ರಾಜಸ್ಥಾನ ಸಿಎಂ ದಪ್ಪಗಾಗಿದ್ದಾರೆ, ವಿಶ್ರಾಂತಿ ಕೊಡಿ: ಶರದ್ ವ್ಯಂಗ್ಯ
Team Udayavani, Dec 6, 2018, 7:13 PM IST
ಹೊಸದಿಲ್ಲಿ : ತೆಳ್ಳಗಿದ್ದ ರಾಜಸ್ಥಾನ ಸಿಎಂ ಈಗ ದಪ್ಪಗಾಗಿದ್ದಾರೆ; ತುಂಬಾ ಸುಸ್ತಾಗಿದ್ದಾರೆ; ಅವರಿಗೆ ಸ್ವಲ್ಪ ವಿಶ್ರಾಂತಿ ಕೊಡಿ ಎಂದು ಜೆಡಿಯು ನಾಯಕ ಶರದ್ ಯಾದವ್ ವಸುಂಧರಾ ರಾಜೆ ವಿರುದ್ಧ ವ್ಯಂಗ್ಯೋಕ್ತಿ ಹರಿಯಬಿಟ್ಟಿದ್ದಾರೆ.
ರಾಜಸ್ಥಾನದ ಅಲ್ವಾರ್ನಲ್ಲಿ ಚುನಾವಣಾ ಪ್ರಚಾರ ಭಾಷಣ ಮಾಡುತ್ತಿದ್ದ ಯಾದವ್ ಈ ತಮಾಷೆಯ ಮಾತನ್ನು ಆಡಿದರು.
ವಸುಂಧರಾ ಮಧ್ಯ ಪ್ರದೇಶದ ಮಗಳು; ಆಕೆ ಹಿಂದೆ ತೆಳ್ಳಗಿದ್ದರು; ಈಗ ದಪ್ಪಗಾಗಿದ್ದಾರೆ; ಆಕೆ ಸುಸ್ತಾಗಿದ್ದಾರೆ; ಆಕೆಗೆ ವಿಶ್ರಾಂತಿ ಕೊಡಿ ಎಂದು ಯಾದವ್ ಲಘು ಧಾಟಿಯಲ್ಲಿ, ಆದರೂ ಚುಚ್ಚುವ ರೀತಿಯಲ್ಲಿ ಹೇಳಿದರು.
ಇದೇ ಡಿ.7ರಂದು ರಾಜ್ಯ ವಿಧಾನಸಭಾ ಚುನಾವಣೆಯನ್ನು ಕಾಣಲಿರುವ ರಾಜಸ್ಥಾನದಲ್ಲಿ ನಿರಂತರ ಎರಡನೇ ಬಾರಿಗೆ ಅಧಿಕಾರಕ್ಕೆ ಬರುವ ವಿಶ್ವಾಸದಲ್ಲಿ ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿ ವಸುಂಧರಾ ರಾಜೆ ಇದ್ದಾರೆ.