ಜಮ್ಮು : ವಿದ್ಯುದಾಘಾತಕ್ಕೆ ಪ್ರೊಫೆಸರ್, ಪುತ್ರ ಬಲಿ, ಪುತ್ರಿ ಗಂಭೀರ
Team Udayavani, Aug 6, 2018, 5:04 PM IST
ಕಥುವಾ, ಜಮ್ಮು ಕಾಶ್ಮೀರ : ಓರ್ವ ಪ್ರೊಫೆಸರ್ ಮತ್ತು ಅವರ ಪುತ್ರ ವಿದ್ಯುದಾಘಾತಕ್ಕೆ ಗುರಿಯಾಗಿ ಮೃತಪಟ್ಟಿರುವ ದಾರುಣ ಘಟನೆ ಇಲ್ಲಿ ನಡೆದಿದೆ. ಪೊಫೆಸರ್ ಪುತ್ರಿಗೆ ಗಂಭೀರವಾಗಿ ಗಾಯವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಜಮ್ಮು ಕ್ಲಸ್ಟರ್ ಯುನಿವರ್ಸಿಟಿಯ ಸಮಾಜ ವಿಜ್ಞಾನ ವಿಭಾಗದ ಡೀನ್ ಆಗಿರುವ ಎನ್ ಕೆ ಗುಪ್ತಾ (52) ಅವರು ಇಲ್ಲಿನ ಶಿವನಗರದಲ್ಲಿರುವ ತಮ್ಮ ಮನೆಯ ಸೂರಿನಿಂದ ಸೋರುತ್ತಿದ್ದ ನೀರನ್ನು ಹೊರ ಹಾಕುವ ಯತ್ನದಲ್ಲಿದ್ದಾಗ ಅವರು ಸಜೀವ ವಿದ್ಯುತ್ ತಂತಿಯ ಸಂಪರ್ಕಕ್ಕೆ ಬಂದು ಶಾಕ್ ತಗುಲಿ ಬಿದ್ದರು. ಅವರ ನೆರವಿಗೆ ಧಾವಿಸಿ ಬಂದ ಪುತ್ರ ಜತಿನ್ (30) ಮತ್ತು ಪುತ್ರಿ ಪ್ರೀತಿ (22) ಕೂಡ ವಿದ್ಯುತ್ ಶಾಕ್ಗೆ ಗುರಿಯಾದರು.
ಇದನ್ನು ಕಂಡ ಗುಪ್ತಾ ಅವರ ಪತ್ನಿ ಒಡನೆಯೇ ಮನೆಯ ವಿದ್ಯುತ್ ಪೂರೈಕೆಯನ್ನು ನಿಲ್ಲಿಸಿದರು. ವಿದ್ಯುದಾಘಾತಕ್ಕೆ ಗುರಿಯಾದ ಮೂವರನ್ನೂ ನೆರೆಕರೆಯವರ ನೆರವಿನಿಂದ ಆಸ್ಪತ್ರೆಗೆ ಒಡನೆಯೇ ಒಯ್ಯಲಾಯಿತು. ಆದರೆ ಪ್ರೊ. ಗುಪ್ತಾ ಮತ್ತು ಪುತ್ರ ನಿತಿನ್ ಅದಾಗಲೇ ಮೃತಪಟ್ಟಿರುವುದಾಗಿ ವೈದ್ಯರು ಪ್ರಕಟಿಸಿದರು.
ಗಂಭೀರ ಸ್ಥಿತಿಯಲ್ಲಿರುವ ಪುತ್ರಿ ಪ್ರೀತಿಯನ್ನು ಜಮ್ಮುವಿನಲ್ಲಿನ ಸರಕಾರಿ ವೈದ್ಯಕೀಯ ಕಾಎಈಜು ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗೆ ಒಯ್ಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ನಿನ್ನೆ ರಾತ್ರಿ ಪೂರ್ತಿ ಸುರಿದ ಜಡಿ ಮಳೆಯಿಂದಾಗಿ ನೀರಿನ ಸೂರಿನಲ್ಲಿ ನೀರು ಬ್ಲಾಕ್ ಆಗಿತ್ತು. ಅಲ್ಲೇ ಇದ್ದ ಏರ್ ಕಂಡೀಶನರ್ ಕಂಪ್ರಸರ್ ನೀರಿನಲ್ಲಿ ಮುಳುಗಿದ ಕಾರಣ ಮನೆಯಲ್ಲಿ ಶಾರ್ಟ್ ಸರ್ಕ್ಯೂಟ್ ಆಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Madhya Pradesh Rally; ಕೈಯಿಂದ ಮೀಸಲಾತಿ ಕಸಿಯುವ ಯತ್ನ: ಪ್ರಧಾನಿ ಮೋದಿ
Rahul Gandhi: ಜಾತಿಗಣತಿಯನ್ನು ಯಾವ ಶಕ್ತಿಯೂ ತಡೆಯಲಾರದು: ರಾಹುಲ್ ಗಾಂಧಿ
Rajveer Diler: ಹೃದಯಾಘಾತದಿಂದ ಬಿಜೆಪಿ ಸಂಸದ ರಾಜ್ವೀರ್ ದಿಲೇರ್ ನಿಧನ
Scam: 25,000 ಕೋಟಿ ಬ್ಯಾಂಕ್ ಹಗರಣ ಪ್ರಕರಣ: ಅಜಿತ್ ಪವಾರ್ ಪತ್ನಿ ಸುನೇತ್ರಾಗೆ ಕ್ಲೀನ್ ಚಿಟ್
LS Polls: ವೇದಿಕೆಯಲ್ಲಿ ಭಾಷಣ ಮಾಡುತ್ತಲೇ ಅಸ್ವಸ್ಥಗೊಂಡ ಕೇಂದ್ರ ಸಚಿವ ನಿತಿನ್ ಗಡ್ಕರಿ
MUST WATCH
ಹೊಸ ಸೇರ್ಪಡೆ
Exam; ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆ-2ಕ್ಕೆ 1.49 ಲಕ್ಷ ವಿದ್ಯಾರ್ಥಿಗಳ ನೋಂದಣಿ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ
ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಿ: ಪದ್ಮರಾಜ್ ಪೂಜಾರಿ
ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ
ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ