ಹರ್ಕೀರತ್ ಅಹ್ಲುವಾಲಿಯಾಗೆ ವಿಶ್ವ ಕೃಷಿ ಪ್ರವಾಸೋದ್ಯಮ ಪ್ರಶಸ್ತಿ
Team Udayavani, May 11, 2018, 7:28 PM IST
ಚಂಡೀಗಢ : 2018ರ ಸಾಲಿನ ವಿಶ್ವ ಕೃಷಿ ಪ್ರವಾಸೋದ್ಯಮ ಪ್ರಶಸ್ತಿಗೆ ಆಯ್ಕೆಯಾಗಿರುವ ಪ್ರಖ್ಯಾತ ತೋಟಗಾರಿಕಾ ತಜ್ಞ ಹರ್ಕೀರತ್ ಅಹ್ಲುವಾಲಿಯಾ ಅವರನ್ನು ಪಂಜಾಬ್ ಮುಖ್ಯಮಂತ್ರಿ ಅಮರೀಂದರ್ ಸಿಂಗ್ ಅಭಿನಂದಿಸಿದ್ದಾರೆ.
ತಮ್ಮ ಅಭಿನಂದನಾ ಸಂದೇಶದಲ್ಲಿ ಮುಖ್ಯಮಂತ್ರಿಗಳು, “ಅಹ್ಲುವಾಲಿಯಾ ಅವರ ಕಿತ್ತಳೆ ತೋಟ ರಾಜ್ಯದ ಹೆಮ್ಮೆಯಾಗಿದೆ; ಗ್ರಾಮೀಣ ಕೃಷಿ ಪ್ರವಾಸೋದ್ಯಮಕ್ಕೆ ಅಹ್ಲುವಾಲಿಯಾ ಅವರು ತಮ್ಮ ಪ್ರಗತಿಪರ ಕೃಷಿ ತಂತ್ರಜ್ಞಾನದ ಮೂಲಕ ನೀಡಿರುವ ಮಹತ್ವಪೂರ್ಣ ಕಾಣಿಕೆಯನ್ನು ಪರಿಗಣಿಸಿ ಸಂದಿರುವ ಈ ವಿಶ್ವ ಪ್ರಶಸ್ತಿ ಅವರ ಸಾಧನೆಗೆ ಸಂದಿರುವ ಪುರಸ್ಕಾರವಾಗಿದೆ’ಎಂದು ಹೇಳಿದ್ದಾರೆ.
ಅಹ್ಲುವಾಲಿಯಾ ಅವರಿಗೆ ಇದೇ ಮೇ 16ರಂದು ಮುಂಬಯಿಯಲ್ಲಿ ನಡೆಯಲಿರುವ 11ನೇ ವಿಶ್ವ ಕೃಷಿ ಪ್ರವಾಸೋದ್ಯಮ ಸಮಾವೇಶದಲ್ಲಿ 2018ರ ವಿಶ್ವ ಕೃಷಿ ಪ್ರವಾಸೋದ್ಯಮ ಪ್ರಶಸ್ತಿಯನ್ನು ಪ್ರದಾನಿಸಲಾಗುವುದು ಎಂದು ವರದಿ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Madhya Pradesh Rally; ಕೈಯಿಂದ ಮೀಸಲಾತಿ ಕಸಿಯುವ ಯತ್ನ: ಪ್ರಧಾನಿ ಮೋದಿ
Rahul Gandhi: ಜಾತಿಗಣತಿಯನ್ನು ಯಾವ ಶಕ್ತಿಯೂ ತಡೆಯಲಾರದು: ರಾಹುಲ್ ಗಾಂಧಿ
Rajveer Diler: ಹೃದಯಾಘಾತದಿಂದ ಬಿಜೆಪಿ ಸಂಸದ ರಾಜ್ವೀರ್ ದಿಲೇರ್ ನಿಧನ
Scam: 25,000 ಕೋಟಿ ಬ್ಯಾಂಕ್ ಹಗರಣ ಪ್ರಕರಣ: ಅಜಿತ್ ಪವಾರ್ ಪತ್ನಿ ಸುನೇತ್ರಾಗೆ ಕ್ಲೀನ್ ಚಿಟ್
LS Polls: ವೇದಿಕೆಯಲ್ಲಿ ಭಾಷಣ ಮಾಡುತ್ತಲೇ ಅಸ್ವಸ್ಥಗೊಂಡ ಕೇಂದ್ರ ಸಚಿವ ನಿತಿನ್ ಗಡ್ಕರಿ