ಪತ್ನಿಯ ಪ್ರಿಯಕರನನ್ನ ಕೊಂದು ದೇವಾಲಯದಲ್ಲೇ ಸುಟ್ಟ ಪುರೋಹಿತ !
Team Udayavani, Sep 28, 2017, 10:14 AM IST
ಹೊಸದಿಲ್ಲಿ: ಪುರೋಹಿತನೊಬ್ಬ ಪತ್ನಿಯ ಪ್ರಿಯಕರನನ್ನು ದೇವಾಲಯದಲ್ಲೇ ಬರ್ಬರವಾಗಿ ಕೊಲೆಗೈದು ಬೆಂಕಿ ಹಚ್ಚಿ ಸುಟ್ಟ ಅತ್ಯಂತ ಕಳವಳಕಾರಿ ಘಟನೆ ರಾಷ್ಟ್ರ ರಾಜಧಾನಿಯಲ್ಲಿ ನಡೆದಿದೆ .
ವರದಿಯಾದಂತೆ, ಗಾಂಧಿನಗರ ಪ್ರದೇಶದ ದೇವಾಲಯವೊಂದರ ಪುರೋಹಿತ 35ರ ಹರೆಯದ ಲಖನ್ ಎಂಬಾತ ತನ್ನ ಪತ್ನಿಯ ಮಾಜಿ ಪ್ರಿಯಕರನನ್ನು ಕೊಲೆಗೈದು ಜೈಲುಪಾಲಾಗಿದ್ದಾನೆ . ಪತಿಯ ಕೃತ್ಯಕ್ಕೆ ಪತ್ನಿಯೂ ಸಾಥ್ ನೀಡಿ ಜೈಲು ಸೇರಿದ್ದಾಳೆ.
ಮಥುರಾ ಮೂಲದ 30ರ ಹರೆಯದ ಮಹಿಳೆಯನ್ನು ಲಖನ್ ವಿವಾಹವಾಗಿದ್ದ. ಆದರೆ ಪತ್ನಿ ಮಾಜಿ ಪ್ರಿಯಕರ ಶೇಖರ್ (35) ನೊಂದಿಗೆ ಸ್ನೇಹ ಮುಂದುವರಿಸಿದ್ದಳು. ಆತನ ಸ್ನೇಹ ತೊರೆಯುವಂತೆ ಹೇಳಿದಾಗ ಆತನನ್ನು ಕೊಂದು ಮುಗಿಸುವ ಪ್ಲ್ಯಾನ್ ಮಾಡಿದ್ದಾಳೆ. ಪತ್ನಿಯ ದುರ್ಯೋಚನೆಗೆ ಪತಿಯು ಅಸ್ತು ಎಂದು ಶೇಖರ್ ನನ್ನ ದೆಹಲಿಗೆ ಕರೆಸಿಕೊಂಡು ನಿದ್ರೆ ಮಾತ್ರೆಗಳನ್ನು ತಿನ್ನಿಸಿ ದೇವಾಲಯದ ಸ್ಟೋರ್ ರೂಮ್ ನಲ್ಲಿ ಕೂಡಿ ಹಾಕಿ ಚೆನ್ನಾಗಿ ಥಳಿಸಿ ಕೊಲೆಗೈದಿದ್ದಾರೆ.
ದಿನ ಕಳೆದ ಬಳಿಕ ಶವ ಕೊಳೆತು ವಾಸನೆ ಬರಲು ಆರಂಭವಾದಾಗ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಪೊಲೀಸರಿಗೆ ಕರೆ ಮಾಡಿ ಕಥೆ ಕಟ್ಟಿದ್ದಾರೆ. ಯಾರೋ ಒಳಗೆ ಸಿಲುಕಿ ಕೊಂಡಿದ್ದಾರೆ ಎಂದು ದೂರು ನೀಡಿದ್ದು, ಪೊಲೀಸರು ಅನುಮಾನದಿಂದ ತೀವ್ರ ವಿಚಾರಣೆ ನಡೆಸಿದಾಗ ಕೃತ್ಯ ಬೆಳಕಿಗೆ ಬಂದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Rajveer Diler: ಹೃದಯಾಘಾತದಿಂದ ಬಿಜೆಪಿ ಸಂಸದ ರಾಜ್ವೀರ್ ದಿಲೇರ್ ನಿಧನ
Scam: 25,000 ಕೋಟಿ ಬ್ಯಾಂಕ್ ಹಗರಣ ಪ್ರಕರಣ: ಅಜಿತ್ ಪವಾರ್ ಪತ್ನಿ ಸುನೇತ್ರಾಗೆ ಕ್ಲೀನ್ ಚಿಟ್
LS Polls: ವೇದಿಕೆಯಲ್ಲಿ ಭಾಷಣ ಮಾಡುತ್ತಲೇ ಅಸ್ವಸ್ಥಗೊಂಡ ಕೇಂದ್ರ ಸಚಿವ ನಿತಿನ್ ಗಡ್ಕರಿ
Lok Sabha Election: ಗೋವಾದ ಎರಡೂ ಕ್ಷೇತ್ರದಲ್ಲಿ 16 ಅಭ್ಯರ್ಥಿಗಳು ಕಣಕ್ಕೆ, ಇಲ್ಲಿದೆ ವಿವರ
ಹಳದಿ ಶಾಸ್ತ್ರದ ವೇಳೆ ವಿದ್ಯುತ್ ಸ್ಪರ್ಶ… ಆಸ್ಪತ್ರೆ ದಾರಿ ಮಧ್ಯೆ ಕೊನೆಯುಸಿರೆಳೆದ ವರ
MUST WATCH
ಹೊಸ ಸೇರ್ಪಡೆ
ಮೂಲಭೂತ ಸೌಕರ್ಯ ಕೊಡಿ ಎಂದಿದ್ದೇನೆ ಹೊರತು, ಒಕ್ಕಲೆಬ್ಬಿಸಿ ಎಂದಿಲ್ಲ; ಬೇಳೂರು ಸ್ಪಷ್ಟನೆ
Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ
Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್ ಗಗನ ಯಾತ್ರೆ
Rajveer Diler: ಹೃದಯಾಘಾತದಿಂದ ಬಿಜೆಪಿ ಸಂಸದ ರಾಜ್ವೀರ್ ದಿಲೇರ್ ನಿಧನ
Scam: 25,000 ಕೋಟಿ ಬ್ಯಾಂಕ್ ಹಗರಣ ಪ್ರಕರಣ: ಅಜಿತ್ ಪವಾರ್ ಪತ್ನಿ ಸುನೇತ್ರಾಗೆ ಕ್ಲೀನ್ ಚಿಟ್