ಕೇಂದ್ರದ ಕೋವಿಡ್ ಲಸಿಕಾ ನೀತಿ “ತಾರತಮ್ಯ” : ಕಾಂಗ್ರೆಸ್
Team Udayavani, Apr 29, 2021, 4:33 PM IST
ನವ ದೆಹಲಿ : ದೇಶದಲ್ಲಿ ಕೋವಿಡ್ ಸೋಂಕು ಒಂದೆಡೆ ಜಾಸ್ತಿಯಾಗುತ್ತಿದ್ದಿದ್ದರೆ, ಇನ್ನೊಂದೆಡೆ ಕೋವಿಡ್ ಲಸಿಕೆ ಅಭಿಯಾನವೂ ಕೂಡ ನಡೆಯುತ್ತಿದೆ. ಇನ್ನು ಆರೋಗ್ಯ ಕೇಂದ್ರಗಳಲ್ಲಿ ಲಸಿಕೆಯ ಕೊರತೆಯಿಂದ ಜನ ಸಾಲುಗಟ್ಟಿ ನಿಂತಿರುವ ದೃಶ್ಯಗಳನ್ನು ಕೂಡ ಸುದ್ದಿ ಸಂಸ್ಥೆಗಳು, ವಾಹಿನಿಗಳು ವರದಿ ಮಾಡಿವೆ.
ಲಸಿಕೆಯ ಕೊರತೆಯ ಹಿನ್ನೆಲೆಯಲ್ಲಿ ಲಸಿಕೆ ಅಭಿಯಾನಕ್ಕೆ ದಿನ ನಿತ್ಯ ಕೇಂದ್ರ ಸರ್ಕಾರ ವಯೋಮಾನದ ಆಧಾರದ ಮೇಲೆ ಹೊಸ ಹೊಸ ನೀತಿಯನ್ನು ಜಾರಿ ಮಾಡುತ್ತಿರುವ ಬೆನ್ನಿಗೆ ರಾಷ್ಟ್ರೀಯ ಕಾಂಗ್ರೆಸ್ ಪಕ್ಷ ಅದನ್ನು ತೀವ್ರವಾಗಿ ವಿರೋಧ ಮಾಡಿದೆ.
ಭಾರತೀಯ ಎಲ್ಲಾ ನಾಗರಿಕರಿಗೂ ಕೋವಿಡ್ ಲಸಿಕೆಯನ್ನು ಉಚಿತವಾಗಿ ನೀಡಬೇಕು. ಕೇಂದ್ರದ ಕೋವಿಡ್ ಲಸಿಕಾ ನೀತಿ ತಾರತಮ್ಯ ಎಂದು ಕಾಂಗ್ರೆಸ್ ಆರೋಪ ಮಾಡಿದೆ.
ಓದಿ : ಕರ್ನಾಟಕ,ದೆಹಲಿ ಸೇರಿ ಹಲವು ರಾಜ್ಯಗಳಲ್ಲಿ 18 ವರ್ಷ ಮೇಲ್ಪಟ್ಟವರಿಗೆ ಮೇ 1ರಿಂದ ಲಸಿಕೆ ಅನುಮಾನ
ಇನ್ನು,ಈ ಬಗ್ಗೆ ಅಧಿಕೃತವಾಗಿ ಟ್ವೀಟ್ ಮಾಡಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, “ಉಚಿತ” ಎಂಬ ಪದವನ್ನು ಉಲ್ಲೇಖಿಸಿ ಎಲ್ಲಾ ಭಾರತೀಯರಿಗೆ ಉಚಿತ ಕೋವಿಡ್ 19 ಲಸಿಕೆ ನೀಡುವಂತೆ ಒತ್ತಾಯಿಸುವುದರೊಂದಿಗೆ “ಉಚಿತ” ಪದದ ನಿಘಂಟಿನ ಅರ್ಥವನ್ನು ವಿವರಿಸಿದ್ದಾರೆ.
free /friː/
adjective, adverbcosting nothing, or not needing to be paid for. e.g.-
• India must get free COVID vaccine.
• All citizens must receive the inoculation free of charge.Let’s hope they get it this time. #vaccine
— Rahul Gandhi (@RahulGandhi) April 29, 2021
ಇನ್ನು, ಕಾಂಗ್ರೆಸ್ ಹಿರಿಯ ನಾಯಕ ಜಯರಾಮ್ ರಮೇಶ್ ಟ್ವೀಟ್ ನಲ್ಲಿ, ಕೋವಿಡ್ ಲಸಿಕೆಯ ಕೇಂದ್ರಗಳಲ್ಲಿಯೂ ನೋಂದಣಿಗೆ ಅವಕಾಶವನ್ನು ಕೇಂದ್ರ ಸರ್ಕಾರ ಒದಗಿಸಬೇಕು.
ಲಸಿಕೆ ಪಡದುಕೊಳ್ಳಲು ಆನ್ ಲೈನ್ ಪೂರ್ವ ನೋಂದಣಿ ಮತ್ತು ಲಸಿಕೆ ಕೇಂದ್ರಗಳಲ್ಲೂ ನೋಂದಣಿಯ ಎರಡು ಆಯ್ಕೆಗಳನ್ನು ಏಕೆ ಅನುಮತಿಸಬಾರದು ಎಂಬುದನ್ನು ನಾನು ಅರ್ಥಮಾಡಿಕೊಳ್ಳಲು ವಿಫಲವಾಗಿದೆ. ಆನ್ ಲೈನ್ ನೋಂದಣಿಗೆ ಅಡ್ಡಿಯಾಗದಂತೆ ಸಹಾಯ ಮಾಡಬೇಕು. ಎಂದು ಅವರು ಬರೆದಿದ್ದಾರೆ.
I fail to understand why BOTH options of online pre-registration and on-the-spot registration for walk-ins should not be allowed for vaccination. Online registration should help not hamper. In India’s case, mandatory online registration may end up excluding many. @drharshvardhan
— Jairam Ramesh (@Jairam_Ramesh) April 29, 2021
ಕೋವಿಡ್ ಲಸಿಕೆಯ ಕೊರತೆಯ ನಡುವೆಯೂ ಕೂಡ ಮೇ 1 ರಿಂದ ಪ್ರಾರಂಭವಾಗಲಿರುವ ಸಾಮೂಹಿಕ ಲಸಿಕೆ ಅಭಿಯಾನಕ್ಕಾಗಿ ಸುಮಾರು 1.3 ಕೋಟಿ ಭಾರತೀಯರು ಸರ್ಕಾರದ ಪೋರ್ಟಲ್ ಕೋವಿನ್ ನಲ್ಲಿ ಆನ್ ಲೈನ್ ನೋಂದಾವಣಿ ಮಾಡಿಕೊಂಡಿದ್ದಾರೆ.
ಓದಿ : ಕೋವಿಡ್ ಸೃಷ್ಟಿಸಿದ ಕರಾಳತೆ : ಮನೆ ಮಾರಾಟ, ಸಹಾಯದ ನಿರೀಕ್ಷೆಯಲ್ಲಿ ಹಿಂದಿ ನಟ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ನೀತಿ ಸಂಹಿತೆ ಉಲ್ಲಂಘನೆ: ಏಪ್ರಿಲ್ 29ರೊಳಗೆ ಉತ್ತರ ನೀಡಲು ಮೋದಿ, ರಾಹುಲ್ಗೆ ಸೂಚನೆ
Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ
Delhi: ಬ್ಯಾಂಕ್ ಮ್ಯಾನೇಜರ್ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!
ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು
Usman Ghani: ಮೋದಿ ಹೇಳಿಕೆ ಟೀಕೆ ಮಾಡಿದ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ಉಚ್ಛಾಟನೆ
MUST WATCH
ಹೊಸ ಸೇರ್ಪಡೆ
MOTHER: ತಾಯಿಗಿಂತ ಮಿಗಿಲಾದ ದೇವರಿಲ್ಲ
Loksabha; ರಾಜ್ಯದಲ್ಲಿ 20ಕ್ಕಿಂತ ಹೆಚ್ಚು ಕ್ಷೇತ್ರ ಗೆಲ್ಲುತ್ತೇವೆ: ರಣದೀಪ್ ಸುರ್ಜೇವಾಲಾ
Village Life: ಅಪರೂಪವೆನಿಸುತ್ತಿರುವ ಹಳ್ಳಿಗಾಡಿನ ಜೀವನ
ನೀತಿ ಸಂಹಿತೆ ಉಲ್ಲಂಘನೆ: ಏಪ್ರಿಲ್ 29ರೊಳಗೆ ಉತ್ತರ ನೀಡಲು ಮೋದಿ, ರಾಹುಲ್ಗೆ ಸೂಚನೆ
IPL: ಆರ್ ಸಿಬಿ ತಂಡಕ್ಕಾಗಿ ಮಲ್ಯ ಅಂದು…..: ವಿಶೇಷ ಘಟನೆ ನೆನೆದ ಅನಿಲ್ ಕುಂಬ್ಳೆ