ಮಗುವನ್ನು ಕೊಂದು ಬೆಡ್ ನೊಳಗೆ ಸುತ್ತಿಟ್ಟು ಪ್ರಿಯಕರನ ಜತೆ ಪರಾರಿಯಾದ ತಾಯಿ!
ಭಾನುವಾರ ಕೆಲಸ ಮುಗಿಸಿ ಬಂದಾಗ ಪತ್ನಿ ಮತ್ತು ಮಗು ಮನೆಯಲ್ಲಿ ಇರಲಿಲ್ಲ.
Team Udayavani, Jan 28, 2020, 11:29 AM IST
ಚಂಡೀಗಢ್:ಎರಡೂವರೆ ವರ್ಷದ ಮಗುವನ್ನು ಉಸಿರುಗಟ್ಟಿ ಸಾಯಿಸಿ ನಂತರ ಶವವನ್ನು ಬೆಡ್ ಒಳಗೆ ಸುತ್ತಿಟ್ಟು ಮಗುವಿನ ತಾಯಿ ಪ್ರಿಯಕರನ ಜತೆ ಓಡಿಹೋಗಿರುವ ಘಟನೆ ಚಂಡೀಗಢ ಸಮೀಪದ ಬುರೈಲ್ ಗ್ರಾಮದಲ್ಲಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ತನ್ನ ಪತ್ನಿ ಮಗುವನ್ನು ಕೊಂದು ಬೆಡ್ ನೊಳಗೆ ಸುತ್ತಿಟ್ಟು ಪ್ರಿಯಕರನ ಜತೆ ಓಡಿಹೋಗಿರುವುದಾಗಿ ಪತಿ ಆರೋಪಿಸಿದ್ದಾನೆ.
ಮಗುವಿನ ತಂದೆ ದಶ್ ರಥ್ ಇಲೆಕ್ಟ್ರಿಶಿಯನ್ ಆಗಿ ಕೆಲಸ ಮಾಡುತ್ತಿದ್ದಾರೆ. ಭಾನುವಾರ ಕೆಲಸ ಮುಗಿಸಿ ಬಂದಾಗ ಪತ್ನಿ ಮತ್ತು ಮಗು ಮನೆಯಲ್ಲಿ ಇರಲಿಲ್ಲ. ಬಹುಶಃ ಪತ್ನಿ ಮಗುವಿನ ಜತೆ ತವರು ಮನೆಗೆ ಹೋಗಿರಬೇಕು ಎಂದು ಪತಿ ಭಾವಿಸಿದ್ದ. ನಂತರ ಪತ್ನಿಗೆ ಕರೆ ಮಾಡಿದಾಗ, ಮಗುವನ್ನು ಬೆಡ್ ನೊಳಗೆ ಸುತ್ತಿ ಇಟ್ಟಿರುವುದಾಗಿ ತಿಳಿಸಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.
ನಂತರ ಬೆಡ್ ಅನ್ನು ತೆರೆದು ನೋಡಿದಾಗ ಎರಡೂವರೆ ವರ್ಷದ ಮಗನ ಶವ ಪತ್ತೆಯಾಗಿತ್ತು. ಕೂಡಲೇ ಪೊಲೀಸರಿಗೆ ಕರೆ ಮಾಡಿ ತನ್ನ ಪತ್ನಿ ಮಗುವನ್ನು ಕೊಲೆ ಮಾಡಿ, ಪ್ರಿಯಕರನ ಜತೆ ಓಡಿಹೋಗಿರುವುದಾಗಿ ತಿಳಿಸಿದ್ದ.
ಪ್ರಾಥಮಿಕ ತನಿಖೆಯಲ್ಲಿ ಆರೋಪಿ ರೂಪ ತಾನೇ ಮಗುವನ್ನು ಕೊಂದಿರುವುದಾಗಿ ತಪ್ಪೊಪ್ಪಿಕೊಂಡಿರುವುದಾಗಿ ವರದಿ ತಿಳಿಸಿದೆ. ಕಳೆದ ವರ್ಷ ಮಗಳನ್ನು ಕೂಡಾ ಹತ್ಯೆಗೈದಿರುವುದಾಗಿ ತಿಳಿಸಿದ್ದಾಳೆ. ಈ ಎರಡೂ ಪ್ರಕರಣದ ಹಿಂದೆ ಪ್ರಿಯಕರ ಶಾಮೀಲಾಗಿರುವುದಾಗಿ ಪೊಲೀಸರು ಶಂಕಿಸಿದ್ದಾರೆ.
2016ರಲ್ಲಿ ದಶ್ ರಥ್ ರೂಪಾಳನ್ನು ವಿವಾಹವಾಗಿದ್ದ. 2017ರಲ್ಲಿ ಮಗ ದಿವ್ಯಾಂಶು ಜನಿಸಿದ್ದ. 2019ರಲ್ಲಿ ಮಗಳು ಕೋಮಲ ಜನಿಸಿದ್ದಳು. ಅದೇ ವರ್ಷ ಹೆಣ್ಣು ಮಗು ನಿಗೂಢವಾಗಿ ಸಾವನ್ನಪ್ಪಿತ್ತು ಎಂದು ವರದಿ ವಿವರಿಸಿದೆ.
ಎಫ್ ಐಆರ್ ದಾಖಲಿಸಿಕೊಂಡ ಪೊಲೀಸರು ಖಚಿತ ಮಾಹಿತಿ ಪಡೆದು ರೂಪಾಳನ್ನು ಬಂಧಿಸಿದ್ದರು. ರೂಪಾಳ ವಿರುದ್ಧ ಭಾರತೀಯ ದಂಡ ಸಂಹಿತೆ 302ರ ಅಡಿ ಪ್ರಕರಣ ದಾಖಲಿಸಲಾಗಿದೆ ಎಂದು ವರದಿ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
AMU: ಇತಿಹಾಸದಲ್ಲೇ ಮೊದಲು… ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯಕ್ಕೆ ಮಹಿಳಾ ಉಪಕುಲಪತಿ ನೇಮಕ
Telangana Election 2024: ಕಳೆಗುಂದಿದ ಬಿಆರ್ಎಸ್: ಕಾಂಗ್ರೆಸ್-ಬಿಜೆಪಿ ಕಾದಾಟ
Insulin: ಶುಗರ್ ಲೆವೆಲ್ ಏರಿಕೆ… ಜೈಲಿನಲ್ಲಿರುವ ಕೇಜ್ರಿವಾಲ್ ಗೆ ಇನ್ಸುಲಿನ್ ನೀಡಿಕೆ
Viral Video: ಕುಟುಂಬಸ್ಥರಿಂದಲೇ ವಧುವಿನ ಅಪಹರಣಕ್ಕೆ ಯತ್ನ; ರಾದ್ಧಾಂತವಾದ ಮದುವೆ ಮಂಟಪ
Netizens; 10ನೇ ತರಗತಿ ಪರೀಕ್ಷೆ ಟಾಪರ್ ಟ್ರೋಲ್: ನೆಟ್ಟಿಗರಿಂದ ತರಾಟೆ
MUST WATCH
ಹೊಸ ಸೇರ್ಪಡೆ
ಮಹಿಳೆ ವಿವಸ್ತ್ರಗೊಳಿಸಿ ಹಲ್ಲೆ: ಜೈಲಿನಿಂದ ಬಿಡುಗಡೆಯಾದ ಆರೋಪಿಗಳಿಗೆ ಹೂಮಾಲೆ ಹಾಕಿ ಸ್ವಾಗತ
Lok Sabha Election: ಏಪ್ರಿಲ್ 28 ರಂದು ಬೆಳಗಾವಿಗೆ ಪ್ರಧಾನಿ ಮೋದಿ
Editorial: ಗುಕೇಶ್ ಗೆಲುವು- ಭಾರತದ ಯುವಶಕ್ತಿಯ ಸಂಕೇತ
AMU: ಇತಿಹಾಸದಲ್ಲೇ ಮೊದಲು… ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯಕ್ಕೆ ಮಹಿಳಾ ಉಪಕುಲಪತಿ ನೇಮಕ
Bengaluru: ಕದಂಬ ಹೋಟೆಲ್ ಸ್ಫೋಟ ಮಾಡುವುದಾಗಿ ಬೆದರಿಕೆ