ದಿ| ರಾಜೀವ್ ಭಾರತ ರತ್ನ ಹಿಂಪಡೆವ ಠರಾವು: ಆಪ್ ಶಾಸಕಿ ರಾಜೀನಾಮೆ?
Team Udayavani, Dec 22, 2018, 11:05 AM IST
ಹೊಸದಿಲ್ಲಿ : ದಿವಂಗತ ಪ್ರಧಾನಿ ರಾಜೀವ್ ಗಾಂಧಿ ಅವರಿಗೆ ಕೊಡಲಾಗಿದ್ದ ಭಾರತ ರತ್ನ ಪ್ರಶಸ್ತಿಯನ್ನು 1984ರ ಸಿಕ್ಖ್ ವಿರೋಧಿ ಗಲಭೆಗೆ ಸಂಬಂಧಿಸಿ ಹಿಂಪಡೆವ ಠರಾವನ್ನು ಬೆಂಬಲಿಸದ ಆಪ್ ಶಾಸಕಿ ಅಲ್ಕಾ ಲಾಂಬಾ ಅವರು ‘ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಅಪ್ಪಣೆ ಕೊಡಿಸಿರುವಂತೆ ಶಾಸಕತ್ವಕ್ಕೆ ರಾಜೀನಾಮೆ ನೀಡುವೆ’ ಎಂದು ಹೇಳಿದ್ದಾರೆ.
ನಿನ್ನೆ ಶುಕ್ರವಾರ ದಿಲ್ಲಿ ವಿಧಾನ ಸಭೆ, 1984ರ ಸಿಕ್ಖ್ ವಿರೋಧಿ ಗಲಭೆಗೆ ಸಂಬಂಧಿಸಿ ಅಂದಿನ ಪ್ರಧಾನಿ, ದಿವಂಗತ ರಾಜೀವ್ ಗಾಂಧಿಗೆ ನೀಡಲಾಗಿದ್ದ ಭಾರತ ರತ್ನ ಪ್ರಶಸ್ತಿಯನ್ನು 1984ರ ಸಿಕ್ಖ್ ವಿರೋಧಿ ಗಲಭೆಗೆ ಸಂಬಂಧಿಸಿ ಹಿಂಪಡೆಯಬೇಕೆಂದು ಆಗ್ರಹಿಸುವ ಠರಾವನ್ನು ಕೈಗೊಂಡಿತ್ತು. ಆದರೆ ಅದಾಗಿ ಸ್ವಲ್ಪವೇ ಹೊತ್ತಿನ ಬಳಿಕ ಆಮ್ ಆದ್ಮಿ ಪಾರ್ಟಿ ಅತ್ಯಂತ ತುರುಸಿನಲ್ಲಿ ಠರಾವಿನಲ್ಲಿ ಮಾಡಲಾಗಿರುವ ದಿವಂಗತ ಕಾಂಗ್ರೆಸ್ ನಾಯಕನ ಉಲ್ಲೇಖದಿಂದ ದೂರ ಸರಿದಿತ್ತು.
‘ಈ ಠರಾವನ್ನು ಬೆಂಬಲಿಸುವಂತೆ ನನ್ನ ಮೇಲೆ ಒತ್ತಡ ಹೇರಲಾಗಿತ್ತು; ನಾನದನ್ನು ಪ್ರತಿರೋಧಿಸಿದ್ದೆ. ಇದರ ಫಲವಾಗಿ ಯಾವುದೇ ಪರಿಣಾಮ ಎದುರಿಸಲು ನಾನು ಸಿದ್ಧ ಎಂದು ಕೂಡ ಹೇಳಿದ್ದೆ. ಆ ಪ್ರಕಾರ ನನ್ನ ರಾಜೀನಾಮೆಯನ್ನು ಸಿಎಂ ಕೇಜ್ರಿವಾಲ್ ಆಗ್ರಹಿಸಿದ್ದಾರೆ. ಅಂತೆಯೇ ನಾನು ರಾಜೀನಾಮೆ ನೀಡಲು ಸಿದ್ಧಳಿದ್ದೇನೆ’ ಎಂದು ಅಲ್ಕಾ ಲಾಂಬಾ ಹೇಳಿದ್ದಾರೆ.
ದಿಲ್ಲಿಯ ಚಾಂದನೀ ಚೌಕ ಕ್ಷೇತ್ರದ ಆಪ್ ಶಾಸಕಿಯಾಗಿರುವ ಅಲ್ಕಾ, ನಿನ್ನೆ ವಿಧಾನಸಭೆಯಲ್ಲಿ ಠರಾವು ಮಂಡನೆಯಾದಾಗ ಸಭಾತ್ಯಾಗಮಾಡಿದ್ದರು. ಇದಕ್ಕಾಗಿ ನಾನು ತ್ಯಾಗಪತ್ರ ಕೊಡಬೇಕೆಂಬ ಸಿಎಂ ಕೇಜ್ರಿವಾಲ್ ಸಂದೇಶ ನನಗೆ ಒಡನೆಯೇ ಬಂದಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Daily Horoscope: ಉದ್ಯೋಗದಲ್ಲಿ ಪ್ರತಿಭೆಗೆ ಗೌರವ, ದೇವತಾರಾಧನೆಯ ಮೂಲಕ ವಿಘ್ನ ನಿವಾರಣೆ
Srirangapatna: ಐಸ್ ಕ್ರೀಂನಲ್ಲಿ ವಿಷ ಬೆರೆಸಿ ಮಕ್ಕಳ ಕೊಂದ ತಾಯಿ
Loksabha Election; ದೇಶದಲ್ಲಿ ಹಂತ-1: ಮತ ಇಂದು
Ls Polls: ಕಾಂಗ್ರೆಸ್ ಗೆಲ್ಲಿಸದಿದ್ದರೆ ಸಿದ್ದು ಸ್ಥಾನಕ್ಕೆ ಕಂಟಕ; ಸಚಿವ ಬೈರತಿ ಸುರೇಶ್
Wrestlers: ದುಬಾೖ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದ ಇಬ್ಬರು ಕುಸ್ತಿಪಟುಗಳು