ರಾಮಸೇತು; ಪ್ರಶ್ನೆಯೊಂದನ್ನು ಕೇಂದ್ರ ಸರ್ಕಾರದ ಮುಂದಿಟ್ಟ ಹರ್ಯಾಣ ಪಕ್ಷೇತರ ಸಂಸದ
Team Udayavani, Dec 23, 2022, 9:51 PM IST
ನವದೆಹಲಿ: ಸಂಸತ್ ಅಧಿವೇಶನದಲ್ಲಿ ಈ ಬಾರಿ ಹರ್ಯಾಣದ ಪಕ್ಷೇತರ ಸಂಸದ ಕಾರ್ತಿಕೇಯ ಶರ್ಮಾ ಅವರು “ರಾಮಸೇತು’ ಕುರಿತ ಪ್ರಶ್ನೆಯೊಂದನ್ನು ಕೇಂದ್ರ ಸರ್ಕಾರದ ಮುಂದಿಟ್ಟಿದ್ದಾರೆ.
ರಾಮಸೇತು ಕುರಿತು ಸರ್ಕಾರ ವೈಜ್ಞಾನಿಕ ಸಂಶೋಧನೆಯನ್ನೇನಾದರೂ ನಡೆಸುತ್ತಿದೆಯೇ ಎಂದು ಅವರು ಪ್ರಶ್ನಿಸಿದ್ದಾರೆ. ಅದಕ್ಕೆ ಪ್ರತಿಕ್ರಿಯಿಸಿರುವ ಸಚಿವ ಜಿತೇಂದ್ರ ಸಿಂಗ್, “ಸರಳವಾಗಿ ಹೇಳುವುದಾದರೆ, ಇದು 18 ಸಾವಿರ ವರ್ಷಗಳ ಹಿಂದಿನ ಇತಿಹಾಸ. ಬಾಹ್ಯಾಕಾಶ ತಂತ್ರಜ್ಞಾನದ ಮೂಲಕ ಸಮುದ್ರದಲ್ಲಿ ಶಿಲೆಗಳ ಕೆಲವು ತುಂಡುಗಳಿರುವದನ್ನು ಕಂಡುಕೊಂಡಿದ್ದೇವೆ. ಅದುವೇ ನೈಜ ರಾಮಸೇತು ಎಂದು ಹೇಳುವುದು ಕಷ್ಟ. ಆದರೆ, ಅದರ ರಚನೆಯು ಅಲ್ಲಿತ್ತು ಎಂಬುದಕ್ಕೆ ಕೆಲವು ಸುಳಿವುಗಳು ಸಿಕ್ಕಿವೆ’ ಎಂದಿದ್ದಾರೆ.