ಜೆಡಿಯುನಿಂದ ಶರದ್ ಉಚ್ಚಾಟನೆ; ರಾಜ್ಯಸಭಾ ಸದಸ್ಯತ್ವಕ್ಕೆ ಸಂಚಕಾರ?
Team Udayavani, Aug 10, 2017, 11:59 AM IST
ಹೊಸದಿಲ್ಲಿ : ತನ್ನ ಹಳೇ ಮಿತ್ರ ಬಿಜೆಪಿಯ ಬೆಂಬಲದಲ್ಲಿ ಜೆಡಿಯು ನಾಯಕ ನಿತೀಶ್ ಕುಮಾರ್ ಹೊಸ ಸರಕಾರವನ್ನು ರಚಿಸಿ ಎರಡು ವಾರ ಆಗುವಷ್ಟರಲ್ಲಿ ಇದೀಗ ಬಿಹಾರ ಇನ್ನೊಂದು ರಾಜಕೀಯ ಬಲ ಪ್ರದರ್ಶನಕ್ಕೆ ಸಜ್ಜಾಗಿದೆ.
ಮೂಲಗಳಿಂದ ತಿಳಿದು ಬಂದಿರುವ ಪ್ರಕಾರ ನಿತೀಶ್ ನೇತೃತ್ವದ ಜೆಡಿಯು ಇದೀಗ ಪಕ್ಷದ ಹಿರಿಯ ಸದಸ್ಯ ಶರದ್ ಯಾದವ್ ಅವರ ವಿರುದ್ಧ ಚಾಟಿ ಬೀಸಲಿದೆ ಮತ್ತು ಅವರಿಂದ ರಾಜ್ಯಸಭಾ ಸದಸ್ಯತ್ವವನ್ನು ಹಿಂಪಡೆಯುವ ಸಿದ್ಧತೆಯಲ್ಲಿದೆ.
ಶರದ್ ಯಾದವ್ ಅವರು ಒಂದೊಮ್ಮೆ ತಾನೇ ತನ್ನ ಸ್ಥಾನವನ್ನು ಬಿಟ್ಟುಕೊಡದಿದ್ದಲ್ಲಿ ಅವರನ್ನು ಪಕ್ಷದಿಂದಲೇ ಉಚ್ಚಾಟಿಸುವ ಸಾಧ್ಯತೆ ಇದೆ ಎಂದು ಮೂಲಗಳು ಹೇಳಿವೆ.
ಯಾದವ್ ಅವರು ತಾನು ಇದೇ ಆ.10ರಿಂದ 12ರ ತನಕ, ಬಿಹಾರದ 10 ವಿಧಾನಸಭಾ ಕ್ಷೇತ್ರಗಳಿಗೆ ಭೇಟಿ ನೀಡಿ, ಜೆಡಿಯು ಮತ್ತು ಆರ್ಜೆಡಿ ಮಹಾಘಟಬಂಧನದಿಂದ ಹಿಂದೆಗೆದುಕೊಂಡಿರುವುದರ ಪರಿಣಾಮಗಳನ್ನು ಜನರೊಡನೆ ಸುವುದಾಗಿ ಪ್ರಕಟಿಸಿದ್ದರು.
ನಿನ್ನೆ ಬುಧವಾರ ಬೆಳಗ್ಗೆ ಶರದ್ ಯಾದವ್ ಅವರು, ಗುಜರಾತ್ನಿಂದ ರಾಜ್ಯಸಭೆಗೆ ಆಯ್ಕೆಯಾಗಿರುವ ಕಾಂಗ್ರೆಸ್ ನಾಯಕ ಅಹ್ಮದ್ ಪಟೇಲ್ ಅವರನ್ನು ಅಭಿನಂದಿಸಿದ್ದರು.
ಯಾದವ್ ಅವರು ಈಚೆಗೆ “ನನ್ನ ಪ್ರಾಣಕ್ಕೆ ಅಪಾಯವಿದೆ’ ಎಂದು ಹೇಳಿಕೊಂಡಿದ್ದರು. ನಿತೀಶ್ ಮತ್ತು ಯಾದವ್ ಬೇರ್ಪಡುತ್ತಾರೆಂಬ ವದಂತಿಗಳು ಈಚೆಗೆ ಜೋರಾಗಿ ಹಬ್ಬಿಕೊಂಡಿದ್ದವು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
EC ಚುನಾವಣ ಆಯೋಗ ಅಲ್ಲ, ಬಿಜೆಪಿ ಆಯೋಗ: ಮಮತಾ ಬ್ಯಾನರ್ಜಿ ಟೀಕಾಸ್ತ್ರ
ED; ನಾನು ತಿಂದದ್ದು ಮೂರೇ ಮಾವು: ಕೋರ್ಟ್ಗೆ ಕೇಜ್ರಿವಾಲ್ ಮಾಹಿತಿ
Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!
Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು
Lok Sabha 1 Phase: ನಿತಿನ್ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…
MUST WATCH
ಹೊಸ ಸೇರ್ಪಡೆ
EC ಚುನಾವಣ ಆಯೋಗ ಅಲ್ಲ, ಬಿಜೆಪಿ ಆಯೋಗ: ಮಮತಾ ಬ್ಯಾನರ್ಜಿ ಟೀಕಾಸ್ತ್ರ
Kasaragod ವಿವಿಪ್ಯಾಟ್ಗಳಲ್ಲಿ ದೋಷಗಳಿಲ್ಲ: ಚುನಾವಣಾಧಿಕಾರಿ
ರಾಜ್ಯದಲ್ಲಿ ಐದೂವರೆ ಸಿಎಂಗಳು: ಬಿಜೆಪಿ ರಾಷ್ಟ್ರೀಯ ವಕ್ತಾರ ಗೌರವ್ ಭಾಟಿಯಾ ವ್ಯಂಗ್ಯ
ರಾಜ್ಯಕ್ಕೆ ಅನ್ಯಾಯವಾದಾಗ ಸ್ಪಂದಿಸದ ಕೇಂದ್ರ ಸರಕಾರ: ಇಂಧನ ಸಚಿವ ಜಾರ್ಜ್
ED; ನಾನು ತಿಂದದ್ದು ಮೂರೇ ಮಾವು: ಕೋರ್ಟ್ಗೆ ಕೇಜ್ರಿವಾಲ್ ಮಾಹಿತಿ