ಹಿಂದಿ ಹೇರಿಕೆ ಖಂಡಿಸಿ ಬೆಂಕಿ ಹಚ್ಚಿಕೊಂಡು ಸಾವಿಗೆ ಶರಣಾದ ವೃದ್ಧ
Team Udayavani, Nov 26, 2022, 8:30 PM IST
ಸೇಲಂ: ಆಘಾತಕಾರಿ ಬೆಳವಣಿಗೆಯೊಂದರಲ್ಲಿ, ಹಿಂದಿ ಹೇರಿಕೆ ವಿರೋಧಿಸಿ 85 ವರ್ಷದ ವ್ಯಕ್ತಿಯೊಬ್ಬರು ಮೈಮೇಲೆ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡ ಘಟನೆ ತಮಿಳುನಾಡಿನಲ್ಲಿ ನಡೆದಿದೆ.
ಮೃತರನ್ನು ಆಡಳಿತಾರೂಢ ಡಿಎಂಕೆಯ ಕೃಷಿ ಒಕ್ಕೂಟದ ಮಾಜಿ ಸಂಘಟಕ ತಂಗವೇಳ್ ಎಂದು ಗುರುತಿಸಲಾಗಿದೆ.
ತಲೈಯೂರ್ನ ಡಿಎಂಕೆ ಕಚೇರಿ ಮುಂದೆ ಶನಿವಾರ ಬೆ.11ಗಂಟೆಗೆ ಆಗಮಿಸಿದ ತಂಗವೇಳ್, ಬ್ಯಾನರ್ವೊಂದರಲ್ಲಿ “ಮೋದಿ ಸರ್ಕಾರ, ಕೇಂದ್ರ ಸರ್ಕಾರ, ನಮಗೆ ಹಿಂದಿ ಬೇಡ.
ತಮಿಳು ನಮ್ಮ ತಾಯ್ನುಡಿ. ನೀವು ಹಿಂದಿ ಭಾಷೆ ಹೇರಿಕೆ ಮಾಡುವುದರಿಂದ ನಮ್ಮ ವಿದ್ಯಾರ್ಥಿಗಳು ಸೇರಿದಂತೆ ನಮ್ಮೆಲ್ಲರ ಬದುಕು ದುಸ್ತರವಾಗುತ್ತದೆ’ ಎಂದು ಬರೆದು, ತಮ್ಮ ಮೈಮೇಲೆ ತಾವೇ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದಾರೆ.
ಕೂಡಲೇ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಅಷ್ಟರಲ್ಲೇ ಅವರು ಕೊನೆಯುಸಿರೆಳೆದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಅಲಿಗಢ ಮುಸ್ಲಿಂ ವಿವಿಯ ಮಾಜಿ ವಿದ್ಯಾರ್ಥಿಯ ಮೇಲೆ ಗುಂಡು; ಸ್ಥಿತಿ ಚಿಂತಾಜನಕ
ವಾಣಿ ಜಯರಾಂ ನಿಗೂಢ ಮೃತ್ಯು; ಪ್ರಕರಣ ದಾಖಲಿಸಿಕೊಂಡ ಪೊಲೀಸರು
ಸುಪ್ರೀಂ ಕೋರ್ಟ್ಗೆ 5 ನೂತನ ನ್ಯಾಯಾಧೀಶರ ನೇಮಕಕ್ಕೆ ಕೇಂದ್ರ ಅಸ್ತು
ನಾಗಾಲ್ಯಾಂಡ್ ಚುನಾವಣೆ; 28 ಕೋಟಿ ರೂ.ಗೂ ಹೆಚ್ಚು ನಿಷೇಧಿತ ವಸ್ತುಗಳ ವಶ
ನಾಗಾಲ್ಯಾಂಡ್ ವಿಧಾನಸಭಾ ಚುನಾವಣೆ: ಕಾಂಗ್ರೆಸ್ 21 ಅಭ್ಯರ್ಥಿಗಳ ಮೊದಲ ಪಟ್ಟಿ ಪ್ರಕಟ