ಇನ್ನೂ ಎಷ್ಟು ಕಾಲ ‘ಮಂದಿರ್ ವಹೀಂ ಬನಾಯೇಂಗೇ?’ ಉದ್ಧವ್ ಪ್ರಶ್ನೆ
Team Udayavani, Nov 22, 2018, 6:51 PM IST
ಮುಂಬಯಿ : ”ಪ್ರತೀ ಸಲ ಚುನಾವಣೆ ಬಂದಾಗ ರಾಮ ಮಂದಿರ ವಿಷಯವನ್ನು ಎತ್ತಲಾಗುತ್ತದೆ. ರಾಮ ಮಂದಿರವನ್ನು ಅಲ್ಲೇ ಕಟ್ಟುವೆವು ಎಂದು ಇನ್ನೂ ಎಷ್ಟು ಕಾಲ ನೀವು ಜನರನ್ನು ಮೂರ್ಖರನ್ನಾಗಿ ಮಾಡಬಹುದು ?” ಎಂದು ಶಿವ ಸೇನೆ ಮುಖ್ಯಸ್ಥ ಉದ್ಧವ ಠಾಕ್ರೆ ಪ್ರಶ್ನಿಸಿದ್ದಾರೆ.
”ನ.25ರಂದು ನಾನು ಅಯೋಧ್ಯೆಗೆ ಭೇಟಿ ನೀಡಿದಾಗ ಜನರಿಗೆ ಇನ್ನೂ ಎಷ್ಟು ಕಾಲ ಮೂರ್ಖರನ್ನಾಗಿ ಮಾಡುವಿರಿ ಎಂಬ ಪ್ರಶ್ನೆಗೆ ಉತ್ತರವನ್ನು ಕೇಳುವೆ” ಎಂದು ಠಾಕ್ರೆ ತನ್ನ ಅಯೋಧ್ಯೆ ಭೇಟಿಗೆ ಮುನ್ನ ಮಾಧ್ಯಮದೊಂದಿಗೆ ಮಾತನಾಡುತ್ತಾ ಹೇಳಿದರು.
”ಇದೇ ಭಾನುವಾರ ನಾನು ಅಯೋಧ್ಯೆಗೆ ಭೇಟಿ ನೀಡುವ ಸಂದರ್ಭದಲ್ಲಿ “ಮರಾಠ ಸೇನಾನಿ ದೊರೆ ಛತ್ರಪತಿ ಶಿವಾಜಿ ಮಹಾರಾಜ್ ಜನಿಸಿದ್ದ ಪುಣೆ ಜಿಲ್ಲೆಯ ಜುನ್ನಾರ್ ತೆಹಶೀಲ್ ನಲ್ಲಿರುವ ಶಿವನೇರಿ ಕೋಟೆಯ ಮಣ್ಣನ್ನು ಸಂಗ್ರಹಿಸಿ ಒಯ್ಯುತ್ತೇನೆ” ಎಂದು ಠಾಕ್ರೆ ಹೇಳಿದರು.
”ಶಿವನೇರಿ ಕೋಟೆಯ ಮಣ್ಣಿನಲ್ಲಿ ಎಲ್ಲ ಹಿಂದುಗಳ ಭಾವನೆಗಳು ಅಂತರ್ಗತವಾಗಿವೆ. ಈ ಮಣ್ಣನ್ನು ಅಯೋಧ್ಯೆಗೆ ಒಯ್ಯುವ ಮೂಲಕ ಅಲ್ಲಿ ರಾಮ ಮಂದಿ ನಿರ್ಮಾಣ ಪ್ರಕ್ರಿಯೆಗೆ ವೇಗ ದೊರೆಯುವುದೆಂದು ಹಾರೈಸುತ್ತೇನೆ” ಎಂದು ಠಾಕ್ರೆ ಹೇಳಿದರು.
ಅಯೋಧ್ಯೆಯಲ್ಲಿನ ನಿಮ್ಮ ಪ್ರಸ್ತಾವಿತ ರಾಲಿಗೆ ಅನುಮತಿ ದೊರಕುವುದೇ ಎಂದು ಕೇಳಲಾದ ಪ್ರಶ್ನೆಗೆ ಠಾಕ್ರೆ, “ರಾಲಿಯಲ್ಲಿ ನಾವು ಈ ಮೊದಲು ಪ್ರಕಟಿಸಿದಂತೆ, ನಮ್ಮ ಮೂಲ ಕಾರ್ಯಕ್ರಮವು ಅಯೋಧ್ಯೆ ಭೇಟಿಯನ್ನು ಒಳಗೊಂಡಿದ್ದು ಭಗವಾನ್ ಶ್ರೀ ರಾಮನ ಆಶೀರ್ವಾದವನ್ನು ಕೋರುವ ಉದ್ದೇಶ ಹೊಂದಿರುತ್ತದೆ” ಎಂದು ಹೇಳಿದರು.
“ಅಯೋಧ್ಯೆಯಲ್ಲಿನ ಸಾಧು ಸಂತರು ನಾನು ಅಲ್ಲಿಗೆ ಭೇಟಿ ನೀಡಬೇಕೆಂದು ಬಯಸಿದ್ದಾರೆ. ಆ ಪ್ರಕಾರ ನಾನು ಅಲ್ಲಿಗೆ ಹೋಗಿ ಅವರ ಆಶೀರ್ವಾದ ಪಡೆದು ಸರಯೂ ನದೀ ತೀರದಲ್ಲಿ ನಡೆಯುವ ಸಂಜೆ ವೇಳೆಯ ಆರತಿ ಕಾರ್ಯಕ್ರಮದಲ್ಲಿ ಭಾಗಿಯಾಗುವೆ’ ಎಂದು ಠಾಕ್ರೆ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Rahul Gandhi: ಜಾತಿಗಣತಿಯನ್ನು ಯಾವ ಶಕ್ತಿಯೂ ತಡೆಯಲಾರದು: ರಾಹುಲ್ ಗಾಂಧಿ
Rajveer Diler: ಹೃದಯಾಘಾತದಿಂದ ಬಿಜೆಪಿ ಸಂಸದ ರಾಜ್ವೀರ್ ದಿಲೇರ್ ನಿಧನ
Scam: 25,000 ಕೋಟಿ ಬ್ಯಾಂಕ್ ಹಗರಣ ಪ್ರಕರಣ: ಅಜಿತ್ ಪವಾರ್ ಪತ್ನಿ ಸುನೇತ್ರಾಗೆ ಕ್ಲೀನ್ ಚಿಟ್
LS Polls: ವೇದಿಕೆಯಲ್ಲಿ ಭಾಷಣ ಮಾಡುತ್ತಲೇ ಅಸ್ವಸ್ಥಗೊಂಡ ಕೇಂದ್ರ ಸಚಿವ ನಿತಿನ್ ಗಡ್ಕರಿ
Lok Sabha Election: ಗೋವಾದ ಎರಡೂ ಕ್ಷೇತ್ರದಲ್ಲಿ 16 ಅಭ್ಯರ್ಥಿಗಳು ಕಣಕ್ಕೆ, ಇಲ್ಲಿದೆ ವಿವರ
MUST WATCH
ಹೊಸ ಸೇರ್ಪಡೆ
Jayaprakash Hegde “ಉತ್ತಮ ಕೆಲಸ ಮಾಡಿಸಿಕೊಳ್ಳಬೇಕಾದ ಅವಶ್ಯಕತೆ ಮತದಾರರಿಗಿದೆ’
Kundapura “ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಗೆಲ್ಲಿಸಿ’: ಜಯಪ್ರಕಾಶ್ ಹೆಗ್ಡೆ
Malpe ಮೀನುಗಾರಿಕೆ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ: ಜೆ.ಪಿ. ಹೆಗ್ಡೆ
Subramanya ಏನೆಕಲ್ಲು: ಕಾರಿಗೆ ಗೂಡ್ಸ್ ಆಟೋ ಢಿಕ್ಕಿ
Rahul Gandhi: ಜಾತಿಗಣತಿಯನ್ನು ಯಾವ ಶಕ್ತಿಯೂ ತಡೆಯಲಾರದು: ರಾಹುಲ್ ಗಾಂಧಿ