ಗುಜರಾತ್‌ ರೈತರ ಮೇಲಿನ ಪ್ರಕರಣ ವಾಪಸ್‌

1 ಕೋಟಿ ಪರಿಹಾರ ಕೇಳಿದ್ದ ಸಂಸ್ಥೆ

Team Udayavani, May 14, 2019, 4:00 AM IST

28

ಸಬರ್‌ಕಾಂತಾ, ಆರವಳ್ಳಿ ಜಿಲ್ಲೆಗಳ 9 ರೈತರ ಮೇಲೆ ಪ್ರಕರಣ ದಾಖಲಿಸಿ ತಲಾ 1 ಕೋಟಿ ರೂ. ಹಾಗೂ ಜಿಲ್ಲೆಗಳ ರೈತರಿಂದ ತಲಾ 20 ಲಕ್ಷ ರೂ. ಅನ್ನು ಪರಿಹಾರ ರೂಪದಲ್ಲಿ ನೀಡುವಂತೆ ಕೋರ್ಟ್‌ ನಲ್ಲಿ ಹೇಳಿತ್ತು. ಅಹ್ಮದಾಬಾದ್‌ ಕೋರ್ಟ್‌ ಈ ತಳಿಯನ್ನು ಬೆಳೆಯದಂತೆ ತಡೆಯೂ ನೀಡಿತ್ತು.

ಬಹಿಷ್ಕಾರಕ್ಕೆ ಮಣಿದು ಕ್ರಮ ಕೈಗೊಂಡಿತೇ ಪೆಪ್ಸಿಕೊ!
ಈ ಸಂಸ್ಥೆ 30 ವರ್ಷಗಳಿಂದ ಭಾರತದಲ್ಲಿ ವ್ಯಾಪಾರ ನಡೆಸುತ್ತ್ತಾ ಬಂದಿದೆ. ಆಲೂಗಡ್ಡೆ ಬೆಳೆಯ ವಿಷಯದಲ್ಲಿ ಭಾರತದ ರೈತರನ್ನು ಎದುರು ಹಾಕಿಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. 9 ರೈತರ ಮೇಲೆ ತಲಾ 1 ಕೋಟಿ ರೂ.ಗಳ ಪರಿಹಾರ ಕೋರಿದ್ದ ಸಂಸ್ಥೆ ಈಗ ರೈತರ ಆಗ್ರಹಕ್ಕೆ ಮಣಿದಿದ್ದು, ಪ್ರಕರಣವನ್ನು ವಾಪಸ್‌ ಪಡೆದಿದೆ. ಮೂಲತಃ ಅಮೆರಿಕದ ಸಂಸ್ಥೆಯಾಗಿದ್ದರೂ ‘ಪೆಪ್ಸಿಕೊ ಇಂಡಿಯಾ’ವನ್ನು ದೇಶದಲ್ಲಿ ಸ್ಥಾಪಿಸಿತ್ತು.

ಮಣಿಪಾಲ: ಗುಜರಾತ್‌ನಲ್ಲಿ ಆಲೂಗಡ್ಡೆ ತಳಿಯೊಂದನ್ನು ಬೆಳೆಯುತ್ತಿದ್ದ ರೈತರ ಮೇಲೆ ಪ್ರಕರಣ ದಾಖಲಿಸಿದ್ದ ಪೆಪ್ಸಿಕೊ ಈಗ ಅದನ್ನು ವಾಪಸ್‌ ಪಡೆದಿದೆ. ಸಂಸ್ಥೆ ಎಫ್ಸಿ 5 ಜಾತಿಯ ಆಲೂಗಡ್ಡೆಯ ಮೇಲೆ ವಿಶೇಷ ಹಕ್ಕು ಹೊಂದಿದೆ ಎಂದು ಹೇಳಿ ಅದು ಕೋರ್ಟ್‌ ಮೆಟ್ಟಿಲೇರಿತ್ತು. ಈಗ ನಿಶ್ಶರ್ತವಾಗಿ ಪ್ರಕರಣವನ್ನು ಹಿಂತೆಗೆದುಕೊಂಡಿದೆ. ಈ ಮೂಲಕ ಅಮೆರಿಕ ಮೂಲದ ಎಂಎನ್‌ಸಿ ಕಂಪೆನಿಯ ವಿರುದ್ಧ ರೈತರಿಗೆ ಜಯವಾಗಿದೆ.

ಷರತ್ತು ಇಲ್ಲದೆ ಪ್ರಕರಣ ಅಂತ್ಯ
ಪೆಪ್ಸಿಕೊ ಇಲ್ಲಿನ ರೈತರ ಮೇಲೆ ಪ್ರಕರಣ ದಾಖಲಿಸಿದ್ದಕ್ಕಾಗಿ ಸಂಸ್ಥೆಯ ಉತ್ಪನ್ನಗಳನ್ನು ಬಹಿಷ್ಕರಿಸಲು ನಿರ್ಣಯವಾಗಿತ್ತು. ಇದಕ್ಕೆ ಪೂರಕವಾಗಿ ಸಾಮಾಜಿಕ ಜಾಲತಾಣದಲ್ಲಿ ಪೆಪ್ಸಿಕೊ ಉತ್ಪನ್ನವನ್ನು ಯಾರೂ ಖರೀದಿಸದಂತೆ ಪ್ರಚಾರಗಳು ಏರ್ಪಟ್ಟವು. ಟ್ವಿಟರ್‌ನಲ್ಲಿ #boycottPepsi ಎಂಬ ಹ್ಯಾಶ್‌ಟ್ಯಾಗ್‌ ಮೂಲಕ ಭಾರೀ ಆಕ್ರೋಶ ಮೂಡಿಬಂದಿತ್ತು. ಇದರಿಂದ ಎಚ್ಚೆತ್ತುಕೊಂಡ ಸಂಸ್ಥೆ ಪ್ರಕರಣವನ್ನು ಕೊನೆಗಾಣಿಸಲು ಯತ್ನಿಸಿತು.

ಗುಜರಾತ್‌ನ ಸಬರ್‌ಕಾಂತಾ ಮತ್ತು ಅರವಳ್ಳಿ ಜಿಲ್ಲೆಗಳ ರೈತರು ಎಫ್ಸಿ 5 ಜಾತಿಯ ಆಲೂಗಡ್ಡೆ ಯನ್ನು ಬೆಳೆಯುತ್ತಿದ್ದರು. ರೈತರ ಹೇಳಿಕೆಯಂತೆ ಅದು ಅವರೇ ಆವಿಷ್ಕರಿಸಿದ ತಳಿ. ಆದರೆ ಪೆಪ್ಸಿಕೊ ಹೇಳುವಂತೆ ಈ ನಿರ್ಧಿಷ್ಟ ತಳಿಯ ಮೇಲೆ ಅದು ವಿಶೇಷ ಹಕ್ಕುಸ್ವಾಮ್ಯ ಹೊಂದಿದೆ. ಅನು ಮತಿ ಇಲ್ಲದೆ ಅಕ್ರಮವಾಗಿ ಇದನ್ನು ಬೆಳೆಯಲಾಗು ತ್ತಿದ್ದು ಹಕ್ಕು ಸ್ವಾಮ್ಯದ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ಆರೋಪಿಸಿತ್ತು.

ಪೆಪ್ಸಿಕೊ ತನ್ನ ‘ಲೇಸ್‌’ ಬ್ರ್ಯಾಂಡ್‌ನ‌ ಚಿಪ್ಸ್‌ಗೆ ಎಫ್ಎಲ್ 2027 ಎಂಬ ವಿಶೇಷ ತಳಿಯ ಆಲೂಗಡ್ಡೆಯನ್ನು ಬಳಸುತ್ತಿದೆ. ಇದು ಎಫ್ಎಲ್ 1867 ಮತ್ತು ವಿಸ್‌ಚಿಪ್‌ (Wischip) ತಳಿಗಳ ಹೈಬ್ರಿಡ್‌ ತಳಿ. ಈ ವಿಶೇಷ ಆಲೂ ತಳಿಯನ್ನು ಸಸ್ಯ ಮಾದರಿ ಮತ್ತು ರೈತರ ಹಕ್ಕು ರಕ್ಷಣೆ ಕಾಯ್ದೆ (PPV FR Act) ಅಡಿ 2001ರಲ್ಲಿ ನೋಂದಾಯಿಸಿದೆ. 2009ರ ಬಳಿಕ ಎಫ್ಸಿ 5 ಆಲೂಗಡ್ಡೆಯ ಹಕ್ಕು ಪಡೆದಿದ್ದೇನೆ ಎಂಬುದು ಸಂಸ್ಥೆಯ ವಾದವಾಗಿತ್ತು. ಭಾರತದ ಶೇ. 50ರಷ್ಟು ಆಲೂಗಡ್ಡೆಯನ್ನು ಪೆಪ್ಸಿಕೊ ಪಡೆಯುತ್ತಿದೆ.

•••ಉದಯವಾಣಿ ಸ್ಪೆಷಲ್ ಡೆಸ್ಕ್

ಇಂಟರ್ನೆಟ್ ಚಿತ್ರ

ಟಾಪ್ ನ್ಯೂಸ್

Rahul Gandhi 3

BJP ಮಾಧ್ಯಮಗಳಿಂದ ನನಗೆ ನಿತ್ಯ ನಿಂದನೆ: ರಾಹುಲ್‌ ಗಾಂಧಿ ಆರೋಪ

1-qewqeqwe

TIME; ವಿಶ್ವದ 100 ಪ್ರಭಾವಿಗಳ ಪೈಕಿ ಆಲಿಯಾ, ಪ್ರಿಯಂವದ

1-aewr

DRDO; ನಿರ್ಭಯ್‌ ಪರೀಕ್ಷಾರ್ಥ ಉಡಾವಣೆ ಯಶಸ್ವಿ

1eewqe

Iran ವಶದಲ್ಲಿದ್ದ ಹಡಗಿನ ಮಹಿಳಾ ಸಿಬಂದಿ ವಾಪಸ್‌

vachanananda

Panchamasali ಎಂಬ ಕಾರಣಕ್ಕೆ ಯತ್ನಾಳ್‌ಗೆ ಸಿಎಂ ಅವಕಾಶ ನಿರಾಕರಣೆ: ವಚನಾನಂದ ಶ್ರೀ

police crime

Chitradurga: ಅನ್ಯಕೋಮಿನ ಯುವತಿಗೆ ಡ್ರಾಪ್ ನೀಡಿದ್ದಕ್ಕೆ ಹಲ್ಲೆ

1-wewq-eqwe

IPL; ರೋಚಕ ಪಂದ್ಯದಲ್ಲಿ ಪಂಜಾಬ್‌ ಎದುರು 9 ರನ್ ಜಯ ಸಾಧಿಸಿದ ಮುಂಬೈ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-qewqeqwe

TIME; ವಿಶ್ವದ 100 ಪ್ರಭಾವಿಗಳ ಪೈಕಿ ಆಲಿಯಾ, ಪ್ರಿಯಂವದ

1-aewr

DRDO; ನಿರ್ಭಯ್‌ ಪರೀಕ್ಷಾರ್ಥ ಉಡಾವಣೆ ಯಶಸ್ವಿ

1eewqe

Iran ವಶದಲ್ಲಿದ್ದ ಹಡಗಿನ ಮಹಿಳಾ ಸಿಬಂದಿ ವಾಪಸ್‌

Chattisgarh: ಕಳೆದ 4 ತಿಂಗಳಲ್ಲಿ 80 ನಕ್ಸಲೀಯರ ಸಾವು, 125 ಮಂದಿ ಬಂಧನ; 150 ಶರಣಾಗತಿ!

Chattisgarh: ಕಳೆದ 4 ತಿಂಗಳಲ್ಲಿ 80 ನಕ್ಸಲೀಯರ ಸಾವು, 125 ಮಂದಿ ಬಂಧನ; 150 ಶರಣಾಗತಿ!

ದ. ಭಾರತದಲ್ಲಿ ಬಿಜೆಪಿ ಎಷ್ಟು ಸ್ಥಾನಗಳಲ್ಲಿ ಜಯಗಳಿಸಬಹುದು? ರೇವಂತ್‌ ರೆಡ್ಡಿ ಲೆಕ್ಕಚಾರವೇನು!

ದ. ಭಾರತದಲ್ಲಿ ಬಿಜೆಪಿ ಎಷ್ಟು ಸ್ಥಾನಗಳಲ್ಲಿ ಜಯಗಳಿಸಬಹುದು? ರೇವಂತ್‌ ರೆಡ್ಡಿ ಲೆಕ್ಕಚಾರವೇನು!

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

30

CET Exam: ಮೊದಲ ದಿನ ಸುಸೂತ್ರವಾಗಿ ನಡೆದ ಸಿಇಟಿ

1-wqeqwe

Maharashtra; ರತ್ನಾಗಿರಿ- ಸಿಂಧುದುರ್ಗದಲ್ಲಿ ರಾಣೆ vs ಠಾಕ್ರೆ ಕಾದಾಟ

1-HM

Mathura ನನ್ನನ್ನು ಗೋಪಿಕೆಯೆಂದು ಭಾವಿಸುವೆ: ಬಿಜೆಪಿ ಅಭ್ಯರ್ಥಿ ಹೇಮಾ

Rahul Gandhi 3

BJP ಮಾಧ್ಯಮಗಳಿಂದ ನನಗೆ ನಿತ್ಯ ನಿಂದನೆ: ರಾಹುಲ್‌ ಗಾಂಧಿ ಆರೋಪ

1-qewqeqwe

TIME; ವಿಶ್ವದ 100 ಪ್ರಭಾವಿಗಳ ಪೈಕಿ ಆಲಿಯಾ, ಪ್ರಿಯಂವದ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.