಗಳು ಹೆಚ್ಚುತ್ತಿದೆ: ಶೆಟ್ಟರ್
Bengaluru: ರೈಲಿಗೆ ಸಿಲುಕಿ ವೈದ್ಯ, ಸ್ಟಾಫ್ ನರ್ಸ್ ಆತ್ಮಹತ್ಯೆ
Udupi: ಟಿಪ್ಪರ್ – ಬೈಕ್ ನಡುವೆ ಭೀಕರ ಅಪಘಾತ; ಬೈಕ್ ಸವಾರ ಸ್ಥಳದಲ್ಲೇ ಸಾವು
Bengaluru Crime: ಅಕ್ರಮ ಸಂಬಂಧ ಜೋಡಿ ಕೊಲೆಯಲ್ಲಿ ಅಂತ್ಯ
Hubli; ಕಾನೂನು ವ್ಯವಸ್ಥೆ ಹೀಗೆ ಮುಂದುವರಿದರೆ ರಾಜ್ಯ ಬಿಹಾರವಾಗುತ್ತದೆ: ಬಸವರಾಜ ಬೊಮ್ಮಾಯಿ