ಭಂಡಾರಿ ನಂಟಿನ ಬಗ್ಗೆ ವಾದ್ರಾಗೆ ಪ್ರಶ್ನೆಗಳ ಮಳೆ
Team Udayavani, Feb 10, 2019, 12:30 AM IST
ಹೊಸದಿಲ್ಲಿ: ಅಕ್ರಮ ಆಸ್ತಿ ಹಾಗೂ ಅಕ್ರಮ ಹಣ ವರ್ಗಾವಣೆಗೆ ಸಂಬಂಧಿಸಿದಂತೆ, ರಾಬರ್ಟ್ ವಾದ್ರಾ ಅವರ ವಿಚಾರಣೆ ಜಾರಿ ನಿರ್ದೇಶನಾಲಯದ ಕಚೇರಿಯಲ್ಲಿ ಶನಿವಾರವೂ ನಡೆಯಿತು.
ಬುಧವಾರ ಮತ್ತು ಗುರುವಾರ 11 ಗಂಟೆ ವಿಚಾರಣೆ ನಡೆಸಿದ್ದ ಇ.ಡಿ, ಗುರುವಾರದ ವಿಚಾರಣೆಯನ್ನು ವಾದ್ರಾ ಅವರಿಗೆ ಸೇರಿವೆಯೆನ್ನಲಾದ ಲಂಡನ್ನಲ್ಲಿನ 110 ಕೋಟಿ ರೂ. ಮೌಲ್ಯದ ಆಸ್ತಿಪಾಸ್ತಿ ಬಗ್ಗೆ ಕೇಂದ್ರೀಕೃತ ಗೊಳಿಸಿತ್ತು. ಜತೆಗೆ, ಬಂದೂಕು ಮಾರಾಟಗಾರ ಸಂಜಯ್ ಭಂಡಾರಿ, ಅವರ ಸಂಬಂಧಿ ಸುಮಿತ್ ಚಂದಾ ಹಾಗೂ ಇತರ ಇಬ್ಬರೊಂದಿಗೆ ವಾದ್ರಾ ಹೊಂದಿರುವ ನಂಟಿನ ಬಗ್ಗೆ ವಿಚಾರಣೆ ನಡೆಸಲಾಯಿತು. ವರದಿ ಪ್ರಕಾರ, ಲಂಡನ್ನ ಬ್ರಯಾನ್ಸ್ಟನ್ ಸ್ಕ್ವೇರ್ನಲ್ಲಿರುವ ವಾದ್ರಾ ಗೆ ಸೇರಿದ 17 ಕೋಟಿ ರೂ. ಮೌಲ್ಯದ ಬಂಗಲೆಯ ನವೀಕರಣ ಹಿನ್ನೆಲೆಯಲ್ಲಿ, ಒಳಾಂಗಣ ವಿನ್ಯಾಸಗಾರ ಸುಮಿತ್ ಚಂದಾ, ವಾದ್ರಾ ನಡುವೆ ವಿನಿಮಯಗೊಂಡಿರುವ ಕೆಲ ಇ-ಮೇಲ್ಗಳ ಬಗ್ಗೆ ವಾದ್ರಾ ಅವರಿಗೆ ಕೆಲವು ಪ್ರಶ್ನೆಗಳನ್ನು ಕೇಳಲಾಯಿತು. ಒಂದು ಇ-ಮೇಲ್ನಲ್ಲಿ ಸುಮಿತ್ ಅವರು, ವಾದ್ರಾಗೆ ನವೀಕರಣದ ಬಾಕಿ ಮೊತ್ತ ಪಾವತಿಸಲು ಮನವಿ ಮಾಡಿದ್ದರು. ಇದಕ್ಕೆ ಉತ್ತರಿಸಿರುವ ವಾದ್ರಾ, ಪಾವತಿ ವಿಚಾರ ಮನೋಜ್ ನೋಡಿಕೊಳ್ಳುತ್ತಾರೆ ಎಂದು ಹೇಳಿದ್ದಾರೆ. ಮನೋಜ್ ಎಂಬಾತ ವಾದ್ರಾ ಅವರ ಮಾಲೀಕತ್ವದ ಸ್ಕೈಲೈಟ್ ಹಾಸ್ಪಿಟಾಲಿಟಿ ಸಂಸ್ಥೆಯ ಉದ್ಯೋಗಿ ಎಂದು ವರದಿಯಲ್ಲಿ ಹೇಳಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
West Bengal; ಮಗಳನ್ನು ಕಂಡು ಕಣ್ಣೀರಿಟ್ಟ ಶೇಖ್ ಷಹಜಹಾನ್: ಬಿಜೆಪಿ ವ್ಯಂಗ್ಯ
Amit Shah: 2024ರ ಚುನಾವಣೆಯಲ್ಲಿ ಎನ್ ಡಿಎಗೆ 400ಕ್ಕೂ ಅಧಿಕ ಸ್ಥಾನ ಖಚಿತ: ಶಾ
Patanjali ತಪ್ಪು ಜಾಹೀರಾತು; ಕ್ಷಮೆಯಾಚಿಸಿದ ಬಾಬಾ ರಾಮ್ ದೇವ್,ಬಾಲಕೃಷ್ಣ
Scrap mafia ದರೋಡೆಕೋರ ರವಿ ಕಾನಾ ಮತ್ತು ಪ್ರೇಯಸಿ ಕಾಜಲ್ ಥಾಯ್ಲೆಂಡ್ ನಲ್ಲಿ ಬಂಧನ
Andhra ಟಿಡಿಪಿ ಅಭ್ಯರ್ಥಿ ಆಸ್ತಿ ಬರೋಬ್ಬರಿ 5,785 ಕೋ.ರೂ.!
MUST WATCH
ಹೊಸ ಸೇರ್ಪಡೆ
Congress ನಿಂದ ಬದುಕು; ಬಿಜೆಪಿಯದ್ದು ಭಾವನೆಗಳ ಚೆಲ್ಲಾಟ: ಡಾ| ಭಂಡಾರಿ
ರಾಹುಲ್ ಗಾಂಧಿ ಹೋದಲ್ಲೆಲ್ಲಾ ನಾವು ಗೆದ್ದಿದೀವಿ: ಬಳ್ಳಾರಿಯಲ್ಲಿ ನಮ್ಮ ಗೆಲುವು ನಿಶ್ಚಿತ
Congress ತುಷ್ಟೀಕರಣ ರಾಜಕೀಯಕ್ಕೆ ಮುಸ್ಲಿಂ ಮೀಸಲಾತಿಗೆ ಬೆಂಬಲಿಸುತ್ತದೆ: ಬೊಮ್ಮಾಯಿ
ಭಾರತದಲ್ಲಿ ರಿಲೀಸ್ಗೂ ಮುನ್ನ ʼಮಂಕಿ ಮ್ಯಾನ್ʼ ಹೆಚ್ ಡಿ ಕಾಪಿ ಲೀಕ್: ವಿಳಂಬ ಯಾಕೆ?
Bagalkote: ಯತ್ನಾಳ ಗೊಡ್ಡ ಎಮ್ಮಿ ಇದ್ದಂಗ: ಕಾಶಪ್ಪನವರ ಟೀಕೆ