ವಲಸೆ ಕಾರ್ಮಿಕರಿಗೆ ರಕ್ಷಣೆ, ಭದ್ರತೆ: ಬಿಹಾರ,ಯುಪಿಗೆ ಗುಜರಾತ್ ಭರವಸೆ
Team Udayavani, Oct 8, 2018, 4:19 PM IST
ಹೊಸದಿಲ್ಲಿ : ಸಬರ್ಕಾಂತ್ ರೇಪ್ ಕೇಸಿನ ಫಲಶ್ರುತಿ ಎಂಬಂತೆ ಗುಜರಾತ್ನಲ್ಲಿನ ಬಿಹಾರ ಮತ್ತು ಉತ್ತರ ಪ್ರದೇಶ ವಲಸೆ ಕಾರ್ಮಿಕರ ಮೇಲೆ ದಾಳಿ, ಹಲ್ಲೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಕೋರಿಕೆ ಪ್ರಕಾರ ಬಿಹಾರ ವಲಸೆ ಕಾರ್ಮಿಕರ ಸುರಕ್ಷೆಗೆ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಗುಜರಾತ್ ಸರಕಾರ ಭರವಸೆ ನೀಡಿದೆ.
ಬಿಹಾರದ ವಲಸೆ ಕಾರ್ಮಿಕನೊರ್ವ ಕಳೆದ ವಾರ ಸಬರ್ಕಾಂತ್ ಜಿಲ್ಲೆಯಲ್ಲಿ 14ರ ಹರೆಯದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ್ದ. ಇದನ್ನು ಅನುಸರಿಸಿ ಬಿಹಾರದಿಂದ ಇಲ್ಲಿಗೆ ಬಂದಿರುವ ವಲಸೆ ಕಾರ್ಮಿಕರ ಮೇಲೆ ಹಿಂಸಾತ್ಮಕ ಜನಾಕ್ರೋಶ ವ್ಯಕ್ತವಾಗಿತ್ತು.
ಗುಜರಾತ್ನಲ್ಲಿನ ಬಿಹಾರ ವಲಸೆ ಕಾರ್ಮಿಕರಿಗೆ ರಕ್ಷಣೆ ನೀಡಬೇಕೆಂದು ನಾನು ಗುಜರಾತ್ ಸಿಎಂ ಜತೆ ಮಾತನಾಡಿದ್ದೇನೆ. ನಾವು ಅವರೊಂದಿಗೆ ಸಂಪರ್ಕದಲ್ಲಿದ್ದೇವೆ; ಅವರು ಪರಿಸ್ಥಿತಿಯನ್ನು ಅವಲೋಕಿಸುತ್ತಿದ್ದಾರೆ; ಅಪರಾಧ ಮಾಡಿದವರಿಗೆ ಶಿಕ್ಷೆ ಆಗಲೇ ಬೇಕು; ಆದರೆ ಅಮಾಯಕರ ಮೇಲೆ ದೌರ್ಜನ್ಯ ನಡೆಯಕೂಡದು ಎಂದು ನಾನು ಹೇಳಿದ್ದೇನೆ ಎಂದು ಎಎನ್ಐ ಜತೆಗೆ ಮಾತನಾಡುತ್ತಾ ಬಿಹಾರ ಸಿಎಂ ನಿತೀಶ್ ಕುಮಾರ್ ಹೇಳಿದರು.