ಚೀನ ವಿರುದ್ಧ ವೈಮಾನಿಕ ದಾಳಿಗೆ ಸಿದ್ಧ; ಏರ್ಚೀಫ್ ಮಾರ್ಷಲ್ ಆರ್ಕೆಎಸ್ ಭದೌರಿಯಾ
Team Udayavani, Oct 6, 2020, 6:20 AM IST
ಹೊಸದಿಲ್ಲಿ: ಚೀನ ಎದುರೊಡ್ಡುವ ಯಾವುದೇ ಸವಾಲನ್ನೂ ಸಕ್ಷಮವಾಗಿ ಎದುರಿಸುವ ಸಾಮರ್ಥ್ಯ ಭಾರತೀಯ ವಾಯುಪಡೆಗಿದೆ ಎಂದು ವಾಯುಪಡೆ ಮುಖ್ಯಸ್ಥ ಏರ್ಚೀಫ್ ಮಾರ್ಷಲ್ ಆರ್ಕೆಎಸ್ ಭದೌರಿಯಾ ಹೇಳಿದ್ದಾರೆ. ಪೂರ್ವ ಲಡಾಖ್ ಪ್ರಾಂತ್ಯದಲ್ಲಿ ಸೃಷ್ಟಿಯಾಗಿರುವ ಗಡಿ ಬಿಕ್ಕಟ್ಟಿನ ಬಗ್ಗೆ ಮಾತನಾಡುತ್ತಾ ಅವರು, ಯುದ್ಧಸದೃಶ ವಾತಾವರಣ ನಿರ್ಮಾಣವಾದರೆ ಏಕಕಾಲದಲ್ಲೇ ಉತ್ತರ, ಪಶ್ಚಿಮ ಗಡಿರೇಖೆಯಲ್ಲಿ ಸೆಣಸಲು ವಾಯುಪಡೆ ಸಿದ್ಧವಾಗಿದೆ, ಇದಷ್ಟೇ ಅಲ್ಲದೇ ಲಡಾಖ್ನ ಆಯಕಟ್ಟಿನ ಜಾಗಗಳಲ್ಲೆಲ್ಲ ಪಡೆಯನ್ನು ನಿಯೋಜಿಸಿದ್ದೇವೆ. ರಫೇಲ್ ಯುದ್ಧ ವಿಮಾನದ ಸೇರ್ಪಡೆ ನಮ್ಮ ಸಾಮರ್ಥ್ಯಕ್ಕೆ ಹೆಚ್ಚಿನ ಬಲ ತುಂಬಿದೆ ಎಂದೂ ಹೇಳಿದ್ದಾರೆ.
ಕಳೆದ 5 ತಿಂಗಳಿಂದ ಚೀನ -ಭಾರತ ಬಿಕ್ಕಟ್ಟು ಸೃಷ್ಟಿಯಾಗಿದ್ದು, ರಕ್ಷಣಾ ಇಲಾಖೆಯು ಸಾಗರೋಪಾದಿಯಲ್ಲಿ ವಾಸ್ತವಿಕ ಗಡಿನಿಯಂತ್ರಣ ರೇಖೆಯುದ್ದಕ್ಕೂ ಯುದ್ಧವಿಮಾನಗಳು, ಶಸ್ತ್ರಾಸ್ತಗಳು, ಸಹಸ್ರಾರು ಸಂಖ್ಯೆಯಲ್ಲಿ ಸೈನಿಕರನ್ನು ನಿಯೋಜಿಸಿದೆ. ವಾಯುಪಡೆ ದಿನದ ನಿಮಿತ್ತ ಪತ್ರಿಕಾಗೋಷ್ಠಿಯಲ್ಲಿ ಭದೌರಿಯಾ ಮಾತನಾಡಿದರು. ಚೀನ ದ ಪಡೆಗಳ ಸಾಮರ್ಥ್ಯದ ಬಗ್ಗೆ ಪ್ರಶ್ನೆ ಎದುರಾದಾಗ, “”ನಮ್ಮ ಎದುರಾಳಿಗಳನ್ನು ಕಡಿಮೆ ಅಂದಾಜು ಮಾಡುವ ಪ್ರಶ್ನೆಯೇ ಇಲ್ಲ. ನಿಸ್ಸಂಶಯವಾಗಿಯೂ ಅವರಿಗೆ ಅವರದ್ದೇ ಆದ ಶಕ್ತಿಯಿದೆ. ತಂತ್ರಜ್ಞಾನ, ಸಿಸ್ಟಮ್ಗಳಲ್ಲಿ ಚೀನ ದ ಹೂಡಿಕೆ ಅಗಾಧವಾಗಿದೆ” ಎಂದರು. ಭಾರತವು ಚೀನ ದ ದುರಾಕ್ರಮಣಕ್ಕೆ ತಡವಾಗಿ ಪ್ರತಿಕ್ರಿಯಿಸಿತು ಎನ್ನುವ ಆರೋಪ ಅಲ್ಲಗಳೆದ ಅವರು, “”ಮೇನಲ್ಲಿ ಚೀನ ಏನು ಮಾಡುತ್ತಿದೆ ಎನ್ನುವುದನ್ನು ಅರಿತ ನಾವು, ತ್ವರಿತ ಕ್ರಮ ಕೈಗೊಂಡಿದ್ದೇವೆ” ಎಂದು ಉತ್ತರಿಸಿದರು.
ಮುಖಾಮುಖಿ ?
ಭಾರತ-ಚೀನ ಗಡಿ ಬಿಕ್ಕಟ್ಟು ಮುಂದು ವರಿದಿರುವಂತೆಯೇ, ನ.17ರಂದು ಪ್ರಧಾನಿ ಮೋದಿ, ಚೀನ ಅಧ್ಯಕ್ಷ ಕ್ಸಿ ಜಿನ್ಪಿಂಗ್ ಪರಸ್ಪರ ಮುಖಾಮುಖೀಯಾಗಲಿದ್ದಾರೆ. ನ.17ರಂದು ರಷ್ಯಾ ಆಯೋಜಿಸಿರುವ ವರ್ಚುವಲ್ ಬ್ರಿಕ್ಸ್ ಶೃಂಗದಲ್ಲಿ ಉಭಯ ನಾಯಕರೂ ಪಾಲ್ಗೊಳ್ಳಲಿದ್ದಾರೆ. ಬ್ರೆಜಿಲ್, ರಷ್ಯಾ, ಭಾರತ, ಚೀನ ಮತ್ತು ದ. ಆಫ್ರಿಕಾದ ನಾಯಕರು ಭಾಗಿಯಾಗಲಿದ್ದು, ಶಾಂತಿ, ಭದ್ರತೆ, ಆರ್ಥಿಕತೆ ಸೇರಿದಂತೆ ವ್ಯೂಹಾತ್ಮಕ ಪಾಲುದಾರಿಕೆ ಕುರಿತು ಮಾತುಕತೆ ನಡೆಯಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!
Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು
Lok Sabha 1 Phase: ನಿತಿನ್ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…
Navy chief: ಭಾರತೀಯ ನೌಕಾಪಡೆಯ ನೂತನ ಮುಖ್ಯಸ್ಥರಾಗಿ ದಿನೇಶ್ ತ್ರಿಪಾಠಿ ನೇಮಕ
Stones Pelted: ಮತದಾನದ ವೇಳೆ ಕಲ್ಲು ತೂರಾಟ… ಬಿಜೆಪಿ ನಾಯಕನಿಗೆ ಗಾಯ