ಗುಜರಾತ್‌ಗೆ ಗೆಲುವಿನ ಪಂಚ್‌


Team Udayavani, Apr 28, 2017, 3:03 AM IST

Gujarat-27-4.jpg

ಬೆಂಗಳೂರು: ಬ್ಯಾಟಿಂಗ್‌ ಮತ್ತು ಬೌಲಿಂಗ್‌ನಲ್ಲಿ ಅಮೋಘ ನಿರ್ವಹಣೆ ದಾಖಲಿಸಿದ ಗುಜರಾತ್‌ ಲಯನ್ಸ್‌ ತಂಡವು ಗುರುವಾರ ನಡೆದ ಐಪಿಎಲ್‌ ಪಂದ್ಯದಲ್ಲಿ ರಾಯಲ್‌ ಚಾಲೆಂಜರ್ಸ್ ಬೆಂಗಳೂರು ತಂಡವನ್ನು 7 ವಿಕೆಟ್‌ಗಳಿಂದ ಭರ್ಜರಿಯಾಗಿ ಸೋಲಿಸಿದೆ. ಕೆಕೆಆರ್‌ ದಾಳಿಯಿಂದ ಕಂಗೆಟ್ಟಿದ್ದ ಆರ್‌ಸಿಬಿ ಗುಜರಾತ್‌ನ ದಾಳಿಗೂ ಉತ್ತರಿಸಲು ವಿಫ‌ಲವಾಗಿ ಮತ್ತೆ ಘೋರ ಬ್ಯಾಟಿಂಗ್‌ ವೈಫ‌ಲ್ಯ ಕಂಡಿತು. ಆದರೆ ಭಾರತೀಯ ಆಟಗಾರರ ಜವಾಬ್ದಾರಿಯ ಆಟದಿಂದಾಗಿ ತಂಡದ ಮೊತ್ತ ನೂರರ ಗಡಿ ದಾಟಿ 134 ರನ್ನಿಗೆ ಆಲೌಟಾಯಿತು. ಗೇಲ್‌, ಕೊಹ್ಲಿ ಮತ್ತು ಡಿ’ವಿಲಿಯರ್ಸ್ ಮತ್ತೆ ಬ್ಯಾಟಿಂಗ್‌ ವೈಫ‌ಲ್ಯ ಅನುಭವಿಸಿದರು.


ಗೆಲ್ಲಲು ಸುಲಭ ಸವಾಲು ಪಡೆದ ಗುಜರಾತ್‌ ಆರನ್‌ ಫಿಂಚ್‌ ಅವರ ಭರ್ಜರಿ ಆಟದಿಂದಾಗಿ 13.5 ಓವರ್‌ಗಳಲ್ಲಿ 135 ರನ್‌ ಪೇರಿಸಿ ಜಯ ಸಾಧಿಸಿತು. 23 ರನ್ನಿಗೆ 2 ವಿಕೆಟ್‌ ಕಳೆದುಕೊಂಡ ಬಳಿಕ ರೈನಾ ಅವರನ್ನು ಸೇರಿಕೊಂಡ ಫಿಂಚ್‌ ಬಿರುಸಿನ ಆಟವಾಡಿ ತಂಡದ ರನ್‌ವೇಗ ಹೆಚ್ಚಿಸಿದರು. ಮೂರನೇ ವಿಕೆಟಿಗೆ 92 ರನ್‌ ಪೇರಿಸುವ ಮೂಲಕ ತಂಡದ ಗೆಲುವು ಖಚಿತಗೊಳಿಸಿದರು. 34 ಎಸೆತ ಎದುರಿಸಿದ ಅವರು 5 ಬೌಂಡರಿ ಮತ್ತು 6 ಸಿಕ್ಸರ್‌ ನೆರವಿನಿಂದ 72 ರನ್‌ ಹೊಡೆದರು. 

ಈ ಮೊದಲು ಟಾಸ್‌ ಸೋತು ಬ್ಯಾಟಿಂಗಿಗೆ ಇಳಿಸಲ್ಪಟ್ಟ ಆರ್‌ಸಿಬಿ ಆರಂಭದಲ್ಲಿಯೇ ಕುಸಿಯಿತು. ಕೊಹ್ಲಿ ಒಂದು ಸಿಕ್ಸರ್‌ ಬಾರಿಸಿದರೂ 22 ರನ್‌ ತಲುಪಿದ ವೇಳೆ ಥಂಪಿಗೆ ವಿಕೆಟ್‌ ಒಪ್ಪಿಸಿದರು. ಈ ಹಿಂದಿನ ಪಂದ್ಯದಲ್ಲಿ ಹ್ಯಾಟ್ರಿಕ್‌ ವಿಕೆಟ್‌ ಪಡೆದಿದ್ದ ಆ್ಯಂಡ್ರ್ಯೂ ಟೈ ಆಬಳಿಕ ಸತತ ಎರಡು ಎಸೆತಗಳಲ್ಲಿ ಗೇಲ್‌ ಮತ್ತು ಟ್ರ್ಯಾವಿಸ್‌ ಹೆಡ್‌ ಅವರ ವಿಕೆಟನ್ನು ಹಾರಿಸಿದಾಗ ಆರ್‌ಸಿಬಿ ಮತ್ತೆ ಘೋರ ಬ್ಯಾಟಿಂಗ್‌ ಕುಸಿತಕ್ಕೆ ಒಳಗಾಗಬಹುದೆಂದು ಭಾವಿಸಲಾಗಿತ್ತು.


ಸ್ಕೋರ್‌ ಪಟ್ಟಿ
ಆರ್‌ಸಿ ಬೆಂಗಳೂರು

ಕ್ರಿಸ್‌ ಗೇಲ್‌    ಸಿ ಕಾರ್ತಿಕ್‌ ಬಿ ಟೈ    8
ವಿರಾಟ್‌ ಕೊಹ್ಲಿ    ಸಿ ಫಿಂಚ್‌ ಬಿ ಥಂಪಿ    10
ಎಬಿ ಡಿ’ವಿಲಿಯರ್ಸ್    ರನೌಟ್‌    5
ಟ್ರ್ಯಾವಿಸ್‌ ಹೆಡ್‌    ಸಿ ರೈನಾ ಬಿ ಟೈ    0
ಕೇದಾರ್‌ ಜಾಧವ್‌    ಬಿ ಜಡೇಜ    31
ಮನ್‌ದೀಪ್‌ ಸಿಂಗ್‌    ಸಿ ಜಡೇಜ ಬಿ ಟೈ    8
ಪವನ್‌ ನೇಗಿ    ಸಿ ಥಂಪಿ ಬಿ ಸೋನಿ    32
ಸಾಮ್ಯುಯೆಲ್‌ ಬದ್ರಿ    ಸಿ ಕಿಶನ್‌ ಬಿ ಜಡೇಜ    3
ಶ್ರೀನಾಥ್‌ ಅರವಿಂದ್‌    ಸಿ ಮೆಕಲಮ್‌ ಬಿ ಫಾಕ್ನರ್‌    9
ಅಂಕಿತ್‌ ಚೌಧರಿ    ಔಟಾಗದೆ    15
ಯಜ್ವೇಂದ್ರ ಚಾಹಲ್‌    ರನೌಟ್‌    1

ಇತರ:    12
ಒಟ್ಟು  (20 ಓವರ್‌ಗಳಲ್ಲಿ ಆಲೌಟ್‌)    134

ವಿಕೆಟ್‌ ಪತನ: 1-22, 2-22, 3-22, 4-58, 5-60, 6-100, 7-105, 8-110, 9-133

ಬೌಲಿಂಗ್‌:
ನಾಥು ಸಿಂಗ್‌     2-0-8-0
ಬಾಸಿಲ್‌ ಥಂಪಿ    4-0-34-1
ಆ್ಯಂಡ್ರ್ಯೂ ಟೈ    4-0-12-3
ರವೀಂದ್ರ ಜಡೇಜ    4-0-28-2
ಅಂಕಿತ್‌ ಸೋನಿ    3-0-28-1
ಜೇಮ್ಸ್‌ ಫಾಕ್ನರ್‌    3-0-15-1

ಗುಜರಾತ್‌ ಲಯನ್ಸ್‌
ಇಶಾನ್‌ ಕಿಶನ್‌    ಎಲ್‌ಬಿಡಬ್ಲ್ಯು ಬದ್ರಿ    16
ಬಿ. ಮೆಕಲಮ್‌    ಸಿ ಡಿ’ವಿಲಿಯರ್ ಬಿ ಬದ್ರಿ    3
ಸುರೇಶ್‌ ರೈನಾ    ಔಟಾಗದೆ    34
ಆರನ್‌ ಫಿಂಚ್‌    ಸಿ ಡಿ’ವಿಲಿಯರ್ಸ್ ಬಿ ನೇಗಿ    72
ರವೀಂದ್ರ ಜಡೇಜ    ಔಟಾಗದೆ    2

ಇತರ:    8
ಒಟ್ಟು (13.5 ಓವರ್‌ಗಳಲ್ಲಿ 3 ವಿಕೆಟಿಗೆ)    135
ವಿಕೆಟ್‌ ಪತನ: 1-18, 2-23, 3-115

ಬೌಲಿಂಗ್‌:
ಸಾಮ್ಯುಯೆಲ್‌ ಬದ್ರಿ    3-0-29-2
ಶ್ರೀನಾಥ್‌ ಅರವಿಂದ್‌    3-0-19-0
ಅಂಕಿತ್‌ ಚೌಧರಿ        2-0-21-0
ಯಜ್ವೇಂದ್ರ ಚಾಹಲ್‌    3-0-29-0
ಪವನ್‌ ನೇಗಿ        2-0-24-1
ಟ್ರ್ಯಾವಿಸ್‌ ಹೆಡ್‌        0.5-0-11-0

ಪಂದ್ಯಶ್ರೇಷ್ಠ: ಆ್ಯಂಡ್ರ್ಯೂ ಟೈ

ಟಾಪ್ ನ್ಯೂಸ್

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

Delhi LG: ಕೇರಳ ಚರ್ಚುಗಳಿಗೆ ದಿಲ್ಲಿ ಗೌರ್ನರ್‌ ಭೇಟಿ; ಆಯೋಗಕ್ಕೆ “ಕೈ’ ದೂರು

Delhi LG: ಕೇರಳ ಚರ್ಚುಗಳಿಗೆ ದಿಲ್ಲಿ ಗೌರ್ನರ್‌ ಭೇಟಿ; ಆಯೋಗಕ್ಕೆ “ಕೈ’ ದೂರು

Odisha: ಎನ್‌ಕೌಂಟರ್‌; ಇಬ್ಬರು ನಕ್ಸಲರ ಹತ್ಯೆ

Odisha: ಎನ್‌ಕೌಂಟರ್‌; ಇಬ್ಬರು ನಕ್ಸಲರ ಹತ್ಯೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.