ಹಿಂದುತ್ವ ಎನ್ನುವುದು ಧರ್ಮವಲ್ಲ ಅದು ಜೀವನ ವಿಧಾನ: ಮೋಹನ್ ಭಾಗವತ್
ನಾವೆಲ್ಲರೂ ಹಿಂದೂಗಳು.... ವೈಯಕ್ತಿಕ ಹಿತಾಸಕ್ತಿಗಳನ್ನು ತ್ಯಾಗ ಮಾಡಬೇಕು
Team Udayavani, Sep 26, 2022, 2:30 PM IST
ನವದೆಹಲಿ: ”ಭಾರತೀಯ ಮತ್ತು ಹಿಂದೂಗಳು ಸಮಾನಾರ್ಥಕ ಭೌಗೋಳಿಕ-ಸಾಂಸ್ಕೃತಿಕ ಗುರುತು. ನಾವೆಲ್ಲರೂ ಹಿಂದೂಗಳು ಎಂದು ಆರ್ ಎಸ್ಎಸ್ ಸರಸಂಘ ಚಾಲಕ ಮೋಹನ್ ಭಾಗವತ್ ಸೋಮವಾರ ಹೇಳಿದ್ದಾರೆ.
ಗುಡ್ಡಗಾಡು ರಾಜ್ಯ ಮೇಘಾಲಯಕ್ಕೆ ಎರಡು ದಿನಗಳ ಭೇಟಿಯ ಮೊದಲ ದಿನ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿ, ಭಾರತದ ಸರ್ವತೋಮುಖ ಅಭಿವೃದ್ಧಿ ಮತ್ತು ಸಮಾಜವನ್ನು ಸಂಘಟಿಸುವುದು ಸಂಘದ ಧ್ಯೇಯವಾಗಿದೆ. ವೈಯಕ್ತಿಕ ಹಿತಾಸಕ್ತಿಗಳನ್ನು ತ್ಯಾಗ ಮಾಡುವ ಮೂಲಕ ದೇಶಕ್ಕಾಗಿ ತ್ಯಾಗ ಮಾಡುವುದನ್ನು ಆರ್ಎಸ್ಎಸ್ ಕಲಿಸುತ್ತದೆ ಎಂದರು.
ಇದನ್ನೂ ಓದಿ : ಮೈಸೂರಿನಲ್ಲೇ ತಯಾರಾದ ರೇಷ್ಮೆ ಸೀರೆಯುಟ್ಟು ದಸರೆಗೆ ಆಗಮಿಸಿದ ರಾಷ್ಟ್ರಪತಿ ದ್ರೌಪದಿ ಮುರ್ಮು
”ಹಿಮಾಲಯದ ದಕ್ಷಿಣ, ಹಿಂದೂ ಮಹಾಸಾಗರದ ಉತ್ತರ ಮತ್ತು ಸಿಂಧೂ ನದಿಯ ದಡದ ನಿವಾಸಿಗಳನ್ನು ಸಾಂಪ್ರದಾಯಿಕವಾಗಿ ಹಿಂದೂಗಳು ಎಂದು ಕರೆಯಲಾಗುತ್ತದೆ. ಮೊಘಲರು ಮತ್ತು ಕ್ರಿಶ್ಚಿಯನ್ನರಿಗಿಂತ ಮುಂಚೆಯೇ ಹಿಂದೂಗಳು ಅಸ್ತಿತ್ವದಲ್ಲಿದ್ದರು. ವಾಸ್ತವವಾಗಿ ಹಿಂದುತ್ವ ಎನ್ನುವುದು ಧರ್ಮವಲ್ಲ ಅದು ಜೀವನ ವಿಧಾನ” ಎಂದರು.
ಭಾರತಮಾತೆಯ ಮಗ ಹಿಂದೂ
”ಹಿಂದೂ ಎಂಬ ಪದವು ಭಾರತಮಾತೆಯ ಪುತ್ರರಾದ ಭಾರತೀಯ ಪೂರ್ವಜರ ವಂಶಸ್ಥರು ಮತ್ತು ಭಾರತೀಯ ಸಂಸ್ಕೃತಿಯ ಪ್ರಕಾರ ಬದುಕುವವ ಎಲ್ಲರನ್ನೂ ಒಳಗೊಂಡಿದೆ. ಭಾರತದಲ್ಲಿ ವಾಸಿಸುವ ಪ್ರತಿಯೊಬ್ಬರೂ ಹಿಂದೂಗಳು . ಹಿಂದೂ ಆಗಲು ಧರ್ಮ ಬದಲಾಯಿಸುವ ಅಗತ್ಯವಿಲ್ಲ. ಭಾರತವು ಪಾಶ್ಚಿಮಾತ್ಯ ಪರಿಕಲ್ಪನೆಯ ದೇಶವಲ್ಲ” ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Noida; ಪ್ರೇಯಸಿಯನ್ನು ಕೊಂದು ಆತ್ಮಹತ್ಯೆಗೆ ಯತ್ನಿಸಿದ ಪ್ರಿಯಕರ!
RBI: ಏಪ್ರಿಲ್ 1 ರಂದು 2,000 ರೂ ಆರ್ ಬಿಐನಲ್ಲಿ ನೋಟುಗಳ ವಿನಿಮಯ/ಠೇವಣಿ ಸಾಧ್ಯವಿಲ್ಲ
Delhi CM Arvind Kejriwalಗೆ ಮತ್ತೆ 4 ದಿನ ಇ.ಡಿ. ಕಸ್ಟಡಿ
ಬಿಲ್ ಗೇಟ್ಸ್ ಜತೆ ಮಾತುಕತೆಯಲ್ಲಿ ಪ್ರಧಾನಿ ಮೋದಿ ಎಐ ಚರ್ಚೆ
Jammu-Srinagar National Highway; ಕಮರಿಗೆ ಉರುಳಿದ ಟ್ಯಾಕ್ಸಿ; ಹತ್ತು ಜನರು ಸಾವು