ಕಮಲ್ ನಾಥ್ ಆಪ್ತರ ಮೇಲಿನ ಐಟಿ ದಾಳಿಗೆ ರಾಹುಲ್ ಮೌನ ಏಕೆ : ಇರಾನಿ
Team Udayavani, Apr 11, 2019, 3:57 PM IST
ಅಮೇಠಿ : ಮಧ್ಯ ಪ್ರದೇಶ ಮುಖ್ಯಮಂತ್ರಿ ಕಮಲ್ ನಾಥ್ ಅವರ ಆಪ್ತರ ಮೇಲೆ ನಡೆದಿರುವ ಐಟಿ ದಾಳಿ ಬಗ್ಗೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಮೌನವಹಿಸಿರುವುದನ್ನು ಕೇಂದ್ರ ಸಚಿವೆ ಸ್ಮ್ರತಿ ಇರಾನಿ ಪ್ರಶ್ನಿಸಿದ್ದಾರೆ.
ಸಿಎಂ ಕಮಲ್ ನಾಥ್ ಅವರ ನಿಕಟವರ್ತಿಗಳ ಮೇಲಿನ ಐಟಿ ದಾಳಿಯಲ್ಲಿ ಅಧಿಕಾರಿಗಳು ಸುಮಾರು 281 ಕೋಟಿ ರೂ. ಕಪ್ಪುಹಣದ ವ್ಯಾಪಕ ಮತ್ತು ವ್ಯವಸ್ಥಿತ ಜಾಲವನ್ನು ಪತ್ತೆ ಹಚ್ಚಿದ್ದು ಈ ಬಗ್ಗೆ ಕಾಂಗ್ರೆಸ್ ಅಧ್ಯಕ್ಷರು ವಹಿಸಿರುವ ಜಾಣ ಮೌನ ಪ್ರಶ್ನಾರ್ಹವಾಗಿದೆ ಎಂದು ಇರಾನಿ ಹೇಳಿದರು.
ಇದೇ ವೇಳೆ ಐಟಿ ಅಧಿಕಾರಿಗಳು ದಿಲ್ಲಿಯ ತುಘಲಕ್ ರಸ್ತೆಯ ಪ್ರಮುಖ ವ್ಯಕ್ತಿಯೊಬ್ಬರ ನಿವಾಸದಿಂದ ಮುಖ್ಯ ರಾಜಕೀಯ ಪಕ್ಷವೊಂದರ ಪ್ರಧಾನ ಕಾರ್ಯಾಲಯಕ್ಕೆ 20 ಕೋಟಿ ರೂ. ವರ್ಗಾವಣೆ ಆಗಿರುವುದರ ಜಾಡನ್ನು ಕೂಡ ಪತ್ತೆ ಹಚ್ಚಿದ್ದಾರೆ. ವಿಷಯ ಇಂತಿರುವಾಗ ಆ 20 ಕೋಟಿ ರೂ.ಗಳನ್ನು ತುಘಲಕ್ ರಸ್ತೆ ನಿವಾಸಕ್ಕೆ ವರ್ಗಾಯಿಸಿರುವ ಮಧ್ಯ ಪ್ರದೇಶದ ಸಭ್ಯ ವ್ಯಕ್ತಿ ಯಾರೆಂಬುದನ್ನು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಏಕೆ ಬಹಿರಂಗಪಡಿಸುತ್ತಿಲ್ಲ ಎಂದು ಇರಾನಿ ಪ್ರಶ್ನಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Scrap mafia ದರೋಡೆಕೋರ ರವಿ ಕಾನಾ ಮತ್ತು ಪ್ರೇಯಸಿ ಕಾಜಲ್ ಥಾಯ್ಲೆಂಡ್ ನಲ್ಲಿ ಬಂಧನ
Andhra ಟಿಡಿಪಿ ಅಭ್ಯರ್ಥಿ ಆಸ್ತಿ ಬರೋಬ್ಬರಿ 5,785 ಕೋ.ರೂ.!
Loksabha election; ಕಾಂಗ್ರೆಸ್ ವಿರುದ್ಧ ಮೋದಿ ಈಗ ದೇಶ ವಿಭಜನೆ ಅಸ್ತ್ರ ಪ್ರಯೋಗ
Lok Sabha Election; ಕೇಜ್ರಿವಾಲ್ ಸೆರೆ ಆಪ್ಗೆ ವರವೇ? ಶಾಪವೇ?
Patanjali; ತಪ್ಪು ಜಾಹೀರಾತಿನ ಗಾತ್ರದಲ್ಲೇ ಕ್ಷಮೆ ಕೇಳಿ: ರಾಮದೇವ್ ಗೆ ಸುಪ್ರೀಂ