ರೈಲ್ವೇಯಲ್ಲಿನ್ನು ವಿವಿಐಪಿ ಸಂಸ್ಕೃತಿಗೆ ಕೊಕ್
Team Udayavani, Oct 9, 2017, 6:00 AM IST
ಹೊಸದಿಲ್ಲಿ: ಪೊಲೀಸ್ ಇಲಾಖೆಯಂತೆಯೇ ರೈಲ್ವೇ ಇಲಾಖೆಯಲ್ಲಿರುವ ಆರ್ಡರ್ಲಿ ಪದ್ಧತಿಯೂ ಇನ್ನು ಕೊನೆಯಾಗಲಿದೆ. ರೈಲ್ವೇಯಲ್ಲಿರುವ ವಿವಿಐಪಿ ಸಂಸ್ಕೃತಿಗೆ ಕೊನೆಹಾಡುವ ನಿಟ್ಟಿನಲ್ಲಿ ಇಲಾಖೆಯು ಮಹತ್ವದ ಹೆಜ್ಜೆಯಿಟ್ಟಿದ್ದು, ಹಿರಿಯ ಅಧಿಕಾರಿಗಳ ನಿವಾಸದಲ್ಲಿ ಮನೆಕೆಲಸ ಮಾಡುತ್ತಿದ್ದ 30 ಸಾವಿರ ವರ್ಕ್ಮೆನ್ಗಳನ್ನು ಅದರಿಂದ ಬಿಡುಗಡೆ ಮಾಡಬೇಕು ಎಂದು ಆದೇಶಿಸಿದೆ.
ಜತೆಗೆ ರೈಲ್ವೇ ಮಂಡಳಿ ಅಧ್ಯಕ್ಷ ಅಥವಾ ಸದಸ್ಯರು ವಲಯ ಭೇಟಿಗೆ ಬಂದಾಗ ವಿಮಾನ ಅಥವಾ ರೈಲ್ವೇ ನಿಲ್ದಾಣದಲ್ಲಿ ಸ್ವಾಗತಕ್ಕೆ ವಲಯ ಮ್ಯಾನೇಜರ್ ಖುದ್ದು ಹಾಜರಿರಬೇಕು ಮತ್ತು ಈ ಸಂದರ್ಭಗಳಲ್ಲಿ ಸ್ಮರಣಿಕೆಗಳನ್ನು ನೀಡಬೇಕು ಎಂದು 36 ವರ್ಷಗಳ ಹಿಂದೆ ಹೊರಡಿಸಲಾಗಿದ್ದ ಸುತ್ತೋಲೆಯನ್ನು ತತ್ಕ್ಷಣದಿಂದ ಜಾರಿಗೆ ಬರುವಂತೆ ರದ್ದು ಮಾಡಲಾಗಿದೆ.
ಈ ಬಗ್ಗೆ ರೈಲ್ವೇ ಮಂಡಳಿ ಅಧ್ಯಕ್ಷ ಅಶ್ವಿನಿ ಲೊಹಾನಿ ಸೆ.28ರಂದೇ ಆದೇಶ ಹೊರಡಿಸಿದ್ದರು. 1981ರಲ್ಲಿ ಹೊರಡಿಸಲಾಗಿದ್ದ ಆದೇಶ ಪ್ರಕಾರ, ರೈಲ್ವೇ ಮಂಡಳಿ ಅಧ್ಯಕ್ಷ, ಸದಸ್ಯರ ಭೇಟಿ ವೇಳೆ ವಲಯ ಮ್ಯಾನೇಜರ್ಗಳು ಹೂಗುತ್ಛ, ಸ್ಮರಣಿಕೆಗಳನ್ನು ನೀಡಿ ಸ್ವಾಗತಿಸಬೇಕಾಗಿತ್ತು. ಈಗ ಇದಕ್ಕೆ ನಿಷೇಧ ಹೇರಲಾಗಿದೆ. ಜತೆಗೆ, ಹಿರಿಯ ಅಧಿಕಾರಿಗಳ ಮನೆಯಲ್ಲಿ ಕೆಲಸ ಮಾಡುತ್ತಿದ್ದ 30 ಸಾವಿರ ಟ್ರ್ಯಾಕ್ಮನ್ಗಳ ಪೈಕಿ ಸುಮಾರು 6-7 ಸಾವಿರ ಮಂದಿ ಕಳೆದ ಒಂದು ತಿಂಗಳ ಅವಧಿಯಲ್ಲಿ ಮರಳಿ ಇಲಾಖೆ ಕರ್ತವ್ಯಕ್ಕೆ ಹಾಜರಾಗಿದ್ದಾರೆ .
ಸ್ಲಿಪರ್ ಕೋಚ್ಗಳಲ್ಲಿ ಪ್ರಯಾಣಿಸಿ: ಇಷ್ಟು ಮಾತ್ರವಲ್ಲ ರೈಲ್ವೇ ಅಧಿಕಾರಿಗಳು ವಿಲಾಸಿ ಸಲೂನ್ಗಳಿಗೆ ತೆರಳದಂತೆ, ಹವಾನಿಯಂತ್ರಿತ ಬೋಗಿಯಲ್ಲಿ ಪ್ರಯಾಣಿಸದಂತೆಯೂ ಸೂಚಿಸಲಾಗಿದೆ. ಬದಲಾಗಿ ಸ್ಲಿàಪರ್ ಕೋಚ್ಗಳಲ್ಲಿ ಅಧಿಕೃತ ಭೇಟಿಗೆ ತೆರಳಬೇಕು ಎಂದು ಸಚಿವ ಗೋಯಲ್ ಆದೇಶಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಕೈಗೆ ಪಿತ್ರೋಡಾರ್ಜಿತ ಸಂಕಟ! ಬಿಜೆಪಿಗೆ ಸಿಕ್ಕಿದ ಹೊಸ ಅಸ್ತ್ರ ; ಕಂಗೆಟ್ಟ ಕಾಂಗ್ರೆಸ್
Madhya Pradesh Rally; ಕೈಯಿಂದ ಮೀಸಲಾತಿ ಕಸಿಯುವ ಯತ್ನ: ಪ್ರಧಾನಿ ಮೋದಿ
Rahul Gandhi: ಜಾತಿಗಣತಿಯನ್ನು ಯಾವ ಶಕ್ತಿಯೂ ತಡೆಯಲಾರದು: ರಾಹುಲ್ ಗಾಂಧಿ
Rajveer Diler: ಹೃದಯಾಘಾತದಿಂದ ಬಿಜೆಪಿ ಸಂಸದ ರಾಜ್ವೀರ್ ದಿಲೇರ್ ನಿಧನ
Scam: 25,000 ಕೋಟಿ ಬ್ಯಾಂಕ್ ಹಗರಣ ಪ್ರಕರಣ: ಅಜಿತ್ ಪವಾರ್ ಪತ್ನಿ ಸುನೇತ್ರಾಗೆ ಕ್ಲೀನ್ ಚಿಟ್
MUST WATCH
ಹೊಸ ಸೇರ್ಪಡೆ
Uppinangady ಬಸ್ಸಿನಲ್ಲಿ ಲೈಂಗಿಕ ಕಿರುಕುಳ: ಪ್ರತಿರೋಧಿಸಿದ ವಿದ್ಯಾರ್ಥಿನಿಯ ನಡೆಗೆ ಶ್ಲಾಘನೆ
Lok Sabha Election; ಹಂತ 1: 14 ಕ್ಷೇತ್ರಗಳ ಬಹಿರಂಗ ಪ್ರಚಾರ ಅಂತ್ಯ: ನಾಳೆ ಮತದಾನ
ಅನಂತಸ್ವಾಮಿ ಧಾಟಿಯಲ್ಲೇ ನಾಡಗೀತೆ; ರಾಜ್ಯ ಸರಕಾರದ ಆದೇಶ ಎತ್ತಿಹಿಡಿದ ಹೈಕೋರ್ಟ್
ಕೈಗೆ ಪಿತ್ರೋಡಾರ್ಜಿತ ಸಂಕಟ! ಬಿಜೆಪಿಗೆ ಸಿಕ್ಕಿದ ಹೊಸ ಅಸ್ತ್ರ ; ಕಂಗೆಟ್ಟ ಕಾಂಗ್ರೆಸ್
Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ