ಗಡಿ ರೇಖೆಯ ಬಳಿ ಕಠಿಣ ಸೇನಾ ತರಬೇತಿ
ಭಾರತ-ಚೀನಾ ಗಡಿಯ ತವಾಂಗ್ ಸೆಕ್ಟರ್ ಬಳಿಯಿರುವ ಭೂಸೇನೆಯ ಕೇಂದ್ರ
Team Udayavani, Oct 24, 2021, 6:40 AM IST
ನವದೆಹಲಿ: ಸಮುದ್ರಮಟ್ಟದಿಂದ 15,000 ಎತ್ತರದ ಜಾಗ, ಎಲ್ಲೆಲ್ಲೂ ಕಡಿದಾದ ಬೆಟ್ಟಗಳು, ದಟ್ಟವಾಗಿ ಮಂಜು ಸುರಿಯುವಂಥ ಪ್ರತಿಕೂಲ ಹವಾಮಾನ - ಭಾರತ ಮತ್ತು ಚೀನಾ ನಡುವಿನ ನೈಜ ಗಡಿರೇಖೆಯಲ್ಲಿ (ಎಲ್ಎಸಿ), ಭಾರತೀಯ ಸೇನೆಯು ಸೈನಿಕರಿಗಾಗಿ ಸ್ಥಾಪಿಸಿರುವ ತರಬೇತಿ ಶಿಬಿರದ ಪರಿಸರವಿದು.
ಪ್ರತಿಕೂಲದ ಪರಿಸ್ಥಿತಿಗಳಲ್ಲಿ ಶತ್ರುವಿನ ವಿರುದ್ಧ ಹೋರಾಡುವ ಛಾತಿ ಬೆಳೆಸುವ ಉದ್ದೇಶದಿಂದ “ಪ್ಲಾನ್ 190′ ಯೋಜನೆಯಡಿ ಇದನ್ನು ಸ್ಥಾಪಿಸಲಾಗಿದೆ. ಕಷ್ಟಕರವಾದ ವ್ಯಾಯಾಮ, ಹೈ ಇಂಟೆನ್ಸಿಟಿ ದೇಹದಾಡ್ಯ ಕಸರತ್ತುಗಳು, ಕವಾಯತುಗಳು ಹಾಗೂ ಸಶಸ್ತ್ರ ಯುದ್ಧ ತಂತ್ರಗಾರಿಕೆಯನ್ನು ಇಲ್ಲಿ ಕಲಿಸಿಕೊಡಲಾಗುತ್ತದೆ.
ಯಾವ ತುಕಡಿಗೆ ಇಲ್ಲಿ ತರಬೇತಿ?
ಎಲ್ಎಸಿ ಬಳಿ ಕರ್ತವ್ಯದಲ್ಲಿ ಇರುವವರಿಗೆಲ್ಲಾ ಇಲ್ಲಿ ತರಬೇತಿ ನೀಡಲಾಗುತ್ತದೆ. ಕರ್ತವ್ಯದ ಪಾಳಿ ಮುಗಿದ ನಂತರ ದಿನಂಪ್ರತಿ 3 ಗಂಟೆಗಳ ಕಾಲ ಇಲ್ಲಿ ಅವರು ಅಭ್ಯಾಸ ನಡೆಸುವುದನ್ನು ಕಡ್ಡಾಯಗೊಳಿಸಲಾಗಿದೆ. ತರಬೇತಿಯ ನಂತರ 10 ನಿಮಿಷ ಯೋಗಾಭ್ಯಾಸ ಹಾಗೂ ಧ್ಯಾನಕ್ಕೂ ಇಲ್ಲಿ ಅವಕಾಶವಿದೆ.
ಇದನ್ನೂ ಓದಿ:ಪಂಚಮಸಾಲಿಗಳ ಒತ್ತಡಕ್ಕೆ ಸರ್ಕಾರ ಮಣಿಯಬಾರದು: ಸಿ.ಎಸ್ ದ್ವಾರಕಾನಾಥ್
ಎಲ್ಲಿದೆ ಈ ಕೇಂದ್ರ?
ಭಾರತ- ಚೀನಾ ಗಡಿ ನಿಯಂತ್ರಣ ರೇಖೆಯ ಬಳಿ, ಭಾರತದ ಗಡಿಯೊಳಗಿರುವ ತವಾಂಗ್ ಸೆಕ್ಟರ್ನ ಬಳಿಯಿರುವ ಯುದ್ಧಾನುಕೂಲ ಜಾಗವಾದ ಬಮ್ ಲಾ ಸನಿಹದಲ್ಲಿದೆ. ಇಲ್ಲಿಂದ ತವಾಂಗ್ ಅನ್ನು ಸಂಪರ್ಕಿಸಲು ಸುಮಾರು 35 ಕಿ.ಮೀ. ದೂರದ ಎರಡು ಕಾಲು ದಾರಿಗಳಿವೆ. ಒಂದು ಎಲ್ಎಸಿಯ ಬಮ್ ಲಾಕ್ಕೆ ಹೋದರೆ, ಮತ್ತೂಂದು ನೇರವಾಗಿ ತವಾಂಗ್ಗೆ ಹೋಗುತ್ತದೆ.
ತರಬೇತಿ ಕೇಂದ್ರದಲ್ಲಿ ಸಾಮಾನ್ಯ ಸರಾಸರಿ ತಾಪಮಾನ 5 ಡಿಗ್ರಿ ಸೆಂಟಿಗ್ರೇಡ್ ಇರುತ್ತದೆ. ಇನ್ನೆರಡು ತಿಂಗಳಲ್ಲಿ ಅಲ್ಲಿನ ತಾಪಮಾನ -25 ಡಿಗ್ರಿಗೆ ಇಳಿಯುತ್ತದೆ. ಅದೇ ವಾತಾವರಣ 6 ತಿಂಗಳವರೆಗೆ ಇರುತ್ತದೆ. ಇಂಥ ಪ್ರತಿಕೂಲ ಪರಿಸ್ಥಿತಿಯಲ್ಲಿ ತರಬೇತಿ ಪಡೆಯುವ ಯಾವುದೇ ಸೈನಿಕ, ಎಲ್ಎಸಿಯಲ್ಲಿ ಎಂಥ ವೈರುಧ್ಯದ ಹವಾಮಾನವಿದ್ದರೂ ಹೋರಾಡಿ ಜಯಿಸಬಲ್ಲ ತಂತ್ರಗಾರಿಕೆ ರೂಢಿಸಿಕೊಳ್ಳುತ್ತಾನೆ.
– ಬ್ರಿಗೇಡಿಯರ್ ಜಗತಾಪ್, ತವಾಂಗ್ ಬ್ರಿಗೇಡ್ ಕಮಾಂಡರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Delhi LG: ಕೇರಳ ಚರ್ಚುಗಳಿಗೆ ದಿಲ್ಲಿ ಗೌರ್ನರ್ ಭೇಟಿ; ಆಯೋಗಕ್ಕೆ “ಕೈ’ ದೂರು
Odisha: ಎನ್ಕೌಂಟರ್; ಇಬ್ಬರು ನಕ್ಸಲರ ಹತ್ಯೆ
Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..
IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್
Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ
MUST WATCH
ಹೊಸ ಸೇರ್ಪಡೆ
B.S.Yediyurappa: ಶಾಸಕ ಪ್ರಭು ಚವ್ಹಾಣ ಹೆಸರು ಹೇಳುತ್ತಿದ್ದಂತೆ ಬಿಎಸ್ವೈ ಗರಂ
Shimoga: ಈಶ್ವರಪ್ಪ ಪರ ಪ್ರಚಾರ ನಡೆಸಿದ್ದ ಮಹಿಳೆ ಮೇಲೆ ಹಲ್ಲೆ- ದೂರು
Bramavara: “ನನ್ನನ್ನು ಕ್ಷಮಿಸಿ’ ಎಂದು ಹೇಳಿ ನಾಪತ್ತೆ
Bird flu: ಕೇರಳದಲ್ಲಿ ಹಕ್ಕಿಜ್ವರ ಭೀತಿ; ಚೆಕ್ಪೋಸ್ಟ್ಗಳಲ್ಲಿ ತಪಾಸಣೆ
Delhi LG: ಕೇರಳ ಚರ್ಚುಗಳಿಗೆ ದಿಲ್ಲಿ ಗೌರ್ನರ್ ಭೇಟಿ; ಆಯೋಗಕ್ಕೆ “ಕೈ’ ದೂರು