ಗ್ರಾಮ ಮುಖ್ಯಸ್ಥೆಯನ್ನು ನೆಲದಲ್ಲಿ ಕೂರಿಸಿದ ರಾಜಸ್ಥಾನದ ಕೈ ಶಾಸಕಿ
Team Udayavani, Mar 20, 2019, 5:45 AM IST
ಜೋಧ್ಪುರ : ಗ್ರಾಮ ಸಭೆಯೊಂದರಲ್ಲಿ ಗ್ರಾಮ ಮುಖ್ಯಸ್ಥೆಯನ್ನು (ಮಹಿಳಾ ಸರಪಂಚ್ಳನ್ನು) ಕುರ್ಚಿಯಲ್ಲಿ ಕೂರಿಸುವ ಬದಲು ನೆಲದಲ್ಲಿ ಕೂರಿಸಿದುದಕ್ಕೆ ಕಾಂಗ್ರೆಸ್ ಶಾಸಕಿ ದಿವ್ಯಾ ಮಡೇರ್ನಾ ಕ್ಷಮೆ ಕೇಳಬೇಕು ಇಲ್ಲವೇ ನಮ್ಮ ಆಕ್ರೋಶವನ್ನು ಆಕೆ ಎದುರಿಸಬೇಕು ಎಂದು ರಾಜಸ್ಥಾನದ ಸರಪಂಚ್ ಸಂಘ ಎಚ್ಚರಿಕೆ ನೀಡಿದೆ.
ಕಳೆದ ಶನಿವಾರ ಜೋಧ್ಪುರ ಜಿಲ್ಲೆಯ ಓಸಿಯನ್ ಪ್ರದೇಶದಲ್ಲಿನ ಗ್ರಾಮ ಸಭೆಯೊಂದರಲ್ಲಿ ಖೇತಸಾರ್ ಗ್ರಾಮ ಮುಖ್ಯಸ್ಥೆಯನ್ನು ಶಾಸಕಿ ದಿವ್ಯಾ ಮಡೇರ್ನಾ ಅವರು ನೆಲದಲ್ಲಿ ಕೂರುವಂತೆ ಹೇಳಿ ಆಕೆಯನ್ನು ಅವಮಾನಿಸಿದ್ದರು ಎಂದು ರಾಜಸ್ಥಾನ ಸರಪಂಚ್ ಸಂಘ ಆರೋಪಿಸಿದೆ.
“ಶಾಸಕಿ ದಿವ್ಯಾ ಅವರು ತಾವು ಮಹಿಳಾ ಸರಪಂಚ್ಗೆ ಗೈದಿರುವ ಅವಮಾನಕ್ಕಾಗಿ ಕ್ಷಮೆ ಕೇಳಬೇಕು; ಇಲ್ಲದಿದ್ದರೆ ಆಕೆ ನಮ್ಮ ಆಕ್ರೋಶವನ್ನು ಎದುರಿಸಬೇಕಾದೀತು ಎಂದು ರಾಜಸ್ಥಾನ ಸರಪಂಚ್ ಸಂಘದ ಅಧ್ಯಕ್ಷ ಭಂವರ್ಲಾಲ್ ಹೇಳಿದ್ದಾರೆ.
ನಾನೊಬ್ಬ ಮಹಿಳೆಯಾಗಿ, ಅದೂ ಸರಪಂಚಳಾಗಿ, ನನ್ನ ವಿರುದ್ಧ ಒಬ್ಬ ಮಹಿಳಾ ಜನಪ್ರತಿನಿಧಿಯಿಂದ ಈ ರೀತಿಯ ವರ್ತನೆಯನ್ನು ನಾನು ನಿರೀಕ್ಷಿಸಿರಲಿಲ್ಲ; ನನಗೆ ತುಂಬಾ ದುಃಖ, ನೋವು, ಅವಮಾನವಾಗಿದೆ’ ಎಂದು ಗ್ರಾಮ ಮುಖ್ಯಸ್ಥೆ ಚಂದು ದೇವಿ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chattisgarh: ಕಳೆದ 4 ತಿಂಗಳಲ್ಲಿ 80 ನಕ್ಸಲೀಯರ ಸಾವು, 125 ಮಂದಿ ಬಂಧನ; 150 ಶರಣಾಗತಿ!
ದ. ಭಾರತದಲ್ಲಿ ಬಿಜೆಪಿ ಎಷ್ಟು ಸ್ಥಾನಗಳಲ್ಲಿ ಜಯಗಳಿಸಬಹುದು? ರೇವಂತ್ ರೆಡ್ಡಿ ಲೆಕ್ಕಚಾರವೇನು!
Delhi ; ಬಿಕಿನಿಯಲ್ಲೇ ಬಸ್ ಹತ್ತಿದ ಮಹಿಳೆ; ವಿಡಿಯೋ ವೈರಲ್
EVM VVPAT case: ಚುನಾವಣಾ ಪ್ರಕ್ರಿಯೆಯಲ್ಲಿ ಪಾವಿತ್ರ್ಯತೆ ಇರಬೇಕು: ಆಯೋಗಕ್ಕೆ ಸುಪ್ರೀಂ
Diabetes ಇದ್ದರೂ ಕೇಜ್ರಿವಾಲ್ ಸಿಹಿ ಹೆಚ್ಚೆಚ್ಚು ತಿನ್ನುತ್ತಿದ್ದಾರೆ!: ಕೋರ್ಟ್ ಗೆ ಇಡಿ
MUST WATCH
ಹೊಸ ಸೇರ್ಪಡೆ
Chattisgarh: ಕಳೆದ 4 ತಿಂಗಳಲ್ಲಿ 80 ನಕ್ಸಲೀಯರ ಸಾವು, 125 ಮಂದಿ ಬಂಧನ; 150 ಶರಣಾಗತಿ!
Election; ಡಿ.ಕೆ.ಶಿವಕುಮಾರ್, ಪ್ರಿಯಾಂಕ್ ಖರ್ಗೆ ವಿರುದ್ಧ ಬಿಜೆಪಿ ದೂರು
Karwar; ಬಿಜೆಪಿ ಅಭ್ಯರ್ಥಿ ಕಾಗೇರಿ ಜಿಲ್ಲಾ ವಿಭಜನೆಗೆ ಯತ್ನಿಸಿಲ್ಲ: ಸದಾನಂದ ಭಟ್
ದಳಪತಿ ಅಭಿಮಾನಿಗಳ ಟ್ರೋಲ್ನಿಂದ ಇನ್ಸ್ಟಾ ಖಾತೆಯನ್ನು ನಿಷ್ಕ್ರಿಯಗೊಳಿಸಿದ್ರಾ ಯುವನ್ ಶಂಕರ್?
RCB: ಈ ಸಲ ಕಪ್ ನಮ್ಮದು…