ರ್ಯಾನ್ಸಮ್ವೇರ್ ದಾಳಿಯಿಂದ ಹೆಚ್ಚು ಹಾನಿಯಾಗಿಲ್ಲ: ಕೇಂದ್ರ
Team Udayavani, Jun 30, 2017, 3:25 AM IST
ಹೊಸದಿಲ್ಲಿ: ಜಗತ್ತಿನಾದ್ಯಂತ ದಾಳಿ ಮಾಡಿದ ಹೊಸ ರ್ಯಾನ್ಸಮ್ವೇರ್ ವೈರಸ್ನಿಂದಾಗಿ ಭಾರತದಲ್ಲಿ ಹೆಚ್ಚಿನ ತೊಂದರೆಗಳು ಆಗಿಲ್ಲ ಎಂದು ಕೇಂದ್ರ ಸರಕಾರ ಹೇಳಿದೆ. ಆದಾಗ್ಯೂ ಮುಂಬೈ ಬಂದರಿನಲ್ಲಿ (ಜೆಎನ್ಪಿಟಿ)ಯ ಒಂದು ಟರ್ಮಿನಲ್ನಲ್ಲಿ ಆದ ಹಾನಿ ಬಗ್ಗೆ ಪರಾಮರ್ಶೆ ನಡೆಸುವುದಾಗಿ ಹೇಳಿದೆ. ಈ ಸಂಬಂಧ ರಾಷ್ಟ್ರೀಯ ಸೈಬರ್ ಭದ್ರತಾ ಸಂಯೋಜಕ ಡಾ| ಗುಲ್ಶನ್ ರಾಯ್ರನ್ನು ಪರಾಮರ್ಶೆಗೆ ಕಳುಹಿಸಿದೆ. ಇನ್ನು ಗುಜರಾತ್ನ ಬಂದರಿನಲ್ಲೂ ಭಾಗಶಃ ಹಾನಿಯಾಗಿದ್ದು, ಪರಾಮರ್ಶೆ ನಡೆಸಲಾಗುತ್ತಿದೆ. ಇದೇ ವೇಳೆ ಸಂಭಾವ್ಯ ವೈರಸ್ ದಾಳಿ, ಹ್ಯಾಕರ್ಗಳ ದಾಳಿಗಳಿಂದ ತಪ್ಪಿಸಲು, ಹೆಚ್ಚಿನ ಕ್ರಮ ಕೈಗೊಳ್ಳುವುದಾಗಿ ಸರಕಾರ ಹೇಳಿದೆ. ಸರಕಾರಿ ಇಲಾಖೆಗಳು, ಕೇಂದ್ರ, ರಾಜ್ಯಗಳ ಕಂಪ್ಯೂಟರ್ ವ್ಯವಸ್ಥೆ ರಕ್ಷಣೆ ಬಗ್ಗೆ ಪರಿಶೀಲನೆ ನಡೆಸುವುದಾಗಿ ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!
Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು
Lok Sabha 1 Phase: ನಿತಿನ್ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…
Navy chief: ಭಾರತೀಯ ನೌಕಾಪಡೆಯ ನೂತನ ಮುಖ್ಯಸ್ಥರಾಗಿ ದಿನೇಶ್ ತ್ರಿಪಾಠಿ ನೇಮಕ
Stones Pelted: ಮತದಾನದ ವೇಳೆ ಕಲ್ಲು ತೂರಾಟ… ಬಿಜೆಪಿ ನಾಯಕನಿಗೆ ಗಾಯ