ಸಸ್ಯಾಹಾರ ದಿನಕ್ಕೆ ಪ್ರಸ್ತಾವ
Team Udayavani, May 21, 2018, 9:43 AM IST
ಹೊಸದಿಲ್ಲಿ: ಕೇಂದ್ರ ಸರಕಾರ ಮಹಾತ್ಮ ಗಾಂಧಿ ಅವರ 150ನೇ ಹುಟ್ಟಿದ ದಿನದ ಕಾರ್ಯಕ್ರಮವನ್ನು ಅದ್ದೂರಿಯಾಗಿ ಆಚರಿಸಲು ಈಗಾಗಲೇ ನಿರ್ಧರಿಸಿದೆ. ಅದಕ್ಕೆ ಪೂರಕವಾಗಿ ರೈಲ್ವೇ ಮಂಡಳಿ ಕೂಡ ಈ ವರ್ಷ ಅ.2ರಂದು ರೈಲು ನಿಲ್ದಾಣದಲ್ಲಿ ಮಾಂಸಾಹಾರ ವಿತರಣೆ ಮಾಡದೇ ಇರುವ ಬಗ್ಗೆ ಯೋಜನೆ ಹಾಕಿಕೊಂಡಿದೆ. ಈ ಮೂಲಕ “ಸಸ್ಯಾಹಾರ ದಿನ’ವನ್ನಾಗಿ ಆಚರಿಸಲು ನಿರ್ಧರಿಸಲಾಗಿದೆ.
ಅದನ್ನೇ 2019ರ ಅ.2, 2020ರ ಅ.2 ರಂದೂ ಮುಂದುವರಿಸುವ ಬಗ್ಗೆ ಮಂಡಳಿ ಕೇಂದ್ರ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ. “ರಾಷ್ಟ್ರೀಯ ಸ್ವತ್ಛತಾ ದಿನ’ವನ್ನು ಅ.2ರಂದೇ ನಡೆಸಲು ನಿರ್ಧರಿಸಲಾಗಿದೆ.
ಮಹಾತ್ಮ ಗಾಂಧಿ ಅವರು ಸಸ್ಯಾಹಾರವನ್ನೇ ಇಷ್ಟ ಪಡುತ್ತಿದ್ದುದರಿಂದ ರೈಲ್ವೇ ಮಂಡಳಿ ಈ ಬಗ್ಗೆ ಪ್ರಸ್ತಾಪ ಮಾಡಿದೆ. ಇದರ ಜತೆ ಮಹಾತ್ಮಾ ಗಾಂಧಿ ಹೊಂದಿದ್ದ ವಿಶೇಷ ಬಾಂಧವ್ಯದ ಸ್ಥಳಗಳಿಗೆ “ಸ್ವತ್ಛತಾ ಎಕ್ಸ್ಪ್ರೆಸ್’ ಗಳನ್ನು ಓಡಿಸಲೂ ರೈಲ್ವೇ ಇಲಾಖೆ ಮುಂದಾಗಿದೆ. ಇನ್ನು ದಂಡಿಯಾತ್ರೆಯ ನೆನಪಿಗಾಗಿ ಸಬರಮತಿಯಿಂದ ರೈಲು
ಗಳಲ್ಲಿ “ಉಪ್ಪಿನ ವಿಶೇಷ ಬೋಗಿ’ಯನ್ನು ಸೇರಿಸಲಿದೆ. ಟಿಕೆಟ್ಗಳಲ್ಲಿ ಗಾಂಧೀಜಿಯವರ ಅಳಿಸಲಾ ಗದಂಥ ಚಿತ್ರಗಳನ್ನೂ ಮುದ್ರಿಸಲಿದೆ.
ಈ ಎಲ್ಲಾ ಪ್ರಸ್ತಾವಗಳನ್ನು ಕೇಂದ್ರ ಸಂಸ್ಕೃತಿ ಖಾತೆ ಸಚಿವಾಲಯಕ್ಕೆ ಕಳುಹಿಸಲಾಗಿದೆ. ಅದರ ಉಸ್ತುವಾರಿಯಲ್ಲಿಯೇ ಮಹಾತ್ಮ ಗಾಂಧಿಯವರ 150ನೇ ಹುಟ್ಟಿದ ಹಬ್ಬದ ಕಾರ್ಯಕ್ರಮಗಳು ನೆರವೇರಲಿವೆ. ಇದರ ಜತೆಗೆ ವಿಶೇಷ ಲಾಂಛನವನ್ನೂ ಸಿದ್ಧಪಡಿಸಲಾ ಗುತ್ತಿದೆ. ಎಲ್ಲಾ ರೈಲ್ವೇ ವಿಭಾಗೀಯ ಕಚೇರಿಗಳ ಮುಂಭಾಗದಲ್ಲಿ ಗಾಂಧೀಜಿಯವರ ಭಿತ್ತಿ ಚಿತ್ರಗಳನ್ನು ಪ್ರದರ್ಶಿಸಲಾಗುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Amit Shah: 2024ರ ಚುನಾವಣೆಯಲ್ಲಿ ಎನ್ ಡಿಎಗೆ 400ಕ್ಕೂ ಅಧಿಕ ಸ್ಥಾನ ಖಚಿತ: ಶಾ
Patanjali ತಪ್ಪು ಜಾಹೀರಾತು; ಕ್ಷಮೆಯಾಚಿಸಿದ ಬಾಬಾ ರಾಮ್ ದೇವ್,ಬಾಲಕೃಷ್ಣ
Scrap mafia ದರೋಡೆಕೋರ ರವಿ ಕಾನಾ ಮತ್ತು ಪ್ರೇಯಸಿ ಕಾಜಲ್ ಥಾಯ್ಲೆಂಡ್ ನಲ್ಲಿ ಬಂಧನ
Andhra ಟಿಡಿಪಿ ಅಭ್ಯರ್ಥಿ ಆಸ್ತಿ ಬರೋಬ್ಬರಿ 5,785 ಕೋ.ರೂ.!
Loksabha election; ಕಾಂಗ್ರೆಸ್ ವಿರುದ್ಧ ಮೋದಿ ಈಗ ದೇಶ ವಿಭಜನೆ ಅಸ್ತ್ರ ಪ್ರಯೋಗ
MUST WATCH
ಹೊಸ ಸೇರ್ಪಡೆ
K. Jayaprakash Hegde; ಮೀನುಗಾರಿಕೆ, ಪ್ರವಾಸೋದ್ಯಮದ ಅಭಿವೃದ್ದಿಗೆ ಹೆಚ್ಚಿನ ಆಧ್ಯತೆ
Amit Shah: 2024ರ ಚುನಾವಣೆಯಲ್ಲಿ ಎನ್ ಡಿಎಗೆ 400ಕ್ಕೂ ಅಧಿಕ ಸ್ಥಾನ ಖಚಿತ: ಶಾ
ಕ್ರಿಕೆಟ್ ಬಗ್ಗೆ ಕಿಂಚಿತ್ತೂ ಜ್ಞಾನವಿಲ್ಲದ ವ್ಯಕ್ತಿಗೆ ಡ್ರೀಮ್11ನಲ್ಲಿ ಒಲಿಯಿತು 1.5 ಕೋಟಿ
IPL; ಸ್ಟಾಯಿನಿಸ್ ಏಟಿಗೆ ತವರಲ್ಲೆ ಚಾಂಪಿಯನ್ ಚೆನ್ನೈ ಠುಸ್!
Congress vs BJP; ಬ್ರಹ್ಮಾವರದಲ್ಲಿ ಶಕ್ತಿ ಪ್ರದರ್ಶನದ ವೇದಿಕೆ!