ದೇಶದ 50 ಮಾರ್ಗಗಳಲ್ಲಿ ಶೀಘ್ರ ಓಡಲಿದೆ ಖಾಸಗಿ ರೈಲು
Team Udayavani, Oct 3, 2019, 6:20 PM IST
ಹೊಸದಿಲ್ಲಿ: ಶೀಘ್ರ ಭಾರತದಲ್ಲೂ ಅಂತಾರಾಷ್ಟ್ರೀಯ ದರ್ಜೆಯ ರೈಲುಗಳು ಓಡುವ ದಿನಗಳು ದೂರವಿಲ್ಲ. ಇದಕ್ಕೆ ಪೂರಕವಾಗಿ, ಕೇಂದ್ರ ರೈಲ್ವೇ ಸಚಿವಾಲಯ ಹಂತ ಹಂತವಾಗಿ ಖಾಸಗಿಯವರಿಗೆ ರೈಲುಗಳನ್ನು ಓಡಿಸಲು ಅವಕಾಶ ಮಾಡುತ್ತಿದೆ.
ಶೀಘ್ರ ದೇಶದ 50 ಪ್ರಮುಖ ಮಾರ್ಗಗಳಲ್ಲಿ ಖಾಸಗಿಯವರು ರೈಲುಗಳನ್ನು ಓಡಿಸಲು ರೈಲ್ವೇ ಸಚಿವಾಲಯ ಅನುವು ಮಾಡಿಕೊಡಲಿದೆ. ರೈಲ್ವೇ ಆಡಳಿತ ಮಂಡಳಿ ಸಭೆಯಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.
ಸಭೆಯಲ್ಲಿ ಚರ್ಚೆಯಾದ ವಿಚಾರದ ಪ್ರಕಾರ, ರೈಲ್ವೇ ಮಾರ್ಗಗಳಲ್ಲಿ ಖಾಸಗಿಯವರು ಆಧುನಿಕ ಪ್ರಯಾಣಿಕರ ರೈಲುಗಳನ್ನು ಓಡಿಸಬಹುದು.
ಇದಕ್ಕೆ ಅವಕಾಶ ಮಾಡಿಕೊಡಲು ಪಾರದರ್ಶಕ ವ್ಯವಸ್ಥೆಯನು ಜಾರಿಗೆ ತರಲಾಗುತ್ತಿದೆ. ಮಾರ್ಗಗಳು ರೈಲ್ವೇ ಇಲಾಖೆಯ ಸುಪರ್ದಿಯಲ್ಲೇ ಇದ್ದು, ಇದರಲ್ಲಿ ಖಾಸಗಿಯವರು ರೈಲು ಓಡಿಸಬೇಕಾದರೆ, ನಿರ್ದಿಷ್ಟ ಮೊತ್ತವನ್ನು ಪಾವತಿಸಬೇಕಾಗುತ್ತದೆ.
ರೈಲ್ವೇ ಅಧಿಕಾರಿಗಳ ಪ್ರಕಾರ, ಸುಮಾರು 50 ಮಾರ್ಗಗಳನ್ನು ಖಾಸಗಿಯವರಿಗೆ ಅವಕಾಶ ಮಾಡಿಕೊಡಲು ಮಾತುಕತೆ ನಡೆಸಲಾಗಿದೆ. ಹೆಚ್ಚುವರಿ ರೈಲುಗಳುನ್ನು ಓಡಿಸಲು ಸಾಧ್ಯವಾಗುವಂತಹ ಮಾರ್ಗಗಳು, ಸದ್ಯ ಅಭಿವೃದ್ಧಿ ಕೆಲಸ ನಡೆಯುತ್ತಿರುವ ಮಾರ್ಗಗಳ ಸಾಮರ್ಥ್ಯಗಳನ್ನು ಗಮನಿಸಿಕೊಂಡು ಖಾಸಗಿಯವರಿಗೆ ಅವಕಾಶ ನೀಡಲಾಗುತ್ತದೆ. ಇದಕ್ಕೆ ಕೆಲವೊಂದು ಮೂಲಸೌಕರ್ಯ ಅಭಿವೃದ್ಧಿಯೂ ಆಗಬೇಕಿರುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಅ.5ರಂದು ಮೊದಲ ಬಾರಿಗೆ ದಿಲ್ಲಿ ಲಕ್ನೋ ಮಧ್ಯೆ ತೇಜಸ್ ಎಕ್ಸ್ಪ್ರೆಸ್ ಖಾಸಗಿ ರೈಲು ಓಡಲಿದೆ. ಇದು ಖಾಸಗಿ ರೈಲು ನಿರ್ವಹಣೆಯ ಮೊದಲ ಯೋಜನೆಯಾಗಿದ್ದು, ಎರಡನೆಯದಾಗಿ ಮುಂಬಯಿ ಅಹಮದಾಬಾದ್ ಮಧ್ಯೆ ಇನ್ನೊಂದು ತೇಜಸ್ ಎಕ್ಸ್ಪ್ರೆಸ್ ಓಡಲಿದೆ. ಈ ರೈಲು ಆರಂಭದ ದಿನಾಂಕ ಇನ್ನೂ ನಿಗದಿಯಾಗಿಲ್ಲ. ಎರಡು ನಗರಗಳ ಮಧ್ಯೆ, ಗ್ರಾಮಾಂತರ ಪ್ರದೇಶಗಳು, ದೀರ್ಘ ಪ್ರಯಾಣದ ದಾರಿಗಳಲ್ಲಿ ಖಾಸಗಿಯವರು ರೈಲು ಓಡಿಸುವ ಬಗ್ಗೆ ಅವಕಾಶ ಮಾಡಿಕೊಡಲು ಈ ಹಿಂದೆ ರೈಲ್ವೇ ಆಡಳಿತ ಮಂಡಳಿ ತೀರ್ಮಾನಿಸಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
AMU: ಇತಿಹಾಸದಲ್ಲೇ ಮೊದಲು… ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯಕ್ಕೆ ಮಹಿಳಾ ಉಪಕುಲಪತಿ ನೇಮಕ
Telangana Election 2024: ಕಳೆಗುಂದಿದ ಬಿಆರ್ಎಸ್: ಕಾಂಗ್ರೆಸ್-ಬಿಜೆಪಿ ಕಾದಾಟ
Insulin: ಶುಗರ್ ಲೆವೆಲ್ ಏರಿಕೆ… ಜೈಲಿನಲ್ಲಿರುವ ಕೇಜ್ರಿವಾಲ್ ಗೆ ಇನ್ಸುಲಿನ್ ನೀಡಿಕೆ
Viral Video: ಕುಟುಂಬಸ್ಥರಿಂದಲೇ ವಧುವಿನ ಅಪಹರಣಕ್ಕೆ ಯತ್ನ; ರಾದ್ಧಾಂತವಾದ ಮದುವೆ ಮಂಟಪ
Netizens; 10ನೇ ತರಗತಿ ಪರೀಕ್ಷೆ ಟಾಪರ್ ಟ್ರೋಲ್: ನೆಟ್ಟಿಗರಿಂದ ತರಾಟೆ
MUST WATCH
ಹೊಸ ಸೇರ್ಪಡೆ
ಮಹಿಳೆ ವಿವಸ್ತ್ರಗೊಳಿಸಿ ಹಲ್ಲೆ: ಜೈಲಿನಿಂದ ಬಿಡುಗಡೆಯಾದ ಆರೋಪಿಗಳಿಗೆ ಹೂಮಾಲೆ ಹಾಕಿ ಸ್ವಾಗತ
Lok Sabha Election: ಏಪ್ರಿಲ್ 28 ರಂದು ಬೆಳಗಾವಿಗೆ ಪ್ರಧಾನಿ ಮೋದಿ
Editorial: ಗುಕೇಶ್ ಗೆಲುವು- ಭಾರತದ ಯುವಶಕ್ತಿಯ ಸಂಕೇತ
AMU: ಇತಿಹಾಸದಲ್ಲೇ ಮೊದಲು… ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯಕ್ಕೆ ಮಹಿಳಾ ಉಪಕುಲಪತಿ ನೇಮಕ
Bengaluru: ಕದಂಬ ಹೋಟೆಲ್ ಸ್ಫೋಟ ಮಾಡುವುದಾಗಿ ಬೆದರಿಕೆ