ಕುಡಿದು ಕುಣಿಯುತ್ತಿದ್ದ ವರನನ್ನು ತಿರಸ್ಕರಿಸಿದ ವಧು
ಮಧ್ಯರಾತ್ರಿ ನಡೆಯಬೇಕಿದ್ದ ಮದುವೆ ರದ್ದು, ಬೇರೆಯವನ ಜತೆ ವಧು ವಿವಾಹ
Team Udayavani, May 17, 2022, 8:43 PM IST
ಚುರು (ರಾಜಸ್ಥಾನ): ಮದುವೆ ಮುಹೂರ್ತಕ್ಕೆ ಸ್ವಲ್ಪವೇ ಹೊತ್ತು ಬಾಕಿಯಿದ್ದರೂ ಕುಡಿದು ಕುಣಿಯುತ್ತಿದ್ದ ವರನನ್ನು ವಧು ತಿರಸ್ಕರಿಸಿದ್ದಾಳೆ.
ಇದರಿಂದ ಮದುವೆಯೇ ಮುರಿದುಬಿದ್ದಿದೆ. ಅಷ್ಟೇ ಅಲ್ಲ, ಮದುವೆಗೂ ಮುನ್ನವೇ ಹುಡುಗ ಕಲಿಯುಗದ ಕುಡುಕ ಎಂಬುದು ತಿಳಿಯುತ್ತಿದ್ದಂತೆ ಆ ಹುಡುಗಿ, ಮದುವೆಗೆ ಬಂದಿದ್ದವರಲ್ಲಿ ಒಬ್ಬರನ್ನು ಆರಿಸಿಕೊಂಡು ಮದುವೆಯಾಗಿದ್ದಾಳೆ.
ಈ ಘಟನೆ ನಡೆದಿದ್ದು ಮೇ 15ರಂದು, ರಾಜಸ್ಥಾನದ ಚುರು ಜಿಲ್ಲೆಯ ರಾಜಗಢ ತೆಹ್ಸಿಲ್ನ ಚೆಲನ ಎಂಬ ಹಳ್ಳಿಯಲ್ಲಿ. ಅವತ್ತು ರಾತ್ರಿ ವರನ ಕಡೆಯವರು ವಧುವಿನ ಊರಿಗೆ ಬಂದಿದ್ದರು.
ರಾತ್ರಿ 9 ಗಂಟೆಯಿಂದ ಮದುವೆ ಮೆರವಣಿಗೆ ಶುರುವಾಯಿತು. ಆದರೆ ವರ ಮತ್ತು ಆತನ ಕಡೆಯವರು ಚೆನ್ನಾಗಿ ಕುಡಿದಿದ್ದ ಪರಿಣಾಮ ಕುಣಿಯಲು ಶುರು ಮಾಡಿದರು. ಮೆರವಣಿಗೆ ಮುಂದೆಯೇ ಸಾಗಲಿಲ್ಲ. ಮಧ್ಯರಾತ್ರಿ 1.15 ನಿಮಿಷಕ್ಕೆ ಮದುವೆ ಮುಹೂರ್ತ ನಿಶ್ಚಯವಾಗಿತ್ತು.
ಎಷ್ಟು ಹೊತ್ತಾದರೂ ವರ ಬರುವ ಮರಳುವ ಲಕ್ಷಣ ಕಾಣದಿದ್ದಾಗ ಸಿಟ್ಟಾದ ವಧು ಈ ಹುಡುಗನೇ ಬೇಡ ಎಂದು ನಿರ್ಧರಿಸಿದಳೆಂದು ಹೇಳಲಾಗಿದೆ.
ಆದರೆ, ವಧುವಿನ ನಿರ್ಧಾರವನ್ನು ವರನ ಕಡೆಯವರು ಒಪ್ಪಿಲ್ಲ. ಹಾಗಾಗಿ, ಅವರು ಪೊಲೀಸ್ ಠಾಣೆಗೆ ಹೋಗಿ ವಧುವಿನ ವಿರುದ್ಧ ದೂರು ದಾಖಲಿಸಿದ್ದಾರೆ. ವಧು, ಪ್ರಾಪ್ತ ವಯಸ್ಕಳಾಗಿದ್ದು ತನ್ನ ಸ್ವಯಂ ವಿವೇಚನೆ ಮೇರೆಗೆ ನಿರ್ಧಾರ ಕೈಗೊಂಡಿರುವುದಾಗಿ ಹೇಳಿದ್ದಾಳೆ. ಹಾಗಾಗಿ, ವರನ ಮನೆಯವರಿಗೆ ಪೊಲೀಸ್ ದೂರಿನಿಂದ ಏನೂ ಪ್ರಯೋಜನವಾಗಿಲ್ಲ ಎಂದು ಮೂಲಗಳು ತಿಳಿಸಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಉಡುಪಿ : ಆಟೋರಿಕ್ಷಾ ಬಳಿ ತೆರಳಿ ಪ್ರಕರಣ ಇತ್ಯರ್ಥಪಡಿಸಿದ ನ್ಯಾಯಾಧೀಶರು
ಸುಳ್ಯ, ಕೊಡಗಿನ ಕೆಲವೆಡೆ ಭಾರಿ ಶಬ್ದದೊಂದಿಗೆ ಭೂಕಂಪನ, ಗೋಡೆ ಬಿರುಕು
ಸಕಲೇಶಪುರ : ರಸ್ತೆ ಅಪಘಾತಕ್ಕೆ ದೈಹಿಕ ಶಿಕ್ಷಕ ಸ್ಥಳದಲ್ಲೇ ಸಾವು: ವಿದ್ಯಾರ್ಥಿಗಳ ಕಣ್ಣೀರು…
ಗೃಹ ಪ್ರವೇಶ ಸಂದರ್ಭ ಅವಾಂತರ |ಮಂಗಳಮುಖಿಯರ ರಂಪಾಟ
ಕಿನ್ನಿಗೋಳಿ :ಪತ್ನಿ ಸೇರಿ ಮೂವರು ಮಕ್ಕಳನ್ನು ಬಾವಿಗೆ ತಳ್ಳಿ ತಾನೂ ಆತ್ಮಹತ್ಯೆ ಯತ್ನಿಸಿದ ಪತಿ
ಹೊಸ ಸೇರ್ಪಡೆ
ಹುಣಸೂರು : ನಿಯಂತ್ರಣ ತಪ್ಪಿ ನಾಲೆಗೆ ಬಿದ್ದ ಬೈಕ್ : ಸವಾರ ಸ್ಥಳದಲ್ಲೇ ಸಾವು
ಇಮ್ರಾನ್ ಖಾನ್ ನಿವಾಸದಲ್ಲಿ ಬೇಹು ಸಾಧನ ಅಳವಡಿಕೆಗೆ ಯತ್ನ: ಭದ್ರತಾ ಸಿಬ್ಬಂದಿ ಬಂಧನ
ಐಎಂಎ ಕೆಎಸ್ಬಿ ವೈದ್ಯರ ದಿನಾಚರಣೆ ಪ್ರಶಸ್ತಿಗೆ ಡಾ. ಆಶಾ ಪ್ರಭು ಆಯ್ಕೆ
ಪಂಚಾಂಗ ನೋಡಿ ರಾಕೆಟ್ ಉಡಾವಣೆ : ಟೀಕೆಗೆ ಗುರಿಯಾದ ಖ್ಯಾತ ನಟ ಮಾಧವನ್ !
3 ಲೋಕಸಭೆ ಮತ್ತು 7 ವಿಧಾನಸಭಾ ಸ್ಥಾನಗಳ ಉಪಚುನಾವಣೆಯ ಫಲಿತಾಂಶ ಹೀಗಿದೆ