ಬಾಲಕಿಯ ಅಪಹರಣ, ಅತ್ಯಾಚಾರ, ಕೊಲೆ: ಅಪರಾಧಿಗೆ ಮರಣ ದಂಡನೆ ಶಿಕ್ಷೆ
Team Udayavani, Jun 12, 2019, 3:44 PM IST
ಜೈಪುರ : 2015ರಲ್ಲಿ ಐದು ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿ, ಕಲ್ಲಿನಿಂದ ಆಕೆಯ ಮುಖವನ್ನು ಜಜ್ಜಿ, ಗುಪ್ತಾಂಗವನ್ನು ಛಿದ್ರಗೊಳಿಸಿ ಕೊಂದಿದ್ದ ಆರೋಪಿಯ ಅಪರಾಧವು ‘ಅಪರೂಪದಲ್ಲೇ ಅಪರೂಪದ ಕೃತ್ಯ’ ವಾಗಿದೆ ಎಂದು ಹೇಳಿರುವ ರಾಜಸ್ಥಾನದ ಅಲ್ವಾರ್ ಜಿಲ್ಲೆಯ ನ್ಯಾಯಾಲಯ ಇಂದು ಬುಧವಾರ ಆರೋಪಿಗೆ ಮರಣ ದಂಡನೆ ಶಿಕ್ಷೆಯನ್ನು ವಿಧಿಸಿದೆ.
ಬೆಹರೂರ್ ಪಟ್ಟಣದ ರೇವಾಲಿಯ ನಿವಾಸಿಯಾಗಿರುವ ರಾಜಕುಮಾರ್ ಅಲಿಯಾಸ್ ಧರ್ಮೇಂದ್ರ ಯಾದವ್ ನನ್ನು ಬಾಲಕಿಯ ಅತ್ಯಾಚಾರ ಮತ್ತು ಅತ್ಯಮಾನುಷ ಕೊಲೆ ಕೃತ್ಯಕ್ಕಾಗಿ ಪೋಕ್ಸೋ ನ್ಯಾಯಾಲಯದ ವಿಶೇಷ ನ್ಯಾಯಾಧೀಶ ಅಜಯ್ ಕುಮಾರ್ ಶರ್ಮಾ ನನ್ನು ಅಪರಾಧಿ ಎಂದು ಘೋಷಿಸಿ ಮರಣ ದಂಡನೆ ವಿಧಿಸಿದರು ಎಂದು ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ವಿನೋದ್ ಕುಮಾರ್ ಶರ್ಮಾ ಮಾಧ್ಯಮಕ್ಕೆ ತಿಳಿಸಿದರು.
ಐಪಿಸಿ ಸೆ.302 (ಕೊಲೆ), 363 (ಅಪಹರಣ) ಮತ್ತು ಸೆ.376 (ಕೊನೆಯ ಉಸಿರಿನ ತನಕವೂ ಅನುಭವಿಸುವ ಜೈಲು ಶಿಕ್ಷೆ ) ಅಡಿ ಆರೋಪಿ ರಾಜ್ಕುಮಾರ್ ನನ್ನು ಅಪರಾಧಿ ಎಂದು ಪ್ರಕಟಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Brahmos; ಫಿಲಿಪ್ಪೀನ್ಸ್ಗೆ ಬ್ರಹ್ಮೋಸ್: ಭಾರತದ ಮೊದಲ ರಫ್ತು
EC ಚುನಾವಣ ಆಯೋಗ ಅಲ್ಲ, ಬಿಜೆಪಿ ಆಯೋಗ: ಮಮತಾ ಬ್ಯಾನರ್ಜಿ ಟೀಕಾಸ್ತ್ರ
ED; ನಾನು ತಿಂದದ್ದು ಮೂರೇ ಮಾವು: ಕೋರ್ಟ್ಗೆ ಕೇಜ್ರಿವಾಲ್ ಮಾಹಿತಿ
Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!
Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು