ಮೋದಿ ವರ್ಕ್ ಮೋಡ್ ಇಲ್ಲದ ಮೊಬೈಲ್ ಫೋನ್; ಸೈಕಲ್ ಏರಿದ ರಾಹುಲ್
Team Udayavani, May 7, 2018, 4:45 PM IST
ಬೆಂಗಳೂರು : ”ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಮೊಬೈಲ್ನಲ್ಲಿ ಸ್ಪೀಕರ್ ಮೋಡ್ ಮತ್ತು ಏರ್ಪ್ಲೇನ್ ಮೋಡ್ ಮಾತ್ರವೇ ಬಳಸುತ್ತಾರೆ; ಹೊರತು ವರ್ಕ್ ಮೋಡ್ ಬಳಸಲ್ಲ” ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರಿಂದು ಕೋಲಾರದಲ್ಲಿ ಹೆಲಿಕಾಪ್ಟರ್ ಮತ್ತು ಎಸ್ಯುವಿ ವಾಹನಗಳನ್ನು ಬಳಸುವ ಬದಲು ಆಮೆಗತಿಯ ”ಸೈಕಲ್ ಮೋಡ್” ಬಳಸಿಕೊಂಡು ಮೋದಿ ವಿರುದ್ಧ ತಮ್ಮ ವಾಕ್ಸಮರವನ್ನು ಮುಂದುವರಿಸಿದರು.
ಮೇ 12ರ ಚುನಾವಣೆ ದಿನ ಸಮೀಪಿಸುತ್ತಿರುವಂತೆಯೇ ರಾಜ್ಯದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳು ಪರಸ್ಪರ ಮಾಡುತ್ತಿರುವ ಭರಾಟೆಯ ಆರೋಪ – ಪ್ರತ್ಯಾರೋಪಗಳ ಪ್ರಚಾರ ಶೈಲಿ ತಾರಕಕ್ಕೇರುತ್ತಿದೆ. ಕೋಲಾರದಲ್ಲಿಂದು ರಾಹುಲ್ ಗಾಂಧಿ ಸೈಕಲ್ ಏರುವ ಮೂಲಕ ತಮ್ಮ ಪ್ರಚಾರಾಭಿಯಾನಕ್ಕೆ ಹೊಸ ಮೆರುಗು ನೀಡಿ ಜನಸಾಮಾನ್ಯರೊಂದಿಗೆ ಬೆರೆತುಕೊಂಡರು.
#WATCH Congress President Rahul Gandhi campaigns on a bicycle in Karnataka's Kolar. #KarnatakaElections2018 pic.twitter.com/8ayz4hN0Cm
— ANI (@ANI) May 7, 2018
2014ರಲ್ಲಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಅನಂತರದಲ್ಲಿ ಪ್ರದಾನಿ ಮೋದಿ ಮಾಡಿದ್ದೇನೆ ಎಂದು ಪ್ರಶ್ನಿಸಿದ ರಾಹುಲ್, “ನಿಮಗೆಲ್ಲ ತಿಳಿದಿರುವ ಹಾಗೆ ಮೊಬೈಲ್ ಫೋನಿನಲ್ಲಿ 3 ಮೋಡ್ಗಳಿರುತ್ತವೆ – ವರ್ಕ್ ಮೋಡ್, ಸ್ಪೀಕರ್ ಮೋಡ್ ಮತ್ತು ಏರ್ಪ್ಲೇನ್ ಮೋಡ್; ಆದರೆ ಮೋದಿ ಜೀ ಅವರು ಕೇವಲ ಸ್ಪೀಕರ್ ಮೋಡ್ ಮತ್ತು ಏರ್ಪ್ಲೇನ್ ಮೋಡ್ ಮಾತ್ರವೇ ಬಳಸುತ್ತಾರೆ; ಅವರು ಯಾವತ್ತೂ ವರ್ಕ್ ಮೋಡ್ ಬಳಸುವುದೇ ಇಲ್ಲ’ ಎಂದು ಸುದ್ದಿಗಾರರೊಂದಿಗೆ ಮಾತನಾಡುತ್ತಾ ಹೇಳಿದ ಅವರು ಪರೋಕ್ಷವಾಗಿ ”ಮೋದಿ ಅವರು ಸದಾ ಭಾಷಣದಲ್ಲಿ ನಿರತರಾಗಿರುತ್ತಾರೆ (ಸ್ಪೀಕರ್ ಮೋಡ್), ಸದಾ ವಿದೇಶ ಪ್ರಯಾಣದಲ್ಲಿ ತೊಡಗಿರುತ್ತಾರೆ (ಏರ್ಪ್ಲೇನ್ ಮೋಡ್), ಕೆಲಸವನ್ನು ಮಾತ್ರ ಮಾಡುವುದಿಲ್ಲ (work mode)” ಎಂಬುದನ್ನು ಧ್ವನಿಸಿದರು.
ಪ್ರಧಾನಿ ಮೋದಿ ಅವರು ಈ ಮೊದಲಿನ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರದ ಯೋಜನೆಗಳನ್ನೇ ರೀ ಪ್ಯಾಕೇಜ್ ಮಾಡಿ ಜನರ ಮುಂದಿಡುತ್ತಿದ್ದಾರೆ ಮತ್ತು ಅವುಗಳ ಸಂಪೂರ್ಣ ಲಾಭವನ್ನು ಹೊಡೆದುಕೊಳ್ಳುತ್ತಿದ್ದಾರೆ; ಅತ್ಯಂತ ಗಂಭೀರ ವಿಷಯಗಳ ಬಗ್ಗೆ ಮೋದಿ ಮೌನಾಚರಣೆ ಮಾಡುತ್ತಾರೆ; ಭ್ರಷ್ಟ ರಾಜಕಾರಣಿಗಳಿಗೆ ಎಲೆಕ್ಷನ್ ಟಿಕೆಟ್ ನೀಡಿ ಭ್ರಷ್ಟಾಚಾರವನ್ನು ಉತ್ತೇಜಿಸುತ್ತಾರೆ ಎಂದು ರಾಹುಲ್ ಪುನರುಚ್ಚರಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ex-IPS officer ಸಂಜೀವ್ ಭಟ್ಗೆ 1996 ರ ಡ್ರಗ್ಸ್ ಕೇಸ್ ನಲ್ಲಿ 20 ವರ್ಷ ಜೈಲು ಶಿಕ್ಷೆ
Kejriwal; ಏಪ್ರಿಲ್ 1 ರವರೆಗೆ ಇಡಿ ಕಸ್ಟಡಿಗೆ: ಸಾರ್ವಜನಿಕರು ತಕ್ಕ ಉತ್ತರ ನೀಡುತ್ತಾರೆ
Kejriwal ಕುರಿತು ಅಮೆರಿಕದ ಹೇಳಿಕೆ ಸ್ವೀಕಾರಾರ್ಹವಲ್ಲ ಎಂದ ಭಾರತದ ವಿದೇಶಾಂಗ ಇಲಾಖೆ
Mangaluru;ಮನೆಯಲ್ಲೇ ಅಕ್ರಮ ಕಸಾಯಿಖಾನೆ:ಗೋಮಾಂಸ ಸಹಿತ ಮೂವರ ಬಂಧನ
Kolkata ವಿಮಾನ ನಿಲ್ದಾಣದಲ್ಲಿ ಸ್ವಯಂ ಗುಂಡಿಟ್ಟುಕೊಂಡು ಯೋಧ ಆತ್ಮಹತ್ಯೆ
MUST WATCH
ಹೊಸ ಸೇರ್ಪಡೆ
Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್ ಮಧ್ವರಾಜ್
Hassan Lok sabha Constituency: ಪ್ರಜ್ವಲ್ ರೇವಣ್ಣ ನಾಮಪತ್ರ ಸಲ್ಲಿಕೆ
Lok sabha polls: ಸುರೇಶ್ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್ ದಾಸ್
Bike thief: ಬಜಪೆ ಪೊಲೀಸರಿಂದ ಅಂತರ್ ಜಿಲ್ಲಾ ಬೈಕ್ ಕಳ್ಳನ ಬಂಧನ
Ex-IPS officer ಸಂಜೀವ್ ಭಟ್ಗೆ 1996 ರ ಡ್ರಗ್ಸ್ ಕೇಸ್ ನಲ್ಲಿ 20 ವರ್ಷ ಜೈಲು ಶಿಕ್ಷೆ