ಪೈಲಟ್‌ ಇಲ್ಲದೆ ಪುಷ್ಪಕ ವಿಮಾನ ಯಾನ


Team Udayavani, Nov 10, 2019, 4:05 AM IST

pailot

ಪುಷ್ಪಕ ವಿಮಾನ….ರಾಮಾಯಣ ಗ್ರಂಥದಲ್ಲಿ ಕೇಳಿಬರುವ ಹೆಸರಿದು. ಇವತ್ತಿಗೂ ಈ ಹೆಸರಿನ ಬಗ್ಗೆ ಚರ್ಚೆ ನಡೆಯುತ್ತಿದೆ. ಆಧುನಿಕ ಕಾಲದಲ್ಲಿ ವಿಜ್ಞಾನ ತೀವ್ರವಾಗಿ ಬೆಳೆದಂತೆಲ್ಲ ಕಲ್ಪನೆ ಮಾತ್ರವಾಗಿದ್ದ ವಿಮಾನ, ವಾಸ್ತವದಲ್ಲೂ ಸಾಧ್ಯ ಎಂದು ತೋರಿಸಿಕೊಡಲಾಗಿದೆ. ಆದರೆ, ಈ ವಿಮಾನಗಳಲ್ಲಿ ಹಲವು ಕೊರತೆಗಳಿವೆ. ಆ ಕೊರತೆಗಳು ವಾಲ್ಮೀಕಿ ವಿರಚಿತ ರಾಮಾಯಣದಲ್ಲಿ ಬರುವ ಪುಷ್ಪಕವಿಮಾನದಲ್ಲಿಲ್ಲ!

ಈಗಿನ ಕಾಲದಲ್ಲಿರುವ ವಿಮಾನಗಳು ಅತಿವೇಗದಲ್ಲಿ ಸಂಚರಿಸುತ್ತವೆ. ಪುಷ್ಪಕವಿಮಾನ ಮನೋವೇಗದಲ್ಲಿ ಸಂಚರಿಸುತ್ತದೆ. ಎಲ್ಲಿಗೆ ಹೋಗಬೇಕೆಂದು ನೀವು ಇಚ್ಛಿಸುತ್ತೀರೋ ಆ ಜಾಗಕ್ಕೆ ಹೋಗಿ ನಿಲ್ಲುತ್ತದೆ. ಅದಕ್ಕೆ ಯಾವುದೇ ಪೈಲಟ್‌ಗಳ ಅಗತ್ಯವಿಲ್ಲ. ಇದಕ್ಕಿರುವ ಇನ್ನೊಂದು ಅಸಾಮಾನ್ಯ ಸೌಲಭ್ಯವೆಂದರೆ, ಇದು ಬೇಕೆಂದಾಗ ಹೆಲಿಕಾಪ್ಟರ್‌ ಗಾತ್ರಕ್ಕೆ ಇಳಿಯುತ್ತದೆ, ಅಗತ್ಯಬಿದ್ದಾಗ ಎಷ್ಟು ಲಕ್ಷ ಜನರನ್ನು ಬೇಕಾದರೂ ಹೊತ್ತೂಯ್ಯಬಲ್ಲಷ್ಟು ಹಿಗ್ಗುತ್ತದೆ.

ರಾವಣನನ್ನು ಕೊಂದು ಶ್ರೀರಾಮ ಮರಳಿ ಅಯೋಧ್ಯೆಗೆ ಹೊರಟು ನಿಂತಾಗ, ಲಕ್ಷಾಂತರ ಕಪಿಗಳನ್ನು (ರಾಮಾಯಣದಲ್ಲಿ ನೀಡಿರುವ ಕಪಿಗಳ ಲೆಕ್ಕವನ್ನೇ ತೆಗೆದುಕೊಂಡರೆ ಇಡೀ ಭೂಮಂಡಲದಲ್ಲಿ ಕಪಿಗಳನ್ನು ಹೊರತು ಬೇರೆ ಜೀವಿಗಳಿರುವುದು ಸಾಧ್ಯವಿಲ್ಲ, ಇಲ್ಲಿ ಅದನ್ನು ಗ್ರಹಿಕೆಗಾಗಿ ಲಕ್ಷಗಳ ಮಟ್ಟಕ್ಕೆ ಇಳಿಸಲಾಗಿದೆ!) ಒಂದೇ ವಿಮಾನದಲ್ಲಿ ಶ್ರೀರಾಮ ಕರೆದುಕೊಂಡು ಹೊರಡುತ್ತಾನೆ. ರಾವಣನ ವಶದಲ್ಲಿದ್ದ ಈ ವಿಮಾನವನ್ನು ರಾಮ ನಂತರ ಅದರ ನೈಜ ಒಡೆಯ ಕುಬೇರ ನಿಗೆ ಒಪ್ಪಿಸುತ್ತಾನೆ. ಸ್ವತಃ ಕುಬೇರನೇ ಇಟ್ಟುಕೊ ಳ್ಳಲು ಆಗ್ರಹಿಸಿದರೂ ರಾಮ ತಿರಸ್ಕರಿಸುತ್ತಾನೆ. ಇದು ರಾಮ ನಮಗೆ ನೀಡುವ ಆದರ್ಶ.

ವಿಜ್ಞಾನಕ್ಕೆ ಕೌತುಕ: ಸಾವಿರಾರು ವರ್ಷಗಳ ಕೆಳಗೇ ಇಂತಹದೊಂದು ವಿಮಾನವನ್ನು ಕವಿ ವಾಲ್ಮೀಕಿ ಚಿತ್ರಿಸಿರಬೇಕಾದರೆ ಅಂತಹ ವಿಮಾನಗಳು ಆಗಿನ ಕಾಲದಲ್ಲಿ ಇದ್ದಿರಬಹುದು, ಆ ತಂತ್ರಜ್ಞಾನ ಭಾರತೀಯರಿಗೆ ಗೊತ್ತಿತ್ತು ಎಂಬ ವಾದವಿದೆ. ಭಾರದ್ವಾಜ ಸಂಹಿತೆಯಲ್ಲಿ ವಿಮಾನ ನಿರ್ಮಾಣದ ತಂತ್ರಜ್ಞಾನವೇ ಇದೆ ಎಂದು ವಿದ್ವಾಂಸರು ಹೇಳುತ್ತಾರೆ.

ಸೀತಾಪಹರಣಕ್ಕೆ ಬಳಕೆ: ರಾವಣ ಅಷ್ಟು ಶೀಘ್ರವಾಗಿ ಸೀತೆಯನ್ನು ಅಪಹರಿಸಲು ಸಾಧ್ಯವಾಗಿದ್ದು, ಪುಷ್ಪಕವಿಮಾನದ ಮೂಲಕ. ಆತ ಮನೋವೇಗದಿಂದ ಬಳಿಬಂದು ಸೀತೆಯನ್ನು ಎತ್ತಿಕೊಂಡು ಪುಷ್ಪಕದ ಮೂಲಕ ಹಾರಿಹೋಗುತ್ತಾನೆ.

ರತ್ನಖಚಿತ ವಿಮಾನದೊಳಗೆ ರಾವಣನ ಅಂತಃಪುರ…: ಪುಷ್ಪಕ ಹೇಗಿದೆ ಎನ್ನುವುದನ್ನು ರಾಮಾಯಣದ ಸುಂದರಕಾಂಡದಲ್ಲಿ ವಿವರಿಸಲಾಗಿದೆ. ಅದು ರಾವಣನ ಅಂತಃಪುರವೂ ಹೌದಾಗಿತ್ತು. ರತ್ನಖಚಿತವಾಗಿತ್ತು. ಅದರ ಮೇಲೆ ಪುಷ್ಪಗಳು ಹರಡಿಕೊಂಡಿದ್ದವು. ಅತ್ಯಂತ ಸುಂದರ ಚಿತ್ರಗಳು, ಕೆತ್ತನೆಗಳನ್ನು ಅದರ ಮೇಲೆ ಮಾಡಲಾಗಿತ್ತು.

ಪುಷ್ಪಕದ ಮೂಲ ಒಡೆಯ ಬ್ರಹ್ಮ!: ಮೂಲತಃ ಈ ವಿಮಾನ ಬ್ರಹ್ಮನಿಗೆ ಸೇರಿದ್ದು. ತಪಸ್ಸಿಗೆ ಮೆಚ್ಚಿ ಬ್ರಹ್ಮ ಅದನ್ನು ಕುಬೇರನಿಗೆ ನೀಡುತ್ತಾನೆ. ಮುಂದೆ ರಾವಣ, ಕುಬೇರನನ್ನು ಶ್ರೀಲಂಕಾದಿಂದ ಹೊರಗಟ್ಟಿ ಪುಷ್ಪಕವನ್ನು ತನ್ನ ವಶಕ್ಕೆ ಪಡೆದುಕೊಳ್ಳುತ್ತಾನೆ.

ಟಾಪ್ ನ್ಯೂಸ್

Outrage over mistakes in CET exam question paper; Request for mercy marks

CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ

1-qweeweq

Viral video; ಯಾರಿವರು ಇಶಾ ಅರೋರಾ? ಮತದಾನದ ದಿನ ಭಾರಿ ಸುದ್ದಿ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರಕಾರ ಬದ್ದ: ಸತೀಶ್ ಜಾರಕಿಹೊಳಿ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!

Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!

Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು

Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು

Lok Sabha 1 Phase: ನಿತಿನ್‌ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…

Lok Sabha 1 Phase: ನಿತಿನ್‌ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…

Navy chief: ಭಾರತೀಯ ನೌಕಾಪಡೆಯ ನೂತನ ಮುಖ್ಯಸ್ಥರಾಗಿ ದಿನೇಶ್ ತ್ರಿಪಾಠಿ ನೇಮಕ

Navy chief: ಭಾರತೀಯ ನೌಕಾಪಡೆಯ ನೂತನ ಮುಖ್ಯಸ್ಥರಾಗಿ ದಿನೇಶ್ ತ್ರಿಪಾಠಿ ನೇಮಕ

Stones Pelted: ಪಶ್ಚಿಮ ಬಂಗಾಳ: ಮತದಾನದ ವೇಳೆ ಕಲ್ಲು ತೂರಾಟ… ಬಿಜೆಪಿ ನಾಯಕನಿಗೆ ಗಾಯ

Stones Pelted: ಮತದಾನದ ವೇಳೆ ಕಲ್ಲು ತೂರಾಟ… ಬಿಜೆಪಿ ನಾಯಕನಿಗೆ ಗಾಯ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

ಧರ್ಮ ಮಾರ್ಗದಲ್ಲಿ ನಡೆದರಷ್ಟೇ ಜೀವನ ಸಾರ್ಥಕ: ಶ್ರೀ ವಿಧುಶೇಖರಶ್ರೀ

ಧರ್ಮ ಮಾರ್ಗದಲ್ಲಿ ನಡೆದರಷ್ಟೇ ಜೀವನ ಸಾರ್ಥಕ: ಶ್ರೀ ವಿಧುಶೇಖರಶ್ರೀ

Outrage over mistakes in CET exam question paper; Request for mercy marks

CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ

Karkala: ಕಾಂಗ್ರೆಸ್ಸಿನಿಂದ ಬೃಹತ್‌ ಪರಿವರ್ತನಾ ರ್‍ಯಾಲಿ

Karkala: ಕಾಂಗ್ರೆಸ್ಸಿನಿಂದ ಬೃಹತ್‌ ಪರಿವರ್ತನಾ ರ್‍ಯಾಲಿ

1-qweeweq

Viral video; ಯಾರಿವರು ಇಶಾ ಅರೋರಾ? ಮತದಾನದ ದಿನ ಭಾರಿ ಸುದ್ದಿ

ಕೊಪ್ಪಳ: ಮಗ ರಾಜಶೇಖರ ವಿರುದ್ಧ ತಂದೆ ನಾಮಪತ್ರ ಸಲ್ಲಿಕೆ!

ಕೊಪ್ಪಳ: ಮಗ ರಾಜಶೇಖರ ವಿರುದ್ಧ ತಂದೆ ನಾಮಪತ್ರ ಸಲ್ಲಿಕೆ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.