ರೈತರಿಗೆ ರಾಹುಲ್ ಆಶ್ವಾಸನೆ
Team Udayavani, Dec 24, 2018, 6:00 AM IST
ಹೊಸದಿಲ್ಲಿ: ರೈತರ ಭವಿಷ್ಯವನ್ನು ಹಸನಾಗಿಸುವುದಕ್ಕಾಗಿ ತಮ್ಮ ಕೈಲಾದ ಎಲ್ಲಾ ಪ್ರಯತ್ನಗಳನ್ನೂ ಮಾಡುವುದಾಗಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ರೈತರಿಗೆ ಆಶ್ವಾಸನೆ ನೀಡಿದ್ದಾರೆ.
ರಾಷ್ಟ್ರೀಯ ರೈತರ ದಿನಾಚರಣೆಯ (ಕಿಸಾನ್ ದಿವಸ್) ಹಿನ್ನೆಲೆಯಲ್ಲಿ ಭಾನುವಾರ ಟ್ವೀಟ್ ಮಾಡಿರುವ ಅವರು, “”ನಾನು ನೀಡಿರುವ ಈ ಆಶ್ವಾಸನೆ ಕೇವಲ ಆಶ್ವಾಸನೆಯಲ್ಲ. ನಿಮ್ಮಿಂದಾಗಿಯೇ ನಾವಿದ್ದೇವೆ. ನಿಮಗೆ ಅನಂತ ಧನ್ಯವಾದಗಳು” ಎಂದಿದ್ದಾರೆ. ಭಾರತದ ಐದನೇ ಪ್ರಧಾನಿ ಚೌಧರಿ ಚರಣ್ ಸಿಂಗ್ ಅವರ ಜನ್ಮದಿನವನ್ನು ರೈತರ ದಿನವನ್ನಾಗಿ ರಾಷ್ಟ್ರವ್ಯಾಪಿ ಆಚರಿಸಲಾಗುತ್ತದೆ.