ಷೇರು ಪೇಟೆಗೆ ಆರ್ಬಿಐ ಪುನಃಶ್ಚೇತನ
Team Udayavani, May 6, 2021, 6:22 AM IST
ಮುಂಬಯಿ/ಹೊಸದಿಲ್ಲಿ: ಸತತ ಮೂರು ದಿನಗಳಿಂದ ಹೂಡಿಕೆದಾರರಿಗೆ ಉಂಟಾಗುತ್ತಿದ್ದ ನಷ್ಟಕ್ಕೆ ಬುಧವಾರ ಕೊಂಚ ತಡೆ ಬಿದ್ದಿದೆ. ಆರ್ಬಿಐ ಪ್ರಕಟಿಸಿದ ಆರ್ಥಿಕ ಪುನಃಶ್ಚೇತನ ಕ್ರಮಗಳಿಂದಾಗಿ ಬಿಎಸ್ಇ ಸೂಚ್ಯಂಕ 424.04 ಪಾಯಿಂಟ್ಸ್ ಏರಿಕೆಯಾಗಿದೆ.
ಬ್ಯಾಂಕಿಂಗ್, ಮಾಹಿತಿ ತಂತ್ರಜ್ಞಾನ ಕ್ಷೇತ್ರ, ಔಷಧೋದ್ಯಮ ಕ್ಷೇತ್ರದ ಷೇರುಗಳಿಗೆ ಹೆಚ್ಚಿನ ಬೇಡಿಕೆ ಉಂಟಾಯಿತು. ಇದರಿಂದಾಗಿ ದಿನಾಂತ್ಯಕ್ಕೆ ಸೂಚ್ಯಂಕ 48,677.55ರಲ್ಲಿ ಮುಕ್ತಾಯವಾಯಿತು. ನಿಫ್ಟಿ ಸೂಚ್ಯಂಕ 121.35 ಪಾಯಿಂಟ್ಸ್ಗಳಷ್ಟು ಜಿಗಿತ ಕಂಡು, ಸೂಚ್ಯಂಕ 14,617.85ರಲ್ಲಿ ಮುಕ್ತಾಯವಾಯಿತು.
2 ಪೈಸೆ ಕುಸಿತ: ಅಮೆರಿಕದ ಡಾಲರ್ ಎದುರು ರೂಪಾಯಿ 2 ಪೈಸೆ ಕುಸಿತ ಕಂಡಿದೆ. 73.80 ರೂ.ಗಳಿಂದ ವಹಿವಾಟು ಆರಂಭವಾಗಿ ದಿನಾಂತ್ಯಕ್ಕೆ 73.91 ರೂ.ಗಳಿಗೆ ಮುಕ್ತಾಯವಾ ಗಿದೆ. ಸೋಮವಾರ ಮತ್ತು ಮಂಗಳವಾರ ಡಾಲರ್ ಎದುರು ರೂಪಾಯಿ ಪ್ರಬಲವಾಗಿಯೇ ಚೇತರಿಸಿ ಕೊಂಡಿತ್ತು.
ಚಿನ್ನ ದರ ಕುಸಿತ: ಹೊಸದಿಲ್ಲಿ ಚಿನಿವಾರ ಮಾರು ಕಟ್ಟೆಯಲ್ಲಿ ಬುಧವಾರ ಚಿನ್ನದ ಬೆಲೆ 317 ರೂ. ಇಳಿಕೆಯಾಗಿದೆ. ಹೀಗಾಗಿ, ಪ್ರತೀ 10 ಗ್ರಾಂ ಚಿನ್ನಕ್ಕೆ 46,382 ರೂ.ಗೆ ಮುಕ್ತಾಯವಾಗಿದೆ. ಮಂಗಳವಾರ 46,699 ರೂ. ಆಗಿತ್ತು. ಆದರೆ ಪ್ರತೀ ಕೆ.ಜಿ. ಬೆಳ್ಳಿಯ ದರ 2,328 ರೂ. ಏರಿಕೆಯಾಗಿದ್ದು, 70,270 ರೂ. ಆಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿನ ಬೆಳವಣಿಗೆಯಿಂದಾಗಿ ಹೀಗಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha 1 Phase: ನಿತಿನ್ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…
Navy chief: ಭಾರತೀಯ ನೌಕಾಪಡೆಯ ನೂತನ ಮುಖ್ಯಸ್ಥರಾಗಿ ದಿನೇಶ್ ತ್ರಿಪಾಠಿ ನೇಮಕ
Stones Pelted: ಮತದಾನದ ವೇಳೆ ಕಲ್ಲು ತೂರಾಟ… ಬಿಜೆಪಿ ನಾಯಕನಿಗೆ ಗಾಯ
Gujarat Lok Sabha Constituency: ಗುಜರಾತ್ ಎಂಬ ಕೇಸರಿ ಕೋಟೆಗೆ ಲಗ್ಗೆ ಸಾಧ್ಯವೇ?
Vote: ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸಿ…: ಮತದಾರರಲ್ಲಿ ಮನವಿ ಮಾಡಿದ ಪ್ರಧಾನಿ ಮೋದಿ
MUST WATCH
ಹೊಸ ಸೇರ್ಪಡೆ
Lok Sabha Election: ‘ಬಿವೈಆರ್ಗೆ 3 ಲಕ್ಷ ಮತ ಅಂತರದ ಗೆಲುವು ಖಚಿತ’
ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ
Kushtagi: ನಿರೀಕ್ಷಿತ ಫಲಿತಾಂಶ ಬಾರದ ಹಿನ್ನೆಲೆ ಮನನೊಂದು ವಿದ್ಯಾರ್ಥಿನಿ ಆತ್ಮಹತ್ಯೆ
Vijayapura: ಸಿಡಿಲು ಬಡಿದು ಓರ್ವನಿಗೆ ಗಾಯ, ಮೂರು ಜಾನುವಾರು ಸಾವು
Mangaluru: ಬೈಕ್ ಡಿಕ್ಕಿಯಾಗಿ ರಸ್ತೆಗೆ ಬಿದ್ದ ಕಾರ್ಮಿಕನ ಮೇಲೆ ಹರಿದ ಟ್ಯಾಂಕರ್