ರಾಮಾಯಣ : ಸಚಿವ ರಿಜಿಜು ವಿರುದ್ಧ ರೇಣುಕಾ ಹಕ್ಕು ಚ್ಯುತಿ
Team Udayavani, Feb 9, 2018, 11:40 AM IST
ಹೊಸದಿಲ್ಲಿ : ರಾಜ್ಯಸಭೆಯಲ್ಲಿ ನಿನ್ನೆ ಗುರುವಾರ ಪ್ರಧಾನಿ ನರೇಂದ್ರ ಮೋದಿ ಅವರು ಭಾಷಣ ಮಾಡುವಾಗ ಭಾಷಣಕಾರನನ್ನು ಅವಮಾನಿಸುವ ರೀತಿಯಲ್ಲಿ ದೊಡ್ಡ ಸ್ವರದಲ್ಲಿ ನಕ್ಕು ಎಲ್ಲರ ಗಮನವನ್ನು ತನ್ನೆಡೆಗೆ ಸೆಳೆದುಕೊಂಡ ರೇಣುಕಾ ಚೌಧರಿ ಅವರು ತನ್ನ ವಿರುದ್ಧ ಸಾಮಾಜಿಕ ಜಾಲ ತಾಣದಲ್ಲಿ ಆಕ್ಷೇಪಾರ್ಹ ಪೋಸ್ಟಿಂಗ್ ಹಾಕಿರುವ ಸಹಾಯಕ ಗೃಹ ಸಚಿವ ಕಿರಣ್ ರಿಜಿಜು ಅವರ ವಿರುದ್ಧ ಹಕ್ಯುಚ್ಯುತಿ ಗೊತ್ತುವಳಿಯನ್ನು ದಾಖಲಿಸಿದ್ದಾರೆ.
ರೇಣುಕಾ ಚೌಧರಿ ಅವರು ಸದನದಲ್ಲಿ ದೊಡ್ಡದಾಗಿ ನಕ್ಕಾಗ ಭಾಷಣಕಾರ ಪ್ರಧಾನಿ ಮೋದಿ ಅವರು ರಾಮಾಯಣ ಟಿವಿ ಸೀರಿಯಲ್ ಉಲ್ಲೇಖೀಸಿದ್ದರು. ಮೋದಿ ಅವರ ಈ ಉಲ್ಲೇಖದ ವಿಡಿಯೋವನ್ನು ಸಚಿವ ರಿಜಿಜು ಸಾಮಾಜಿಕ ಜಾಲ ತಾಣದಲ್ಲಿ ಹಾಕಿದ್ದರು. ಇದರಿಂದ ತನಗೆ ಅವಮಾನವಾಗಿದೆ; ಸಚಿವರು ಸದನ ಶಿಷ್ಟಾಚಾರ ಉಲ್ಲಂಘನೆ ಮಾಡಿದ್ದಾರೆ ಎಂದು ಆರೋಪಿಸಿ ಅವರ ವಿರುದ್ದ ರೇಣುಕಾ ಹಕ್ಕುಚ್ಯುತಿ ಗೊತ್ತುವಳಿ ಮಂಡಿಸಿದ್ದಾರೆ.
ಆದರೆ ಸಚಿವ ರಿಜಿಜು ಅವರು ತಾನು ಮೋದಿ ವಿಡಿಯೋ ಹಾಕುವ ಮೂಲಕ ಯಾವುದೇ ತಪ್ಪೆಸಗಿಲ್ಲ ಎಂದು ಟ್ವೀಟ್ ಮಾಡಿದ್ದಾರೆ. “ರೇಣುಕಾಜೀ ಅವರೇ, ನಾನು ಮಹಿಳೆಯರ ಘನತೆಯನ್ನು ಯಾವ ರೀತಿಯಲ್ಲಿ ಅವಮಾನಿಸಿದ್ದೇನೆ ಎಂಬುದು ನನಗೆ ಅರ್ಥವಾಗುವುದಿಲ್ಲ. ನಾನು ಕೇವಲ ಪ್ರಧಾನಿಯವರನ್ನು ಉಲ್ಲೇಖಸಿ ಅವರ ವಿಡಿಯೋ ತುಣುಕನ್ನು ಹಾಕಿದ್ದೇನೆ’ ಎಂದು ರಿಜಿಜು ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Delhi LG: ಕೇರಳ ಚರ್ಚುಗಳಿಗೆ ದಿಲ್ಲಿ ಗೌರ್ನರ್ ಭೇಟಿ; ಆಯೋಗಕ್ಕೆ “ಕೈ’ ದೂರು
Odisha: ಎನ್ಕೌಂಟರ್; ಇಬ್ಬರು ನಕ್ಸಲರ ಹತ್ಯೆ
Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..
IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್
Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ
MUST WATCH
ಹೊಸ ಸೇರ್ಪಡೆ
IPL: ಎಲ್ಲೆ ಮೀರಿ ವಿಕೆಟ್ ಸಂಭ್ರಮಾಚರಣೆಡೆಲ್ಲಿ ವೇಗಿ ರಸಿಕ್ ಸಲಾಂಗೆ ಛೀಮಾರಿ
IPL: ಇಂಪ್ಯಾಕ್ಟ್ ಪ್ಲೇಯರ್ ನಿಯಮಕ್ಕೆ ಅಕ್ಷರ್ ಪಟೇಲ್ ಕೂಡ ವಿರೋಧ
Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ
Sumalatha Ambareesh: ಟ್ವೀಟ್ನಲ್ಲಿ ಸಂಸದೆ ಸುಮಲತಾ ಅಂಬರೀಶ್ ವಿವೇಕದ ಪಾಠ
B.S.Yediyurappa: ಶಾಸಕ ಪ್ರಭು ಚವ್ಹಾಣ ಹೆಸರು ಹೇಳುತ್ತಿದ್ದಂತೆ ಬಿಎಸ್ವೈ ಗರಂ