
ಸಂತಾನಕ್ಕಾಗಿ ಸೊಸೆಗೆ ಸ್ಮಶಾನದಲ್ಲಿ ಎಲುಬಿನ ಪುಡಿ ತಿನ್ನಿಸಿದರು..; ಮಂತ್ರವಾದಿ ಸೇರಿ 7 ಜನರ ವಿರುದ್ದ ಎಫ್ಐಆರ್
Team Udayavani, Jan 21, 2023, 9:51 AM IST

ಪುಣೆ: ಮಾಂತ್ರಿಕನ ಮಾತು ಕೇಳಿದ ಮನೆಯವರು ಸೊಸೆಗೆ ಮಾನವನ ಎಲುಬಿನ ಪುಡಿಯನ್ನು ತಿನ್ನಿಸಿದ ವಿಲಕ್ಷಣ ಘಟನೆ ಮಹಾರಾಷ್ಟ್ರದ ಪುಣೆಯಲ್ಲಿ ನಡೆದಿದೆ. ಸೊಸೆ ಗರ್ಭಧಾರಣೆ ಮಾಡಲೆಂದು ಅತ್ತೆ ಮಾವ ಮತ್ತು ಗಂಡ ಸ್ಥಳೀಯ ಮಂತ್ರವಾದಿಯ ಮಾತುಕೇಳಿ ಈ ರೀತಿ ಮಾಡಿದ್ದಾರೆ ಎಂದು ವರದಿಯಾಗಿದೆ.
ಈ ಬಗ್ಗೆ ಮಹಿಳೆ ದೂರು ನೀಡಿದ್ದು, ಇದರ ಆಧಾರದಲ್ಲಿ ಪೊಲೀಸರು ಗಂಡ, ಅತ್ತೆ ಮಾವ ಹಾಗೂ ಮಂತ್ರವಾದಿಯ ವಿರುದ್ಧ ದೂರು ದಾಖಲು ಮಾಡಿದ್ದಾರೆ.
ಪೊಲೀಸರು ಮೂಢನಂಬಿಕೆ ವಿರೋಧಿ ಕಾಯ್ದೆ (ಮಹಾರಾಷ್ಟ್ರ ಮಾನವ ತ್ಯಾಗ ನಿರ್ಮೂಲನೆ ಮತ್ತು ಇತರ ಅಮಾನವೀಯ, ದುಷ್ಟ ಮತ್ತು ಅಘೋರಿ ಆಚರಣೆಗಳ ತಡೆಗಟ್ಟುವಿಕೆ ಮತ್ತು ಬ್ಲ್ಯಾಕ್ ಮ್ಯಾಜಿಕ್ ಕಾಯ್ದೆ, 2013) ಸೆಕ್ಷನ್ 3 ರ ಜೊತೆಗೆ ಐಪಿಸಿಯ ಸೆಕ್ಷನ್ 498 ಎ, 323, 504, 506 ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ ಎಂದು ಪುಣೆ ನಗರ ಪೊಲೀಸ್ ಆಯುಕ್ತ ಸುಹೈಲ್ ಶರ್ಮಾ ಸುದ್ದಿಗಾರರಿಗೆ ಹೇಳಿದರು.
ಸುದ್ದಿಸಂಸ್ಥೆ ಎಎನ್ ಐ ಪ್ರಕಾರ ಮಹಿಳೆಯು ಎರಡು ಪ್ರತ್ಯೇಕ ದೂರುಗಳನ್ನು ನೀಡಿದ್ದಾರೆ. ಮೊದಲ ಪ್ರಕರಣದಲ್ಲಿ, ಮದುವೆಯ ಸಮಯದಲ್ಲಿ (2019 ರಲ್ಲಿ) ನಗದು, ಚಿನ್ನ ಮತ್ತು ಬೆಳ್ಳಿ ಆಭರಣಗಳನ್ನು ಒಳಗೊಂಡಂತೆ ವರದಕ್ಷಿಣೆಗಾಗಿ ತನ್ನ ಅತ್ತೆಯಂದಿರು ಬೇಡಿಕೆಯಿಟ್ಟಿದ್ದರು ಎಂದು ಮಹಿಳೆ ಆರೋಪಿಸಿದ್ದಾರೆ. ಎರಡನೇ ಪ್ರಕರಣದಲ್ಲಿ ಪೊಲೀಸರು ಮೂಢನಂಬಿಕೆ ವಿರೋಧಿ ಮತ್ತು ಮಾಟಮಂತ್ರ ಕಾಯ್ದೆಯ ಸಂಬಂಧಿತ ಸೆಕ್ಷನ್ ಗಳನ್ನು ವಿಧಿಸಿದ್ದಾರೆ.
ಇದನ್ನೂ ಓದಿ:ಸೀಟ್ ಬೆಲ್ಟ್ ಧರಿಸದ ಪ್ರಧಾನಿ ರಿಷಿ ಸುನಕ್ ಗೆ ದಂಡ ವಿಧಿಸಿದ ಬ್ರಿಟನ್ ಪೊಲೀಸರು
ಹಲವಾರು ಅಮವಾಸ್ಯೆಯ ರಾತ್ರಿಗಳಲ್ಲಿ ಮನೆಯಲ್ಲಿ ಮೂಢನಂಬಿಕೆಯ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಮಹಿಳೆಯ ಅತ್ತೆಯಂದಿರು ಅವಳನ್ನು ಒತ್ತಾಯಿಸಿದ್ದರು. ಅಲ್ಲದೆ ಇತರ ಕೆಲವು ಆಚರಣೆಗಳಲ್ಲಿ ಮಹಿಳೆಯನ್ನು ಬಲವಂತವಾಗಿ ಅಜ್ಞಾತ ಸ್ಮಶಾನಕ್ಕೆ ಕರೆದೊಯ್ದು ಸತ್ತ ಮನುಷ್ಯನ ಪುಡಿಮಾಡಿದ ಮೂಳೆಗಳನ್ನು ತಿನ್ನಲು ಹೇಳಿದ್ದರು.
ಇನ್ನೊಂದು ವಿಧದ ಆಚರಣೆಯಲ್ಲಿ ಅತ್ತೆ- ಮಾವ ಮಹಿಳೆಯನ್ನು ಮಹಾರಾಷ್ಟ್ರದ ಕೊಂಕಣ ಪ್ರದೇಶದ ಯಾವುದೋ ಅಜ್ಞಾತ ಪ್ರದೇಶಕ್ಕೆ ಕರೆದೊಯ್ದಿದ್ದಾರೆ ಎಂದು ಡಿಸಿಪಿ ಶರ್ಮಾ ಹೇಳಿದ್ದಾರೆ. ಅಲ್ಲಿ ಜಲಪಾತವೊಂದರ ಅಡಿಯಲ್ಲಿ “ಅಘೋರಿ” ಕಾರ್ಯ ಪಾಲ್ಗೊಳ್ಳುವಂತೆ ಒತ್ತಾಯಿಸಲಾಯಿತು. ಈ ಅಭ್ಯಾಸಗಳ ಸಮಯದಲ್ಲಿ, ಅವರು ವೀಡಿಯೊ ಕರೆಗಳ ಮೂಲಕ, ಫೋನ್ ಮೂಲಕ ಮಂತ್ರವಾದಿಗಳಿಂದ ಸೂಚನೆಗಳನ್ನು ತೆಗೆದುಕೊಳ್ಳುತ್ತಿದ್ದರು ಎಂದು ಹೇಳಿದರು.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

UP; ಅಯೋಧ್ಯೆಯಲ್ಲಿ ಬ್ರಿಜ್ ಭೂಷಣ್ ‘ಮಹಾ ರ್ಯಾಲಿ’ಗೆ ಅನುಮತಿ ನಿರಾಕಾರ

ಕಾಲೇಜು ವಿದ್ಯಾರ್ಥಿನಿಗೆ ಮಾದಕ ದ್ರವ್ಯ ನೀಡಿ ಅತ್ಯಾಚಾರ! ಕೇರಳದಲ್ಲಿ ನಡೆದ ಘಟನೆ

Chhatrapati Shivaji; ಧೈರ್ಯ-ಶೌರ್ಯಕ್ಕೆ ದಾರಿದೀಪ ಛತ್ರಪತಿ ಶಿವಾಜಿ: ಪ್ರಧಾನಿ ಮೋದಿ

Manipur ಹಿಂಸಾಚಾರ: ಮೃತ್ಯು ಸಂಖ್ಯೆ ನೂರರ ಸನಿಹ! ಹಲವರಿಗೆ ಗಂಭೀರ ಗಾಯ

Mumbai; ಜೂ. 5ರಿಂದ ಮುಂಬಯಿ -ಗೋವಾ ವಂದೇ ಭಾರತ್ ಎಕ್ಸ್ ಪ್ರಸ್ ರೈಲು
MUST WATCH
ಹೊಸ ಸೇರ್ಪಡೆ

ಕುರುಬೂರು ಅಪಘಾತ ಪ್ರಕರಣ: ಸಾವಿನ ಸಂಖ್ಯೆ 11ಕ್ಕೆ ಏರಿಕೆ

Yellur: ಗೋಶಾಲೆ ನಿರ್ಮಾಣಕ್ಕೆ ಮೀಸಲಿಟ್ಟ ಜಾಗದಲ್ಲಿ ಅದಮಾರು ಶ್ರೀಗಳಿಂದ ಗೋಪೂಜೆ

UP; ಅಯೋಧ್ಯೆಯಲ್ಲಿ ಬ್ರಿಜ್ ಭೂಷಣ್ ‘ಮಹಾ ರ್ಯಾಲಿ’ಗೆ ಅನುಮತಿ ನಿರಾಕಾರ

ಕಾಲೇಜು ವಿದ್ಯಾರ್ಥಿನಿಗೆ ಮಾದಕ ದ್ರವ್ಯ ನೀಡಿ ಅತ್ಯಾಚಾರ! ಕೇರಳದಲ್ಲಿ ನಡೆದ ಘಟನೆ

fishing ಋತುವಿಗೆ ತಾತ್ಕಾಲಿಕ ವಿರಾಮ; ಮತ್ಸ್ಯಕ್ಷಾಮ, ದರ ಇಲ್ಲ