ಛಾಯಾ ಬ್ಯಾಂಕ್ಗಳಿಗೂ ಇನ್ನು ಕಠಿನ ನಿಯಮ: ಆರ್ಬಿಐ
Team Udayavani, Jan 17, 2021, 7:10 AM IST
ಹೊಸದಿಲ್ಲಿ: ಛಾಯಾ ಬ್ಯಾಂಕ್ಗಳೆಂದು ಕರೆಸಿಕೊಳ್ಳಲ್ಪಟ್ಟಿರುವ, ಬೃಹತ್ ಬ್ಯಾಂಕೇತರ ಹಣಕಾಸು ಸಂಸ್ಥೆಗಳನ್ನು ಕಠಿನ ನಿಯಮಗಳ ವ್ಯಾಪ್ತಿಗೆ ತರಲು ಚಿಂತನೆ ನಡೆಸಲಾಗಿದೆ. ಹೀಗೆಂದು ಆರ್ಬಿಐ ಗವರ್ನರ್ ಶಕ್ತಿಕಾಂತ ದಾಸ್ ಶನಿವಾರ ಹೇಳಿದ್ದಾರೆ. 2018ರಲ್ಲಿ ಇನ್ಫಾಸ್ಟ್ರಕ್ಚರ್ ಲೀಸಿಂಗ್ ಆ್ಯಂಡ್ ಫೈನಾನ್ಶಿಯಲ್ ಸರ್ವೀಸಸ್ ದಿವಾಳಿಯಾಗಿದ್ದು, ದೇವನ್ ಹೌಸಿಂಗ್ ಕಾರ್ಪ್ ಮತ್ತು ಆಲ್ಟಿಕೊ ಕ್ಯಾಪಿಟಲ್ 2019ರಲ್ಲಿ ಇದೇ ಹಾದಿ ಹಿಡಿದಿದ್ದವು. ದಿಢೀರೆಂದು ಇಂತಹ ಸಂಸ್ಥೆಗಳು ಜನರಿಗೆ ಕೈಕೊಟ್ಟಾಗ ಸಾವಿ ರಾರು ಮಂದಿಯ ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತದೆ. ಅದನ್ನು ಸರಿಪಡಿಸುವ ಅನಿವಾರ್ಯತೆ ಆರ್ಬಿಐ ಮುಂದಿದೆ.ಮಾಮೂಲಿ ಬ್ಯಾಂಕ್ಗಳು ಶೇ.18ರಷ್ಟು ಠೇವಣಿ ಯನ್ನು ನಗದು, ಚಿನ್ನ ಅಥವಾ ಸರಕಾರಿ ಭದ್ರತೆಗಳ ರೂಪದಲ್ಲಿ ಇಟ್ಟು ಕೊಂಡಿರಲೇಬೇಕು. ಹಾಗೆಯೇ ಮೀಸಲು ನಗದಿನ ಪ್ರಮಾಣ ಶೇ.3ರಷ್ಟು ಹೊಂದಿರಲೇ ಬೇಕು. ಇದೇ ರೀತಿಯ ಕ್ರಮಗಳನ್ನು ಛಾಯಾ ಬ್ಯಾಂಕ್ಗಳೂ ಅನುಸರಿಸಬೇಕೆನ್ನುವುದು ಆರ್ಬಿಐ ಇಂಗಿತವಾಗಿದೆ.
ಛಾಯಾ ಬ್ಯಾಂಕ್ಗಳೆಂದರೇನು?: ಇವು ಮಾಮೂಲಿ ವಾಣಿಜ್ಯ ಬ್ಯಾಂಕ್ಗಳಂತೆಯೇ ಗ್ರಾಹಕರಿಗೆ ಹಣಕಾಸು ಸೇವೆ ನೀಡುತ್ತವೆ. ಆದರೆ ಮಾಮೂಲಿ ಬ್ಯಾಂಕ್ಗಳ ನಿಯಮಗಳ ಮಿತಿಗೆ ಒಳಪಡುವುದಿಲ್ಲ. ಒಂದು ರೀತಿ ಪರ್ಯಾಯ ಬ್ಯಾಂಕ್ಗಳಂತೆ ಕಾರ್ಯನಿರ್ವಹಿಸುತ್ತವೆ. ಆದ್ದರಿಂದ ಛಾಯಾ ಬ್ಯಾಂಕ್ ಅಥವಾ ಬ್ಯಾಂಕೇತರ ಹಣಕಾಸು ಸಂಸ್ಥೆಗಳೆಂದು ಕರೆಸಿಕೊಳ್ಳುತ್ತವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್
UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು
Rain: ಉಡುಪಿ ಜಿಲ್ಲೆಗೆ ತಂಪೆರೆದ ಮಳೆರಾಯ, ಜಿಲ್ಲಾದ್ಯಂತ ಗುಡುಗು ಸಹಿತ ಧಾರಾಕಾರ ಮಳೆ
Daily Horoscope: ಉದ್ಯೋಗ ಸ್ಥಾನದಲ್ಲಿ ನೆಮ್ಮದಿಯ ವಾತಾವರಣ, ಅಕಸ್ಮಾತ್ ಧನಪ್ರಾಪ್ತಿ
Heavy Rain; ದುಬಾೖ ಪ್ರಯಾಣ ಬೇಡ: ಸಲಹೆ