ಸಚಿವ ಗೋಯಲ್ಗೆ ತಿರುಗೇಟು ನೀಡಿದ ರಿತೇಶ್ ದೇಶ್ಮುಖ್
Team Udayavani, May 14, 2019, 9:41 AM IST
ಹೊಸದಿಲ್ಲಿ: 26/11 ರ ಮುಂಬಯಿ ಉಗ್ರ ದಾಳಿ ವಿಚಾರಕ್ಕೆ ಸಂಬಂಧಿಸಿ ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ದಿವಂಗತ ವಿಲಾಸ್ ರಾವ್ ದೇಶ್ ಮುಖ್ ಅವರನ್ನು ಟೀಕಿಸಿದ ಕೇಂದ್ರ ಸಚಿವ ಪಿಯೂಷ್ ಗೋಯಲ್ ಅವರಿಗೆ ನಟ ರಿತೇಶ್ ದೇಶ್ಮುಖ್ ತಿರುಗೇಟು ನೀಡಿದ್ದಾರೆ.
ಟ್ವೀಟ್ನಲ್ಲಿ ಆರೋಪಕ್ಕೆ ತಿರುಗೇಟು ನೀಡಿರುವ ರಿತೇಶ್, ಗೌರವಾನ್ವಿತ ಸಚಿವರೇ , ನಿಮಗೆ ಮುಖ್ಯಮಂತ್ರಿಯನ್ನುಪ್ರಶ್ನಿಸುವ ಎಲ್ಲಾ ಹಕ್ಕಿದೆ.ಆದರೆಯಾರು ಈಗ ನಮ್ಮೊಂದಿಗೆ ಸ್ಪಷ್ಟನೆ ನೀಡಲು ಇಲ್ಲವೋ ಅವರ ಬಗ್ಗೆ ಹೇಳುವುದು ತಪ್ಪು. ಹೌದು ನೀವು ಹೇಳಿತಂತೆನಾನು ತಾಜ್ . ಓಬೇರಾಯ್ ಹೊಟೇಲ್ಗೆ ಭೇಟಿ ನೀಡಿದ್ದೆ.ಆದರೆ ಗುಂಡಿನ ಮತ್ತು ಬಾಂಬ್ ದಾಳಿಯಾಗುವನಾನಲ್ಲಿ ಇದ್ದೆ ಅನ್ನುವುದು ಸುಳ್ಳು. ನಾನು ನನ್ನ ತಂದೆ ಯೊಂದಿಗೆ ತೆರಳಿದ್ದು ನಿಜ ಆದರೆ ಅವರು ಚಿತ್ರವೊಂದರಲ್ಲಿ ನನಗೆ ಪಾತ್ರ ಪಡೆಯುವ ಕುರಿತು ಮಾತುಕತೆ ನಡೆಸುತ್ತಿದ್ದರು ಎನ್ನುವುದು ಸುಳ್ಳು. ಅವರು ಎಂದೂ ನನ್ನ ಸಿನಿಮಾ ಪಾತ್ರಕ್ಕಾಗಿ ನಿರ್ಮಾಪಕ, ನಿರ್ದೇಶಕರ ಬಳಿ ಮಾತನಾಡಿದವರಲ್ಲ. ಈ ಬಗ್ಗೆ ನಮಗೆ ಹೆಮ್ಮೆ ಇದೆ. ಸ್ವಲ್ಪ ತಡವಾಯಿತು. 7 ವರ್ಷಗಳ ಹಿಂದಾದರೆ ಅವರೆ ಉತ್ತರ ನೀಡುತ್ತಿದ್ದರು.ನಿಮ್ಮ ಪ್ರಚಾರಕ್ಕೆ ನನ್ನ ಶುಭ ಹಾರೈಕೆಗಳು ಸರ್. ಎಂದು ಟ್ವೀಟ್ ಮೂಲಕ ತಿರುಗೇಟು ನೀಡಿದ್ದಾರೆ.
ಗೋಯಲ್ ಅವರು ಭಾನುವಾರ ಮುಂಬಯಿಯಲ್ಲಿ ಚುನಾವಣಾ ಪ್ರಚಾರದ ವೇಳೆ ವಿಲಾಸ್ ರಾವ್ ದೇಶ್ಮುಖ್ 2008 ರಲ್ಲಿ ಮುಂಬಯಿ ಉಗ್ರ ದಾಳಿ ನಡೆದಿದ್ದ ವೇಳೆಅಂದಿನ ಮುಖ್ಯಮಂತ್ರಿ ವಿಲಾಸ್ ರಾವ್ ದೇಶ್ಮುಖ್ ಮಗನ ಸಿನಿಮಾ ಪಾತ್ರದ ಕುರಿತು ನಿರ್ಮಾಪಕರ ಜೊತೆ ಮಾತುಕತೆ ನಡೆಸುತ್ತಿದ್ದರು. ಕಾಂಗ್ರೆಸ್ ದುರ್ಬಲ ಸರ್ಕಾರವಾಗಿ ಎನನ್ನೂ ಮಾಡಿರಲಿಲ್ಲ ಎಂದು ಆರೋಪಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Brahmos; ಫಿಲಿಪ್ಪೀನ್ಸ್ಗೆ ಬ್ರಹ್ಮೋಸ್: ಭಾರತದ ಮೊದಲ ರಫ್ತು
EC ಚುನಾವಣ ಆಯೋಗ ಅಲ್ಲ, ಬಿಜೆಪಿ ಆಯೋಗ: ಮಮತಾ ಬ್ಯಾನರ್ಜಿ ಟೀಕಾಸ್ತ್ರ
ED; ನಾನು ತಿಂದದ್ದು ಮೂರೇ ಮಾವು: ಕೋರ್ಟ್ಗೆ ಕೇಜ್ರಿವಾಲ್ ಮಾಹಿತಿ
Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!
Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು