ರಾಜಸ್ಥಾನ ಸಾರಿಗೆ ಬಸ್ಸು ಗಟಾರಕ್ಕೆ : 6 ಮಂದಿಗೆ ಗಾಯ; ಮೂವರು ಗಂಭೀರ
Team Udayavani, Feb 5, 2019, 6:35 AM IST
ಜೈಪುರ : ರಾಜಸ್ಥಾನದ ಜೈಪುರ ಜಿಲ್ಲೆಯಲ್ಲಿ ರಾಜ್ಯ ಸಾರಿಗೆ ಬಸ್ಸೊಂದು ಇಂದು ಮಂಗಳವಾರ ಗಟಾರಕ್ಕೆ ಉರುಳಿ ಬಿದ್ದ ಅವಘಡದಲ್ಲಿ ಕನಿಷ್ಠ ಆರು ಮಂದಿ ಪ್ರಯಾಣಿಕರು ಗಾಯಗೊಂಡರು.
ಜೈಪುರ ಜಿಲ್ಲೆಯ ಚಾಕ್ಸು ಪಟ್ಟಣದದಲ್ಲಿನ ಶೀತ್ಲಾ ಡ್ಯಾಮ್ ಬಳಿ ಎನ್ಎಚ್ 12ರಲ್ಲಿ ಈ ಅವಘಡ ಸಂಭವಿಸಿತು.
ಗಾಯಾಳುಗಳ ಪೈಕಿ ಮೂವರ ಸ್ಥಿತಿ ಗಂಭೀರವಿದೆ. ಎಲ್ಲ ಪ್ರಯಾಣಿಕರನ್ನು ಅವಘಡ ಸ್ಥಳದಿಂದ ಸುರಕ್ಷಿತವಾಗಿ ಪಾರು ಮಾಡಲಾಗಿದೆ. ಬಸ್ಸನ್ನು ಕೂಡ ಗಟಾರದಿಂದ ಮೇಲೆತ್ತಲಾಗಿದೆ ಎಂದು ಘಟನೆ ಬಗ್ಗೆ ಕೇಸು ದಾಖಲಿಸಿಕೊಂಡು ತನಿಖೆ ನಡೆಸುತ್ತಿರುವ ಪೊಲೀಸರು ತಿಳಿಸಿದ್ದಾರೆ.