ರಿವಾಲ್ವರ್ ರಾಣಿ! ಮಂಟಪಕ್ಕೆ ನುಗ್ಗಿ ವರನನ್ನೇ ಅಪಹರಿಸಿದ ಪ್ರೇಯಸಿ
Team Udayavani, May 17, 2017, 1:37 PM IST
ಬುಂದೇಲ್ ಖಂಡ್: ಕ್ಷುಲ್ಲಕ ಕಾರಣಕ್ಕೆ ಮದುವೆ ಮುರಿದು ಬೀಳುವುದು, ವರ, ವಧು ಹಿಂದಿನ ದಿನ ನಾಪತ್ತೆಯಾಗೋದು, ವಿವಾಹ ವೇಳೆಯಲ್ಲೇ ರಂಪಾಟ ನಡೆಯುವ ಘಟನೆ ಬಗ್ಗೆ ಗೊತ್ತಿದೆ. ಆದರೆ ಇದು ಅವೆಲ್ಲಕ್ಕಿಂತ ಭಿನ್ನವಾದದ್ದು! ನೇರವಾಗಿಯೇ ಮದುವೆ ಮಂಟಪಕ್ಕೆ ಬಂದ ಯುವತಿಯೊಬ್ಬಳು ವರನ ತಲೆಗೆ ರಿವಾಲ್ವರ್ ಇಟ್ಟು ಕಿಡ್ನಾಪ್ ಮಾಡಿಕೊಂಡು ಹೋದ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ.
ಏನಿದು ರಿವಾಲ್ವರ್ ರಾಣಿ ಘಟನೆ!
25 ವರ್ಷದ ಯುವತಿಯೊಬ್ಬಳು ಇಬ್ಬರು ಯುವಕರ ಜೊತೆ ನೇರವಾಗಿ ಮದುವೆ ಮಂಟಪಕ್ಕೆ ಬಂದು, ವರನ ತಲೆಗೆ ರಿವಾಲ್ವರ್ ಇಟ್ಟು…ಈ ವ್ಯಕ್ತಿ ನನ್ನ ಪ್ರೀತಿಸಿದ್ದಾನೆ. ಈಗ ನನಗೆ ವಿಶ್ವಾಸದ್ರೋಹ ಎಸಗಿ, ಬೇರೊಬ್ಬಳ ಜೊತೆ ಹಸೆಮಣೆ ಏರಲು ಹೊರಟಿದ್ದಾನೆ. ಆದರೆ ನಾನು ಅದಕ್ಕೆ ಅವಕಾಶ ಕೊಡಲ್ಲ ಎಂದು ಸಿನಿಮಾ ಶೈಲಿಯಲ್ಲಿ ಆವಾಜ್ ಹಾಕಿದ್ದಾಳೆ.
ವರನನ್ನು ಮಂಟಪದಿಂದಲೇ ಕಿಡ್ನಾಪ್ ಮಾಡಿಕೊಂಡು ಹೋಗಿ ತನ್ನ ಒತ್ತೆಯಾಳನ್ನಾಗಿ ಇರಿಸಿಕೊಂಡಿರುವ ಘಟನೆ ಮಂಗಳವಾರ ರಾತ್ರಿ ಉತ್ತರಪ್ರದೇಶದ ಬುಂದೇಲ್ ಖಂಡ್ ನಲ್ಲಿ ನಡೆದಿದೆ ಎಂದು ವರದಿ ವಿವರಿಸಿದೆ.
ಸ್ಥಳೀಯರ ಮಾಹಿತಿ ಪ್ರಕಾರ, ಅಶೋಕ್ ಯಾದವ್ ಎಂಬ ವರ ನಾಪತ್ತೆಯಾಗಿರುವುದಾಗಿ ತಿಳಿಸಿದ್ದಾರೆ.
ಯಾದವ್ ಪ್ರೇಮದ ಸುಳಿಗೆ ಸಿಲುಕಿದ್ದಾನೆ ಎಂದು ಹೇಳಿರುವ ಸ್ಥಳೀಯರು ಆತ ರಹಸ್ಯವಾಗಿ ಮದುವೆಯಾಗಿರುವುದಾಗಿ ಆರೋಪಿಸುತ್ತಾರೆ. ಆದರೆ ಕುಟುಂಬಸ್ಥರ ಒತ್ತಡದ ಮೇರೆಗೆ ಯಾದವ್ ಮತ್ತೊಬ್ಬಾಕೆ ಜೊತೆ ಮದುವೆಗೆ ಒಪ್ಪಿಕೊಂಡಿರುವುದಾಗಿ ತಿಳಿಸಿದ್ದಾರೆ.
ದಂಗುಬಡಿದು ನಿಂತಿದ್ದ ಅತಿಥಿಗಳು ವರನ ತಂದೆ ರಾಮಹೆತ್ ಯಾದವ್ ಬಳಿ ವಿಚಾರಿಸಿದಾಗ, ಹೌದು ನನ್ನ ಮಗನ ಬಗ್ಗೆ ನನಗೆ ಸಂದೇಶ ಇದ್ದಿತ್ತು. ನನ್ನ ಮಗ ಕೆಲಸ ಮಾಡುತ್ತಿರುವ ನಗರಕ್ಕೆ ಹೋದಾಗ ಆತ ನನ್ನ ಮನೆಗೆ ಕರೆಯಲಿಲ್ಲ. ಒಂದು ದೇವಾಲಯದಲ್ಲಿ ಭೇಟಿಯಾಗಿ, ಮಾತನಾಡಿ ಕಳುಹಿಸಿದ್ದ ಎಂದು ಹೇಳಿದ್ದಾರೆ.
ಏತನ್ಮಧ್ಯೆ ಮದುವೆ ಮಂಟಪದಿಂದ ವರನನ್ನು ಅಪಹರಿಸಿರುವುದಾಗಿ ಆರೋಪಿಸಿ ವಧುವಿನ ಕಡೆಯವರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ಸಂದರ್ಭದಲ್ಲಿ ಒಬ್ಬ ಪೊಲೀಸ್ ಅಧಿಕಾರಿ ಅರೇ ಈಕೆ ರಿವಾಲ್ವರ್ ರಾಣಿಯೇ ಎಂದು ಅಭಿಪ್ರಾಯವ್ಯಕ್ತಪಡಿಸಿರುವುದಾಗಿ ವರದಿ ವಿವರಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ex-IPS officer ಸಂಜೀವ್ ಭಟ್ಗೆ 1996 ರ ಡ್ರಗ್ಸ್ ಕೇಸ್ ನಲ್ಲಿ 20 ವರ್ಷ ಜೈಲು ಶಿಕ್ಷೆ
Kejriwal; ಏಪ್ರಿಲ್ 1 ರವರೆಗೆ ಇಡಿ ಕಸ್ಟಡಿಗೆ: ಸಾರ್ವಜನಿಕರು ತಕ್ಕ ಉತ್ತರ ನೀಡುತ್ತಾರೆ
Kejriwal ಕುರಿತು ಅಮೆರಿಕದ ಹೇಳಿಕೆ ಸ್ವೀಕಾರಾರ್ಹವಲ್ಲ ಎಂದ ಭಾರತದ ವಿದೇಶಾಂಗ ಇಲಾಖೆ
Mangaluru;ಮನೆಯಲ್ಲೇ ಅಕ್ರಮ ಕಸಾಯಿಖಾನೆ:ಗೋಮಾಂಸ ಸಹಿತ ಮೂವರ ಬಂಧನ
Kolkata ವಿಮಾನ ನಿಲ್ದಾಣದಲ್ಲಿ ಸ್ವಯಂ ಗುಂಡಿಟ್ಟುಕೊಂಡು ಯೋಧ ಆತ್ಮಹತ್ಯೆ
MUST WATCH
ಹೊಸ ಸೇರ್ಪಡೆ
Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್, ಸ್ಟೋಯಿನಿಸ್, ಅಗರ್ ಹೊರಕ್ಕೆ
ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್
Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್
Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್ಗಳು: ಪ್ರವಾಸಿಗರಿಗೆ ಭಯ
IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್ಗಳ ಜಯ