ಕುಂದ್ರಾರಿಂದ ಪೊಲೀಸರಿಗೆ ಲಂಚ ನೀಡಿಕೆ ಆರೋಪ: 25 ಲಕ್ಷ ರೂ. ಲಂಚ ಆಮಿಷ?
Team Udayavani, Jul 23, 2021, 7:20 AM IST
ಮುಂಬಯಿ: ಅಶ್ಲೀಲ ಚಲನಚಿತ್ರ ನಿರ್ಮಾಣದ ಆರೋಪಕ್ಕೆ ಗುರಿಯಾಗಿ ಬಂಧನಕ್ಕೀಡಾಗಿರುವ ಉದ್ಯಮಿ ರಾಜ್ ಕುಂದ್ರಾ, ಸಂಭಾವ್ಯ ಬಂಧನ ತಪ್ಪಿಸಿ ಕೊಳ್ಳಲು ಮುಂಬಯಿಯ ಕ್ರೈಮ್ ಬ್ರ್ಯಾಂಚ್ನ ಕೆಲವು ಪೊಲೀಸ್ ಅಧಿಕಾರಿಗಳಿಗೆ 25 ಲಕ್ಷ ರೂ. ಲಂಚವನ್ನೂ ನೀಡಿದ್ದರೆಂಬ ಗುರುತರ ಆರೋಪ ಕೇಳಿಬಂದಿವೆ.
ಈ ಪ್ರಕರಣದ ಕಿಂಗ್ಪಿನ್ ಎಂದು ಹೆಸರಿಸಲಾಗಿರುವ ಅರವಿಂದ ಶ್ರೀವಾಸ್ತವ ಅಲಿಯಾಸ್ ಯಶ್ ಠಾಕೂರ್, ತಮ್ಮ ಕಂಪೆನಿಯಾದ ಅಮೆರಿಕ ಮೂಲದ ಫ್ಲಿಜ್ ಮೂವೀಸ್ (ಈ ಹಿಂದೆ ಈ ಕಂಪೆನಿಯ ಹೆಸರು ನ್ಯೂಫ್ಲಿಕ್ಸ್) ಹೆಸರಿನಲ್ಲಿ ಮಹಾರಾಷ್ಟ್ರ ಭ್ರಷ್ಟಾಚಾರ ನಿಗ್ರಹ ದಳಕ್ಕೆ (ಎಸಿಬಿ) ಇ-ಮೇಲ್ ಮೂಲಕ ಈ ಆರೋಪ ಮಾಡಿದ್ದರು. ಎಸಿಬಿಯು ಇದನ್ನು ಮುಂಬಯಿ ಪೊಲೀಸ್ ಆಯುಕ್ತರಿಗೆ ರವಾನಿಸಿತ್ತು ಎಂದು ಮೂಲಗಳು ತಿಳಿಸಿವೆ. ಇದೇ ವೇಳೆ, ಶುಕ್ರವಾರ ಅವರ ಪೊಲೀಸ್ ಕಸ್ಟಡಿ ಮುಕ್ತಾಯವಾಗಲಿದೆ
ವೀಡಿಯೋಗಳ ತನಿಖೆ: ಈ ಪ್ರಕರಣದಲ್ಲಿ ವಶಪಡಿಸಿಕೊಳ್ಳಲಾಗಿರುವ 70 ಅಶ್ಲೀಲ ವೀಡಿಯೋಗಳು ಹಾಗೂ 20ರಿಂದ 30 ನಿಮಿಷ ಅವಧಿಯ 90 ವೀಡಿಯೋಗಳು ನಿಜವಾಗಿಯೂ ಕುಂದ್ರಾ ಸೂಚನೆಯ ಮೇರೆಗೆ, ಅವರ “ಹಾಟ್ಶಾಟ್ಸ್’ ಆ್ಯಪ್ಗಾಗಿ ನಿರ್ಮಾಣವಾದವೇ ಎಂಬುದನ್ನು ಪರಿಶೀಲಿಸಲಾಗುತ್ತಿದೆ. ಇವುಗಳನ್ನು ತಯಾರಿಸಿದ ಅಲ್ಪಾವಧಿ ಪ್ರೊಡಕ್ಷನ್ ಹೌಸ್ಗಳನ್ನೂ ತಪಾಸಣೆ ಗೊಳಪಡಿಸಲಾಗಿದೆ ಎಂದು ಮುಂಬಯಿ ಪೊಲೀಸರು ತಿಳಿಸಿದ್ದಾರೆ.
ಮತ್ತೂಂದೆಡೆ, ನಟಿ ಶೆರ್ಲಿನ್ ಚೋಪ್ರಾ ಅವರು, ಕುಂದ್ರಾ ಪ್ರಕರಣದಲ್ಲಿ ಮಹಾರಾಷ್ಟ್ರ ಸೈಬರ್ ಸೆಲ್ಗೆ ತಾವೇ ಮೊದಲ ಹೇಳಿಕೆ ನೀಡಿದ್ದಾಗಿ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಕೈಗೆ ಪಿತ್ರೋಡಾರ್ಜಿತ ಸಂಕಟ! ಬಿಜೆಪಿಗೆ ಸಿಕ್ಕಿದ ಹೊಸ ಅಸ್ತ್ರ ; ಕಂಗೆಟ್ಟ ಕಾಂಗ್ರೆಸ್
Madhya Pradesh Rally; ಕೈಯಿಂದ ಮೀಸಲಾತಿ ಕಸಿಯುವ ಯತ್ನ: ಪ್ರಧಾನಿ ಮೋದಿ
Rahul Gandhi: ಜಾತಿಗಣತಿಯನ್ನು ಯಾವ ಶಕ್ತಿಯೂ ತಡೆಯಲಾರದು: ರಾಹುಲ್ ಗಾಂಧಿ
Rajveer Diler: ಹೃದಯಾಘಾತದಿಂದ ಬಿಜೆಪಿ ಸಂಸದ ರಾಜ್ವೀರ್ ದಿಲೇರ್ ನಿಧನ
Scam: 25,000 ಕೋಟಿ ಬ್ಯಾಂಕ್ ಹಗರಣ ಪ್ರಕರಣ: ಅಜಿತ್ ಪವಾರ್ ಪತ್ನಿ ಸುನೇತ್ರಾಗೆ ಕ್ಲೀನ್ ಚಿಟ್
MUST WATCH
ಹೊಸ ಸೇರ್ಪಡೆ
Kundapura: ಕಳಚಿದ ಕೊಂಡಿ: ಭಾಗವತ ಸುಬ್ರಹ್ಮಣ್ಯ ಧಾರೇಶ್ವರ ಇನ್ನಿಲ್ಲ
Lok Sabha Election 2024; ನಿಮ್ಮ ಮತವನ್ನು ಮಾರಿಕೊಳ್ಳಬೇಡಿ: ಗಣ್ಯರ ಮನವಿ
Daily Horoscope: ಉದ್ಯೋಗದಲ್ಲಿ ಮೇಲಧಿಕಾರಿಗಳಿಗೆ ತೃಪ್ತಿ, ಅಪೇಕ್ಷಿತ ಆರ್ಥಿಕ ನೆರವು ಲಭ್ಯ
Modi ಹಸಿ ಸುಳ್ಳು: ಸಿಎಂ ಸಿದ್ದರಾಮಯ್ಯ ಕೆಂಡ; ಒಬಿಸಿ, ಎಸ್ಸಿ ಮೀಸಲಾತಿ ಹೇಳಿಕೆಗೆ ವಿರೋಧ
Uppinangady ಬಸ್ಸಿನಲ್ಲಿ ಲೈಂಗಿಕ ಕಿರುಕುಳ: ಪ್ರತಿರೋಧಿಸಿದ ವಿದ್ಯಾರ್ಥಿನಿಯ ನಡೆಗೆ ಶ್ಲಾಘನೆ