RSS ಕಾರ್ಯಕರ್ತನ ಭೀಕರ ಹತ್ಯೆ;ಮುಖ ಸುಟ್ಟ ಸ್ಥಿತಿಯಲ್ಲಿ ಶವ ಪತ್ತೆ
Team Udayavani, Jan 23, 2019, 1:45 PM IST
ರಾತ್ಲಾಂ (ಮಧ್ಯಪ್ರದೇಶ ): ಜಿಲ್ಲಾ ಮುಖ್ಯ ಕಾರ್ಯಾಲಯದಿಂದ 20 ಕಿ.ಮೀ ದೂರದಲ್ಲಿ ಬಿಲ್ಪಾಂಕ್ ಥಾನಾ ಎಂಬಲ್ಲಿ ಆರ್ಎಸ್ಎಸ್ ಪೂರ್ವ ಮಂಡಲ ಕಾರ್ಯವಾಹರಾಗಿದ್ದ ಹಿಮ್ಮತ್ ಪಾಟೀದಾರ್ ಎನ್ನುವವರನ್ನು ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆಗೈದಿದ್ದಾರೆ.
36 ವರ್ಷ ಪ್ರಾಯದ ಪಾಟೀದಾರ್ ಅವರ ಶವ ಬುಧವಾರ ಜಮೀನಿನಲ್ಲಿ ಪತ್ತೆಯಾಗಿದ್ದು, ಮಂಗಳವಾರ ಹೊಲಕ್ಕೆ ಹೋದವರನು ನಾಪತ್ತೆಯಾಗಿದ್ದು, ಕತ್ತು ಕತ್ತರಿಸಲಾಗಿದ್ದು, ಮುಖ ಗುರುತು ಸಿಗದಂತೆ ಬೆಂಕಿ ಹಚ್ಚಿ ಸುಟ್ಟು ಹಾಕಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಸ್ಥಳಕ್ಕಾಗಮಿಸಿದ ಪೊಲೀಸರು ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿಕೊಟ್ಟಿದ್ದಾರೆ.
ಹತ್ಯೆಯಾದ ಸ್ಥಳದಲ್ಲಿ ಪೊಲೀಸರಿಗೆ ಟಾರ್ಚ್ ಪತ್ತೆಯಾಗಿದ್ದು, ಮೋಟಾರ್ ಸೈಕಲ್ ಶವದಿಂದ 10 ಮೀಟರ್ ದೂರದಲ್ಲಿ ಬಿದ್ದಿತ್ತು. ಇದನ್ನೇ ಆಧರಿಸಿ ತನಿಖೆ ಕೈಗೊಂಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Brahmos; ಫಿಲಿಪ್ಪೀನ್ಸ್ಗೆ ಬ್ರಹ್ಮೋಸ್: ಭಾರತದ ಮೊದಲ ರಫ್ತು
EC ಚುನಾವಣ ಆಯೋಗ ಅಲ್ಲ, ಬಿಜೆಪಿ ಆಯೋಗ: ಮಮತಾ ಬ್ಯಾನರ್ಜಿ ಟೀಕಾಸ್ತ್ರ
ED; ನಾನು ತಿಂದದ್ದು ಮೂರೇ ಮಾವು: ಕೋರ್ಟ್ಗೆ ಕೇಜ್ರಿವಾಲ್ ಮಾಹಿತಿ
Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!
Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು