ರೈಲು ನಿಲ್ದಾಣ ಮೂಲಕ ಸಂಪತ್ತು ಕ್ರೋಡೀಕರಣ ಯೋಜನೆ ಕೈಬಿಟ್ಟ ಸರ್ಕಾರ
Team Udayavani, Dec 14, 2022, 6:40 AM IST
ನವದೆಹಲಿ: ಸರ್ಕಾರಿ ಮತ್ತು ಖಾಸಗಿ ಸಹಭಾಗಿತ್ವ (ಪಿಪಿಪಿ)ದಲ್ಲಿ ರೈಲು ನಿಲ್ದಾಣಗಳ ಸಂಪತ್ತು ಕ್ರೋಡೀಕರಣ ಯೋಜನೆಯನ್ನು ಕೇಂದ್ರ ಸರ್ಕಾರ ಕೈಬಿಟ್ಟಿದೆ. ಅದರ ಬದಲಾಗಿ, ಎಂಜಿನಿಯರಿಂಗ್, ಸ್ವಾಧೀನ ಮತ್ತು ನಿರ್ಮಾಣ (ಇಪಿಸಿ) ಮಾದರಿಯಲ್ಲಿ ಈ ಪ್ರಕ್ರಿಯೆ ಕೈಗೊಳ್ಳಲು ನಿರ್ಧರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಪಿಪಿಪಿ ಮೂಲಕ ರೈಲು ನಿಲ್ದಾಣಗಳ ಸಂಪತ್ತು ಕ್ರೋಡೀಕರಣ ಮಾಡಿ, ಪ್ರಸಕ್ತ ಹಣಕಾಸು ವರ್ಷದಲ್ಲಿ 30 ಸಾವಿರ ಕೋಟಿ ರೂ.ಗಳನ್ನು ಸಂಗ್ರಹಿಸುವ ಗುರಿಯನ್ನು ರೈಲ್ವೆ ಸಚಿವಾಲಯ ಹಾಕಿಕೊಂಡಿತ್ತು. ಆದರೆ, ಈವರೆಗೆ ಕೇವಲ 1,829 ಕೋಟಿ ರೂ.ಗಳನ್ನು ಮಾತ್ರವೇ ಸಂಗ್ರಹಿಸಲು ಸಾಧ್ಯವಾಗಿದೆ.
ಹೀಗಾಗಿ, ಅದನ್ನು ಕೈಬಿಟ್ಟು, ರೈಲ್ವೆಯ ಇತರೆ ಆಸ್ತಿಗಳಾದ ರೈಲುಗಳು, ಗೂಡ್ಶೆಡ್ಗಳು, ಸ್ಟೇಡಿಯಂಗಳು, ರೈಲ್ವೆ ಕಾಲೊನಿಗಳು ಮತ್ತು ರೈಲ್ವೆ ಲ್ಯಾಂಡ್ ಪಾರ್ಸೆಲ್ಗಳ ಮುಖಾಂತರ ಸಂಪತ್ತು ಕ್ರೋಡೀಕರಣ ಮಾಡಲು ಸೂಚಿಸಲಾಗಿದೆ ಎಂದೂ ಮೂಲಗಳು ಹೇಳಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Brahmos; ಫಿಲಿಪ್ಪೀನ್ಸ್ಗೆ ಬ್ರಹ್ಮೋಸ್: ಭಾರತದ ಮೊದಲ ರಫ್ತು
EC ಚುನಾವಣ ಆಯೋಗ ಅಲ್ಲ, ಬಿಜೆಪಿ ಆಯೋಗ: ಮಮತಾ ಬ್ಯಾನರ್ಜಿ ಟೀಕಾಸ್ತ್ರ
ED; ನಾನು ತಿಂದದ್ದು ಮೂರೇ ಮಾವು: ಕೋರ್ಟ್ಗೆ ಕೇಜ್ರಿವಾಲ್ ಮಾಹಿತಿ
Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!
Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು