ಪುಲ್ವಾಮಾ ದಾಳಿಗಳು ಸಾರ್ವಕಾಲಿಕ; ಪಾಕನ್ನು ದೂರಲಾಗದು: ಪಿತ್ರೋಡ
Team Udayavani, Mar 22, 2019, 6:56 AM IST
ಹೊಸದಿಲ್ಲಿ : ”ಪುಲ್ವಾಮಾದಂತಹ ಉಗ್ರ ದಾಳಿಗಳು ಎಲ್ಲ ಕಾಲದಲ್ಲಿ ಸಂಭವಿಸುತ್ತವೆ; ಅದಕ್ಕಾಗಿ ಪಾಕಿಸ್ಥಾನವನ್ನು ದೂರುವುದು ಸರಿಯಲ್ಲ; ಮಾತ್ರವಲ್ಲ ಭಾರತೀಯ ವಾಯು ಪಡೆ ಎಲ್ಓಸಿ ದಾಟಿ ಪಾಕಿಸ್ಥಾನದಲ್ಲಿರುವ ಜೈಶ್ ಎ ಮೊಹಮಮ್ಮದ್ ಉಗ್ರ ಸಂಘಟನೆಯ ತರಬೇತಿ ಶಿಬಿರಗಳ ಮೇಲೆ ಬಾಂಬ್ ದಾಳಿ ನಡೆಸಿರುವುದು ಕೂಡ ಸರಿಯಲ್ಲ” ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರ ನಿಕಟವರ್ತಿ ಮತ್ತು ಭಾರತೀಯ ಸಾಗರೋತ್ತರ ಕಾಂಗ್ರೆಸ್ನ ಮುಖ್ಯಸ್ತರಾಗಿರುವ ಸ್ಯಾಮ್ ಪಿತ್ರೋಡ ಹೇಳಿದ್ದಾರೆ.
ಕಳೆದ ಫೆ.14ರಂದು ಪುಲ್ವಾಮಾದಲ್ಲಿ ಜೈಶ್ ಉಗ್ರ ನಿಂದ ನಡೆದಿದ್ದ ಆತ್ಮಾಹುತಿ ಬಾಂಬ್ ದಾಳಿಯಲ್ಲಿ ಸಿಆರ್ಪಿಎಫ್ ನ 40 ಮಂದಿ ಯೋಧರು ಹುತಾತ್ಮರಾಗಿದ್ದರು.
ಪುಲ್ವಾಮಾ ಉಗ್ರ ದಾಳಿಗೆ ಪ್ರತೀಕಾರವಾಗಿ ಪಾಕಿಸ್ಥಾನದ ಬಾಲಾಕೋಟ್ ನಲ್ಲಿರುವ ಜೈಶ್ ಎ ಮೊಹಮ್ಮದ್ ಉಗ್ರ ಸಂಘಟನೆಯ ಶಿಬಿರಗಳ ಮೇಲೆ ಐಎಎಫ್ ನಡೆಸಿದ್ದ ಬಾಂಬ್ ದಾಳಿಯನ್ನು ಮತ್ತೆ ಕೆದಕಿ ಪ್ರಶ್ನಿಸಿರುವ ಪಿತ್ರೋಡ, “ಪ್ರಧಾನಿ ನರೇಂದ್ರ ಮೋದಿ ಅವರು ಭಾರತೀಯ ವಾಯು ಪಡೆ ನಡೆಸಿದ್ದ ಬಾಂಬ್ ದಾಳಿ ಯಶಸ್ವಿಯಾಗಿವೆಯೇ ಮತ್ತು ಆ ದಾಳಿಯಲ್ಲಿ 300 ಉಗ್ರರು ಹತರಾಗಿದ್ದಾರೆ ಎಂಬುದನ್ನು ಉತ್ತರಿಸಬೇಕಿದೆ’ ಎಂದು ಹೇಳಿದರು.
ಪುಲ್ವಾಮಾ ಉಗ್ರ ದಾಳಿಗಾಗಿ ಪಾಕಿಸ್ಥಾನವನ್ನು ದೂರಲು ನಿರಾಕರಿಸಿದ ಪಿತ್ರೋಡ, ಈ ರೀತಿಯ ಉಗ್ರ ದಾಳಿಗಳು ಎಲ್ಲ ಕಾಲದಲ್ಲೂ ನಡೆಯುತ್ತವೆ ಎಂದು ಹೇಳಿದರು.
”ಮುಂಬಯಿ ಮೇಲಿನ ಉಗ್ರ ದಾಳಿಯನ್ನು ಎಂಟು ಉಗ್ರರು ನಡೆಸಿದ್ದರು. ಆ ಕಾರಣಕ್ಕೆ ಆ ದಾಳಿಗೆ ಪಾಕಿಸ್ಥಾನವೇ ಕಾರಣ ಎಂದು ದೂರುವುದು ಸರಿಯಲ್ಲ. ಪುಲ್ವಾಮಾ ದಾಳಿ ನಡೆದಾಗ ಅದಕ್ಕೆ ಉತ್ತರವಾಗಿ ನಾವು ಒಂದಷ್ಟು ಯುದ್ಧ ವಿಮಾನಗಳನ್ನು ಕಳುಹಿಸಿ ಬಾಂಬ್ ದಾಳಿ ಮಾಡಿದೆವು. ಯಾರೋ ಕೆಲವರ ಕೃತ್ಯಕ್ಕೆ ಒಂದು ದೇಶವನ್ನೇ ಹೊಣೆಗಾರನನ್ನಾಗಿ ಮಾಡುವ ನಿಲುವನ್ನು ನಾನು ಒಪ್ಪುವುದಿಲ್ಲ. ಕೆಲವೇ ಕೆಲವು ಉಗ್ರರ ಕೃತ್ಯಗಳಿಗೆ ನಾವು ಒಂದು ದೇಶದ ಎಲ್ಲ ಪ್ರಜೆಗಳನ್ನು ದೂರುವುದು ಕೂಡ ಸರಿಯಲ್ಲ; ಈ ರೀತಿಯ ನಿಲುವಿನಲ್ಲಿ ನನಗೆ ನಂಬಿಕೆ ಇಲ್ಲ” ಎಂದು ಪಿತ್ರೋಡ ಅವರು ಎಎನ್ಐ ಸುದ್ದಿ ಸಂಸ್ಥೆ ಜತೆಗೆ ಮಾತನಾಡುತ್ತಾ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಅಂಡಾಶಯದ ಕ್ಯಾನ್ಸರ್ ನಿಂದ 30 ರ ಹರೆಯದಲ್ಲಿ ಖ್ಯಾತ ಫ್ಯಾಷನ್ ಇನ್ ಫ್ಲುಯೆನ್ಸರ್ ನಿಧನ
Lok Sabha Election 2024: ಝಾರ್ಖಂಡ್, ಛತ್ತೀಸ್ಗಢದಲ್ಲಿ ಗೆಲುವು ಯಾರಿಗೆ?
ಗ್ಯಾಂಗ್ ಸ್ಟರ್ ಬಿಷ್ಣೋಯಿ ಹೆಸರಿನಿಂದ ಸಲ್ಮಾನ್ ಮನೆಯಿಂದ ಕ್ಯಾಬ್ ಬುಕ್: ಯುವಕ ಅರೆಸ್ಟ್
Snake: 50 ಅಡಿ ಉದ್ದದ ದೈತ್ಯ ಹಾವು “ವಾಸುಕಿ’!
Mahanadi River Tragedy: ಮಗುಚಿದ 50 ಜನರಿದ್ದ ದೋಣಿ; ಇಬ್ಬರು ಸಾವು; ಎಂಟು ಮಂದಿ ನಾಪತ್ತೆ
MUST WATCH
ಹೊಸ ಸೇರ್ಪಡೆ
Neha ಹತ್ಯೆ ಪ್ರಕರಣ; ಎನ್ಐಎ ತನಿಖೆ; ಮಹಿಳೆಯರು ಕಿರುಕತ್ತಿ ಹೊಂದಲು ಅವಕಾಶ:ವಿಎಚ್ಪಿ ಆಗ್ರಹ
ಅಂಡಾಶಯದ ಕ್ಯಾನ್ಸರ್ ನಿಂದ 30 ರ ಹರೆಯದಲ್ಲಿ ಖ್ಯಾತ ಫ್ಯಾಷನ್ ಇನ್ ಫ್ಲುಯೆನ್ಸರ್ ನಿಧನ
Nalkane Ayama Movie Review; ದೆವ್ವದ ಕಾಟದ ಹಿಂದೊಂದು ಅಸಲಿ ಆಟ!
IPL; ಆರ್ ಸಿಬಿ ಕಪ್ ಗೆಲ್ಲಬೇಕಾದರೆ ಮೊದಲು….: ರಾಬಿನ್ ಉತ್ತಪ್ಪ ಹೇಳಿದ್ದೇನು?
Gadag; ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಕೊಲೆಗಡುಕರೇ ಪ್ರಥಮ ಪ್ರಜೆಗಳು: ಬಸವರಾಜ ಬೊಮ್ಮಾಯಿ