ರಜನಿ ಹುಟ್ಟೂರಲ್ಲಿ ಪುಳಕ
Team Udayavani, Jan 8, 2018, 9:20 AM IST
ಪುಣೆ/ಹೊಸದಿಲ್ಲಿ: ಸೂಪರ್ಸ್ಟಾರ್ ರಜನೀಕಾಂತ್ ರಾಜಕೀಯ ಪ್ರವೇಶ ವಿಚಾರ ಅಭಿಮಾನಿಗಳಲ್ಲಿ ಪುಳಕ ತಂದಿರುವುದರ ಜತೆಗೆಯೇ ಅವರ ಹುಟ್ಟೂರಲ್ಲೂ ಸಂಭ್ರಮ ಮನೆಮಾಡಿದೆ. ಅವರು ಹುಟ್ಟೂರು ಇರುವುದು ಮಾವಡಿ ಕಡೇಪಥರ್ ಗ್ರಾಮದಲ್ಲಿ. ಪುಣೆಯಿಂದ 60 ಕಿಮೀ ದೂರದಲ್ಲಿದೆ ಈ ಗ್ರಾಮ. ರಜನೀಕಾಂತ್ ಆಗಿ ಬದಲಾಗುವುದಕ್ಕಿಂತ ಮೊದಲು ಅವರು ಶಿವಾಜಿ ರಾವ್ ಗಾಯಕ್ವಾಡ್ ಆಗಿದ್ದರು. “ನಮ್ಮ ಗ್ರಾಮದ ಮಣ್ಣಿನ ಮಗ ಸಿನೆಮಾದಲ್ಲಿ ದೊಡ್ಡ ಹೆಸರು ಗಳಿಸಿದ್ದಾನೆ. ಈಗ ರಾಜಕೀಯ ಕ್ಷೇತ್ರಕ್ಕೂ ಕಾಲಿಟ್ಟಿದ್ದಾನೆ. ಸಿನೆಮಾದಲ್ಲಿ ಹಿಟ್ ಆದಂತೆ ರಾಜಕೀಯದಲ್ಲೂ ಹೆಸರು ಮಾಡುತ್ತಾನೆ’ ಎಂದು ಗ್ರಾಮಸ್ಥರು ಸಂತಸಪಟ್ಟಿದ್ದಾರೆ. ಈಗ ಅವರು ಅಲ್ಲಿಗೆ ಭೇಟಿ ನೀಡುತ್ತಾರಾ ಎಂಬ ಕುತೂಹಲ ಸ್ಥಳೀಯರದ್ದು.
ಈ ಸ್ಥಳ ಸುಪ್ರಸಿದ್ಧ ಯಾತ್ರಾ ಸ್ಥಳ ಜೆಜೂರಿಗೆ ಸಮೀಪದಲ್ಲಿದೆ. ರಜನಿಯವರ ಅಜ್ಜ ಕರ್ನಾಟಕದ ಬಸವನ ಬಾಗೇವಾಡಿಗೆ ತೆರಳಿ, ಅಲ್ಲಿಂದ ಬೆಂಗಳೂರಿಗೆ ಹೋದರು ಎನ್ನುತ್ತಾರೆ ಗ್ರಾಮಸ್ಥರು. ಗ್ರಾಮದಲ್ಲಿ ಜಮೀನು ಇದ್ದರೂ ರಜನಿ ಕುಟುಂಬ ಕರ್ನಾಟಕದಲ್ಲಿಯೇ ಉಳಿಯಿತು. ಪುಣೆಯ ಪುರಂದರ ತಾಲೂಕಿನ ಇತರ ಗ್ರಾಮಗಳೂ ರಜನಿಯ ಸಂಪರ್ಕವನ್ನು ಮೆಲುಕು ಹಾಕುತ್ತವೆ. 2016ರಲ್ಲಿ ಬಿಜೆಪಿ ಶಾಸಕ ಅನಿಲ್ ಗೋಟೆ, ತಲೈವಾಗೆ “ಮಹಾರಾಷ್ಟ್ರ ಭೂಷಣ್’ ಪ್ರಶಸ್ತಿ ನೀಡಬೇಕೆಂದು ಒತ್ತಾಯಿಸಿದ್ದರು.
ನಮ್ಮಂತೆಯೇ ಇದೆ
ತಲೈವಾ ರಜನಿ ಪ್ರದರ್ಶಿಸಿದ “ಅಪಾನ ಮುದ್ರೆ’ಯ ಚಿಹ್ನೆ ನಾವು ವಿನ್ಯಾಸ ಮಾಡಿದ ಮುದ್ರೆಯಂತೆಯೇ ಇದೆ ಎಂದು ಮುಂಬಯಿಯ ಯೋಗ ಸ್ಟಾರ್ಟಪ್ವೊಂದು ಹೇಳಿಕೊಂಡಿದೆ. ಆದರೆ ಹೆಬ್ಬೆರಳನ್ನು ಮುಕ್ತವಾಗಿ ಇರಿಸಲಾಗಿದೆ. 2002ರಲ್ಲಿ ರಜನಿ ಅಭಿನಯಿಸಿದ “ಬಾಬಾ’ ಸಿನೆಮಾದಲ್ಲಿ ಆ ಮುದ್ರೆ ಪ್ರದರ್ಶಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Arunachal Village: ಕೇವಲ ಒಂದು ಮತಕ್ಕಾಗಿ ಚುನಾವಣಾ ಅಧಿಕಾರಿಗಳ 40 ಕಿ.ಮೀ ಕಾಲ್ನಡಿಗೆ!
SSLC ಪರೀಕ್ಷೆ ವೇಳೆ ಉತ್ತರ ತೋರಿಸಲಿಲ್ಲ ಎಂದು ಸಹಪಾಠಿಗೆ ಚಾಕು ಇರಿದ ವಿದ್ಯಾರ್ಥಿಗಳು
Shocking: ಮುಸುಧಾರಿಗಳಿಂದ ಗುರುದ್ವಾರದ ಸಿಬ್ಬಂದಿಯ ಗುಂಡಿಕ್ಕಿ ಹತ್ಯೆ.. ಭಯಾನಕ ದೃಶ್ಯ ಸೆರೆ
Loksabha Poll: ತಮಿಳುನಾಡು ಮಾಜಿ ಕಾಂಗ್ರೆಸ್ ನಾಯಕ ಈಗ ಬಿಜೆಪಿ ರಾಷ್ಟ್ರೀಯ ವಕ್ತಾರ
Bhopal: ಅಜ್ಜಿಗೆ ಮನಬಂದಂತೆ ಥಳಿಸಿದ ದಂಪತಿಗೆ ಲಾಠಿ ರುಚಿ ತೋರಿಸಿದ ಪೊಲೀಸರು…
MUST WATCH
ಹೊಸ ಸೇರ್ಪಡೆ
Arunachal Village: ಕೇವಲ ಒಂದು ಮತಕ್ಕಾಗಿ ಚುನಾವಣಾ ಅಧಿಕಾರಿಗಳ 40 ಕಿ.ಮೀ ಕಾಲ್ನಡಿಗೆ!
SSLC ಪರೀಕ್ಷೆ ವೇಳೆ ಉತ್ತರ ತೋರಿಸಲಿಲ್ಲ ಎಂದು ಸಹಪಾಠಿಗೆ ಚಾಕು ಇರಿದ ವಿದ್ಯಾರ್ಥಿಗಳು
Bengaluru: ಸಾಲ ವಸೂಲಿ ಹೆಸರಲ್ಲಿ ಆಟೋ ವಶ, ಧರ್ಮ ನಿಂದನೆ: ಬಂಧನ
Shocking: ಮುಸುಧಾರಿಗಳಿಂದ ಗುರುದ್ವಾರದ ಸಿಬ್ಬಂದಿಯ ಗುಂಡಿಕ್ಕಿ ಹತ್ಯೆ.. ಭಯಾನಕ ದೃಶ್ಯ ಸೆರೆ
Bengaluru: ಪೇಂಟರ್ ಕೊಂದು ಪೊಲೀಸ್ ಠಾಣೆಗೆ ಬಂದು ಸಿಕ್ಕಿಬಿದ್ದ ಸ್ನೇಹಿತರು