ಪುಣೆ – ಮುಂಬಯಿ ರೈಲು ಮಾರ್ಗ ಆಗಸ್ಟ್ 16ರವರೆಗೆ ಬಂದ್
Team Udayavani, Aug 11, 2019, 10:48 PM IST
ಮುಂಬಯಿ: ದಕ್ಷಿಣ ರೈಲ್ವೇ ವ್ಯಾಪ್ತಿಗೆ ಬರುವ ಮುಂಬಯಿ ಹಾಗೂ ಪುಣೆ ವಿಭಾಗಗಳಲ್ಲಿ ಮತ್ತು ನೈಋತ್ಯ ರೈಲ್ವೇ ವಲಯದ ವ್ಯಾಪ್ತಿಯಲ್ಲಿ ಬರುವ ಮಿರಾಜ್ – ಲೋಂಡಾ ವಿಭಾಗಗಳಲ್ಲಿ ಬರುವ ರೈಲು ಮಾರ್ಗಗಳು ಸಾಗುವ ಪ್ರದೇಶಗಳಲ್ಲಿ ಭಾರೀ ಮಳೆ ಹಾಗೂ ನೆರೆ ನೀರು ತುಂಬಿಕೊಂಡಿರುವ ಕಾರಣದಿಂದ ಈ ಮಾರ್ಗದಲ್ಲಿ ಸಂಚರಿಸುವ ಎಲ್ಲಾ ರೈಲುಗಳನ್ನು ಆಗಸ್ಟ್ 16ರವರೆಗೆ ರದ್ದುಗೊಳಿಸಲು ರೈಲ್ವೇ ಇಲಾಖೆ ನಿರ್ಧರಿಸಿದೆ.
ಡೆಕ್ಕನ್ ಕ್ವೀನ್, ಪ್ರಗತಿ ಎಕ್ಸ್ ಪ್ರೆಸ್, ಇಂಟರ್ ಸಿಟಿ ಎಕ್ಸ್ ಪ್ರೆಸ್, ಸಿನ್ಹಾಗಢ್ ಎಕ್ಸ್ ಪ್ರೆಸ್, ಮಹಾಲಕ್ಷ್ಮೀ ಎಕ್ಸ್ ಪ್ರೆಸ್, ಕೊಯ್ನಾ ಎಕ್ಸ್ ಪ್ರೆಸ್, ಓಕಾ – ತಮಿಳುನಾಡು ಎಕ್ಸ್ ಪ್ರೆಸ್, ಬಿಕಾನೇರ್ ಯಶವಂತಪುರ ಎಕ್ಸ್ ಪ್ರೆಸ್ ಮತ್ತು ನಾಂದೇಡ್ ಪನ್ವೇಲ್ ಎಕ್ಸ್ ಪ್ರೆಸ್ ರೈಲುಗಳ ಸಂಚಾರ ಆಗಸ್ಟ್ 16ರವರೆಗೆ ರದ್ದುಗೊಂಡಿದೆ.
ಒಂದುವೇಳೆ ಪ್ರವಾಹದ ಕಾರಣದಿಂದ ಯಾವುದಾದರೂ ರೈಲುಗಳು ಹಳಿಮಧ್ಯದಲ್ಲಿ ಸಿಲುಕಿಕೊಂಡಲ್ಲಿ ಪ್ರಯಾಣಿಕರನ್ನು ಸುರಕ್ಷಿತವಾಗಿ ಕರೆತರಲು ಅನುಕೂಲವಾಗುವಂತೆ 10 ದೋಣಿಗಳನ್ನು ಖರೀದಿಸಲು ಕೇಂದ್ರ ರೈಲ್ವೇ ಆಲೋಚಿಸುತ್ತಿದೆ ಎಂದು ತಿಳಿದುಬಂದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chattisgarh: ಕಳೆದ 4 ತಿಂಗಳಲ್ಲಿ 80 ನಕ್ಸಲೀಯರ ಸಾವು, 125 ಮಂದಿ ಬಂಧನ; 150 ಶರಣಾಗತಿ!
ದ. ಭಾರತದಲ್ಲಿ ಬಿಜೆಪಿ ಎಷ್ಟು ಸ್ಥಾನಗಳಲ್ಲಿ ಜಯಗಳಿಸಬಹುದು? ರೇವಂತ್ ರೆಡ್ಡಿ ಲೆಕ್ಕಚಾರವೇನು!
Delhi ; ಬಿಕಿನಿಯಲ್ಲೇ ಬಸ್ ಹತ್ತಿದ ಮಹಿಳೆ; ವಿಡಿಯೋ ವೈರಲ್
EVM VVPAT case: ಚುನಾವಣಾ ಪ್ರಕ್ರಿಯೆಯಲ್ಲಿ ಪಾವಿತ್ರ್ಯತೆ ಇರಬೇಕು: ಆಯೋಗಕ್ಕೆ ಸುಪ್ರೀಂ
Diabetes ಇದ್ದರೂ ಕೇಜ್ರಿವಾಲ್ ಸಿಹಿ ಹೆಚ್ಚೆಚ್ಚು ತಿನ್ನುತ್ತಿದ್ದಾರೆ!: ಕೋರ್ಟ್ ಗೆ ಇಡಿ