ಚೀನ ಮೀರಿಸಿದ ದೇಶದ ಅರ್ಥ ವ್ಯವಸ್ಥೆ
Team Udayavani, Mar 1, 2018, 7:30 AM IST
ಹೊಸದಿಲ್ಲಿ: ನೋಟು ಅಪಮೌಲ್ಯ ಮತ್ತು ಜಿಎಸ್ಟಿ ಜಾರಿಯಿಂದಾಗಿ ಕುಸಿತದ ಹಾದಿಯಲ್ಲಿದ್ದ ದೇಶದ ಅಭಿವೃದ್ಧಿ ದರ ಚೇತರಿಕೆ ಕಾಣಲು ಶುರು ಮಾಡಿದ್ದು, ಸಹಜವಾಗಿಯೇ ಕೇಂದ್ರ ಸರಕಾರಕ್ಕೆ ಖುಷಿ ತಂದಿದೆ. ಅಕ್ಟೋಬರ್ – ಡಿಸೆಂಬರ್ ಅವಧಿಯ ತ್ತೈಮಾಸಿಕದಲ್ಲಿ ಶೇ. 7.2 ರಷ್ಟು ಜಿಡಿಪಿ ದರ ದಾಖಲಿಸಲಾಗಿದ್ದು, ಜಗತ್ತಿನಲ್ಲೇ ವೇಗವಾಗಿ ಅಭಿವೃದ್ಧಿ ಕಾಣುತ್ತಿರುವ ಆರ್ಥಿಕತೆ ಎಂಬ ಹೆಗ್ಗಳಿಕೆಗೆ ಮತ್ತೆ ಪಾತ್ರವಾಗಿದೆ. ಅಲ್ಲದೆ, ಕಳೆದ ಐದು ತ್ತೈಮಾಸಿಕಗಳಲ್ಲೂ ಇದೇ ಅತಿ ಹೆಚ್ಚು ಜಿಡಿಪಿ ದರ.
ಆರ್ಥಿಕತೆ ಕುಸಿತದ ಹಾದಿಯಲ್ಲಿದ್ದರಿಂದ ಭಾರತದ ಜಿಡಿಪಿ ದರ ಇಳಿಕೆಯಾದ್ದರಿಂದ ಚೀನ ಮೊದಲ ಸ್ಥಾನಕ್ಕೆ ಹೋಗಿತ್ತು. ಸದ್ಯ ನೆರೆಯ ಅಭಿವೃದ್ಧಿ ದರ ಶೇ. 6.8ರಷ್ಟಿದೆ. ಬುಧವಾರ ಡಿ.ವಿ. ಸದಾನಂದ ಗೌಡ ನೇತೃತ್ವದ ಕೇಂದ್ರೀಯ ಸಾಂಖೀಕ ಇಲಾಖೆ ವಾಸ್ತವ ದತ್ತಾಂಶ ಬಿಡುಗಡೆ ಮಾಡಿದೆ.
ಮೂಡ್ ಕೂಡ ಓಕೆ
ಮೂಡೀಸ್ನ ಹೂಡಿಕೆದಾರರ ಸೇವೆಯೂ 2018ನೇ ಸಾಲಿನಲ್ಲಿ ಭಾರತದ ಜಿಡಿಪಿ ದರ ಶೇ.7.6ಕ್ಕೆ ಏರಿಕೆಯಾಗಲಿದೆ ಎಂದು ಹೇಳಿದೆ. ಅಲ್ಲದೆ 2019ಕ್ಕೆ ಈ ದರ ಶೇ.7.5ರಷ್ಟಕ್ಕೆ ನಿಲ್ಲಲಿದೆ ಎಂದೂ ನಿರೀಕ್ಷೆ ಮಾಡಿದೆ. ನೋಟು ಅಪಮೌಲ್ಯ , ಜಿಎಸ್ಟಿಯ ಹೊಡೆತದಿಂದ ಭಾರತದ ಆರ್ಥಿಕತೆ ಹೊರ ಬಂದಿರುವುದಕ್ಕೆ ಇದು ಸಾಕ್ಷಿಯಾಗಿದೆ ಎಂದೂ ಅಭಿಪ್ರಾಯಿಸಲಾಗಿದೆ.
ಜಿಡಿಪಿ ಜಿಗಿತ ಶೇ. 7.2 ಡಿಸೆಂಬರ್ ಅಂತ್ಯದವರೆಗಿನ ತ್ತೈಮಾಸಿಕದ ಜಿಡಿಪಿ
ಶೇ. 6.5 ಈ ಹಿಂದೆ ಮಾಡಲಾಗಿದ್ದ ನಿರೀಕ್ಷೆ
ಶೇ. 7 ಅ-ಮಾರ್ಚ್ ಅವಧಿಯ ಸರಾಸರಿ ಅಭಿವೃದ್ಧಿ ದರ ನಿರೀಕ್ಷೆ
ಶೇ. 8.1ಕಳೆದ ತ್ತೈಮಾಸಿಕದಲ್ಲಿ ಉತ್ಪಾದನಾ ವಲಯದಲ್ಲಿ ಕಂಡ ಅಭಿವೃದ್ಧಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mahanadi River Tragedy: ಮಗುಚಿದ 50 ಜನರಿದ್ದ ದೋಣಿ; ಇಬ್ಬರು ಸಾವು; ಎಂಟು ಮಂದಿ ನಾಪತ್ತೆ
Loksabha Election; ತಮಿಳುನಾಡಿನಲ್ಲಿ ಮರು ಮತದಾನಕ್ಕೆ ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಆಗ್ರಹ
UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು
Ban in Singapore; ಎವರೆಸ್ಟ್ ಮಸಾಲಾದಲ್ಲಿ ಕ್ರಿಮಿನಾಶಕ ಅಂಶ?
Gold 10 ಗ್ರಾಂ ಬೆಲೆ 74,100 ರೂ.: ಇದು ನೂತನ ದಾಖಲೆ
MUST WATCH
ಹೊಸ ಸೇರ್ಪಡೆ
Davanagere; ಗಾಯಿತ್ರಿ ಸಿದ್ದೇಶ್ವರ್ ಅಂತಿಮ ನಾಮಪತ್ರ ಸಲ್ಲಿಕೆ; ಭರ್ಜರಿ ಮೆರವಣಿಗೆ
Rain: ಕಟಪಾಡಿ-ಶಿರ್ವ ರಾಜ್ಯ ಹೆದ್ದಾರಿ; ಮೊದಲ ಮಳೆಯ ಅವಾಂತರ; ರಸ್ತೆ ಕೆಸರುಮಯ
Gadag ಬೆಳ್ಳಂಬೆಳಗ್ಗೆ ವರುಣಾರ್ಭಟ ಆರಂಭ; ಮುಂಗಾರು ನಿರೀಕ್ಷೆ ಹೆಚ್ಚಿಸಿದ ಅಶ್ವಿನಿ ಮಳೆ
Mahanadi River Tragedy: ಮಗುಚಿದ 50 ಜನರಿದ್ದ ದೋಣಿ; ಇಬ್ಬರು ಸಾವು; ಎಂಟು ಮಂದಿ ನಾಪತ್ತೆ
Loksabha Election; ತಮಿಳುನಾಡಿನಲ್ಲಿ ಮರು ಮತದಾನಕ್ಕೆ ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಆಗ್ರಹ